ಹಾಗೆ ಸುಮ್ಮನೆ

ಆತುರದಿಂದ ಮತ್ತೆ ಹಾತೊರೆಯುತ್ತದೆ.
ಜೀವ ಒಂದು ಪರಿಶುದ್ಧ ಪ್ರೀತಿಗೆ
ಬೇಡುವದಿಲ್ಲ ಏನನ್ನು ಯಾವುದನ್ನೂ
ಅದನ್ನು ಹಂಚಬೇಕು ಹಾಗೆ ಸುಮ್ಮನೆ

ಮಾನ ಅಪಮಾನಗಳ ಹಂಗಿಲ್ಲ
ರಾಧೆ ಮೀರಾರಿಗೆ ಸತ್ಯದ ಹೊಳವಿನಲಿ
ಸರ್ವಶಕ್ತ ಒಲವೇ ನಂಬುಗೆ
ಜಗದ ಬೆಳಕು ಪ್ರತಿಫಲಿಸಲಿ ಹಾಗೆ ಸುಮ್ಮನೆ

ಯೋಚನೆ ಆಲೋಚನೆಗಳ ಆಗರ
ಒಳ ಮನಸ್ಸಿನಲಿ ಹಾದಿ ನಿರ್ಮಿಸಿ
ದಾರಿ ಸವೆಯುತ್ತಾಳೆ ಸೀತೆ ಪ್ರೀತಿಯಲಿ
ರಾಮಾಯಣ ಬೆಳೆಯುತ್ತದೆ ಹಾಗೆ ಸುಮ್ಮನೆ.

ಪ್ರೀತಿ ಇರುವಲ್ಲಿ ಭೀತಿ ಇರದೇ
ಪರಿಶುದ್ಧ ಗಂಗೆ ಹರಿಯುತ್ತಾಳೆ
ಎಲ್ಲಾ ಕ್ರಿಯೆಗಳು ಶಕ್ತಿಗಳು ಒಂದುಗೂಡಿ
ಮಹಾ ಸಮುದ್ರವಾಗುತ್ತದೆ ಹಾಗೆ ಸುಮ್ಮನೆ.

ಪ್ರೀತಿ ನದಿ ಕಡಲು ನಂಬಿಕೆ
ಮನಸ್ಸು ಯೋಚನೆಗಳ ಒಳಗೂಡಿ
ಜಾತ್ರೆಯಲಿ ತೇರು ಎಳೆಯುತ್ತದೆ.
ಎಲ್ಲ ಒಂದುಗೂಡಿದ ಬದುಕು ಅರಳುತ್ತದೆ ಹಾಗೆ ಸುಮ್ಮನೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಯಾವುದ ನೆನೆಯಲಿ, ಯಾವುದ ಬಿಡಲಿ?
Next post ದಾಸವಾಳ

ಸಣ್ಣ ಕತೆ

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

  • ರಾಜಕೀಯ ಮುಖಂಡರು

    ಪ್ರಕರಣ ೧೦ ಆವಲಹಳ್ಳಿಯಲ್ಲಿ ನಡೆದ ಉಪಾಧ್ಯಾಯರ ಸಂಘದ ಸಭೆ ರೇಂಜಿನಲ್ಲೆಲ್ಲ ದೊಡ್ಡ ಜಾಗಟೆಯನ್ನು ಬಾರಿಸಿದಂತಾಯಿತು. ಅದರ ಕಾರ್ಯಕಲಾಪಗಳು, ಔತಣದ ವೈಖರಿ, ಇನ್ಸ್ಪೆಕ್ಟರು ಸಲಿಗೆಯಿಂದ ಉಪಾಧ್ಯಾಯರೊಡನೆ ಮಿಳಿತರಾಗಿ ಅವರ… Read more…

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…