ಹಾರಲಿ ಹೃದಯ!

ಹಾರಲಿ ಎನ್ನಯ ಹೃದಯವು ಬೀಸಿ
ಭೂಮಿಯನೇ ಒಡೆದೂ, ಅಹ್ವಾ ಇಹವನ್ನೇ ಒಗೆದು
ಭೂಮಿಯ ಭೇದಿಸಿ, ಗಗನವ ಛೇದಿಸಿ
ಸತ್ಯದಲೀ ಮಿಂದೂ; ಓಹೋ ಹೊಸ ವಿಶ್ವವ ತಂದು

ಮನಸಿನ ಓಟದಿ, ಮಿಂಚಿನ ನೋಟದಿ
ಗಗನವನೇ ಇಣಕಿ; ಅಬ್ಬಾ ತಾರೆಗಳಾ ಕೆಣಕಿ
ಈಶ್ವರನಾದ್ಭುತ ತಾಂಡವ ನಾಟ್ಯದಿ
ಸರ್ವದೊಳು ದುಡಕಿ; ನಾನೇ ನಿಜವನ್ನೇ ಹುಡುಕಿ

ಚಲ್ಲುವ ಕೈಗಳ ಅದ್ಭುತ ಮಾಟದಿ
ನೀರೊಳು ಪ್ರಳಯವ ಜಗದೊಳು ರೌದ್ರವ ನಾಮಾಡಿ
ಓಡುವ ನವಿರಿನ ಕಾಲ್ಗಳ ಆಟದಿ
ಕ್ಷಿತಿಜಕ್ಕೇ ಓಡಿ ; ಬಿಡದೇ ಸಂಜೆಯ ಸೂರ್ಯನ ಕಾಡಿ

ಗಿರಿಶೃಂಗಗಳ ಸರ್ರನೆ ಕೀಳುತ
ಜಗವನ್ನೇ ಜಗಿದು; ಓಹೋ ಸಾಗರವನೇ ಕುಡಿದು
ಬರ್ರನೆ ಸರ್ರನೆ ಏರುತ ಹಾರುತ
ವಿಶ್ವವನೇ ಮರೆದು; ವೀರ ಸತ್ಯದೊಳು ಬೆರೆದು

ನರಕದ ಮಧ್ಯದಿ ನಾಕವ ಕಟ್ಟುತ
ಸತ್ಯವನೇ ಬಿತ್ತಿ; ಸವಿಯ ಶಾಂತಿಯನ್ನೇ ಎತ್ತಿ
ಕಲ್ಲನು ಕೆತ್ತುತ; ಶಿವರೂಪಾಗುತ
ಸತ್ಯದ ಮುತ್ತನು ಹುಡುಕುತೆ ಕೂಡುವೆ ಚಿತ್ಸ್ಯಕ್ತಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಲಾಮು
Next post ಪ್ರತ್ಯಕ್ಷ

ಸಣ್ಣ ಕತೆ

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…