ತಾಯೆ ನಿನ್ನ ಮಡಿಲಲಿ

ತಾಯೆ ನಿನ್ನ ಮಡಿಲಲಿ
ಕಣ್ಣ ತೆರೆವ ಕ್ಷಣದಲಿ
ಸೂತ್ರವೊಂದು ಬಿಗಿಯಿತಮ್ಮ
ಸಂಬಂಧದ ನೆಪದಲಿ

ಆಕಸ್ಮಿಕವೇನೋ ತಿಳಿಯೆ
ನಿನ್ನ ಕಂದನಾದುದು,
ಆಕಸ್ಮಿಕ ಹೇಗೆ ನಿನ್ನ
ಪ್ರೀತಿ ನನ್ನ ಗೆದ್ದುದು?
ಗುಣಿಕೆ ಮಣಿದು ನಾನು ನಿನ್ನ ಚರಣತಳಕೆ ಬಿದ್ದುದು?

ಇಲ್ಲಿ ಹರಿವ ಪುಣ್ಯ ಜಲ
ಕಣ್ಣ ತೊಳೆವ ಹಸಿರ ಕುಲ
ಮಣ್ಣಿನಿಂದ ಹೂರಟ ಗಂಧ
ನನ್ನ ಬದುಕ ತೆರದವು;
ಮೈಯ ಎಲ್ಲ ಕಣಕಣದಲು ನಿನ್ನ ಋಣವ ಬರೆದವು

ಇತಿಹಾಸಕು ಹಳೆಯ ನಿನ್ನ
ಪರಂಪರಗೆ ಹೂಡಿ ನನ್ನ,
ಸೊನ್ನಯಾದ ಮಗುವಿಗೊಂದು
ಸಣ್ಣ ಪಾಲು ನೀಡಿದೆ;
ನಿನ್ನ ಹಿರಿಯ ಕಂದರಿರುವ ಎಡೆಗೆ ತಂದು ನಿಲಿಸಿದೆ.
*****

One thought on “0

Leave a Reply to sunder raj v Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸುರತಕ್ಕೊಂದು ಸೋಪಾನ
Next post ವಿದ್ಯಾರ್ಥಿ ಸುಖನಿದ್ರೆ

ಸಣ್ಣ ಕತೆ

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

cheap jordans|wholesale air max|wholesale jordans|wholesale jewelry|wholesale jerseys