ಆದಿಬಸವ ಅನಾದಿಯಿಂದಲು
ಮೇದಿನಿಗಿಳಿದು ಬಂದ ಚೋದ್ಯ ||ಪ||
ಶೋಧಿಸಿ ನಗರ ಕಲ್ಯಾಣದಿ ಕಲಿಯುಗ ವಿನೋ-
ದದಿ ಸಲುಹಿದ ಶಿವನಾರಾಧ್ಯ ||೧||
ಸರಳು ಜಪಾಂಗುಲಿ ಕಿರಿಬೆರಳು ನೋಸಲಲಿ
ಧರಿಸಿ ಮರಣ ಗೆಲಿವುದು ಚೋದ್ಯ ||೨||
ಕರಚಿತ್ಕಳ ಪಂಚಾಕ್ಷರ ಸ್ತುತಿಸಿದಿ ನೀ
ನೆರಳು ರುದ್ರಾಕ್ಷಿ ವೃಕ್ಷದ ಮಧ್ಯ ||೩||
ಪೊಡವಿಯೊಳಧಿಕ ಭಕ್ತರ ಮನಸನ
ಒಲಿಸಿ ನುಡಿದಿಹಮ ಚೋದ್ಯ ||೪||
ಒಡೆಯ ಶಿಶುನಾಳಧೀಶನಲ್ಲೆ
ಅಡಗಿರ್ಪ ಗ್ರಾಮ ಸುಖದಿ ||೫||
* * * *
Latest posts by ಶಿಶುನಾಳ ಶರೀಫ್ (see all)
- ಆಶಮಾಡಿ ಪಾಶಕ ಬಿದ್ದಿತೋ ಚಿಗರಿ - April 22, 2013
- ನವಾಬಿ ಮಲ್ಲಿಗಿ ಹೂವಿನ ಗಜರಾ - April 17, 2013
- ಭೂಪಾರದೊಳಗೆ ಮದೀನಶಹರದೊಳು - April 15, 2013