ಹಾಗೆ ಸುಮ್ಮನೆ

ಆತುರದಿಂದ ಮತ್ತೆ ಹಾತೊರೆಯುತ್ತದೆ.
ಜೀವ ಒಂದು ಪರಿಶುದ್ಧ ಪ್ರೀತಿಗೆ
ಬೇಡುವದಿಲ್ಲ ಏನನ್ನು ಯಾವುದನ್ನೂ
ಅದನ್ನು ಹಂಚಬೇಕು ಹಾಗೆ ಸುಮ್ಮನೆ

ಮಾನ ಅಪಮಾನಗಳ ಹಂಗಿಲ್ಲ
ರಾಧೆ ಮೀರಾರಿಗೆ ಸತ್ಯದ ಹೊಳವಿನಲಿ
ಸರ್ವಶಕ್ತ ಒಲವೇ ನಂಬುಗೆ
ಜಗದ ಬೆಳಕು ಪ್ರತಿಫಲಿಸಲಿ ಹಾಗೆ ಸುಮ್ಮನೆ

ಯೋಚನೆ ಆಲೋಚನೆಗಳ ಆಗರ
ಒಳ ಮನಸ್ಸಿನಲಿ ಹಾದಿ ನಿರ್ಮಿಸಿ
ದಾರಿ ಸವೆಯುತ್ತಾಳೆ ಸೀತೆ ಪ್ರೀತಿಯಲಿ
ರಾಮಾಯಣ ಬೆಳೆಯುತ್ತದೆ ಹಾಗೆ ಸುಮ್ಮನೆ.

ಪ್ರೀತಿ ಇರುವಲ್ಲಿ ಭೀತಿ ಇರದೇ
ಪರಿಶುದ್ಧ ಗಂಗೆ ಹರಿಯುತ್ತಾಳೆ
ಎಲ್ಲಾ ಕ್ರಿಯೆಗಳು ಶಕ್ತಿಗಳು ಒಂದುಗೂಡಿ
ಮಹಾ ಸಮುದ್ರವಾಗುತ್ತದೆ ಹಾಗೆ ಸುಮ್ಮನೆ.

ಪ್ರೀತಿ ನದಿ ಕಡಲು ನಂಬಿಕೆ
ಮನಸ್ಸು ಯೋಚನೆಗಳ ಒಳಗೂಡಿ
ಜಾತ್ರೆಯಲಿ ತೇರು ಎಳೆಯುತ್ತದೆ.
ಎಲ್ಲ ಒಂದುಗೂಡಿದ ಬದುಕು ಅರಳುತ್ತದೆ ಹಾಗೆ ಸುಮ್ಮನೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಯಾವುದ ನೆನೆಯಲಿ, ಯಾವುದ ಬಿಡಲಿ?
Next post ದಾಸವಾಳ

ಸಣ್ಣ ಕತೆ

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

  • ವಿಷಚಕ್ರ

    "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

cheap jordans|wholesale air max|wholesale jordans|wholesale jewelry|wholesale jerseys