ನನ್ನ ಮಕ್ಕಳು

ಇವರು ನಮ್ಮ ಮಕ್ಕಳು ನೋಡಿ
ಮನೆತುಂಬಾ ಕೈಯಿಟ್ಟಲ್ಲಿ ಕಾಲಿಟ್ಟಲ್ಲಿ
ಲಲ್ಲೆಗರೆವ ಮಕ್ಕಳು
ಬರೀ ಕೈಹಿಡಿದರೆ ಸಾಲದು
ಎದೆಗಪ್ಪಿಕೋ ಎನ್ನುತ್ತವೆ-ಅಷ್ಟು ಮಾಡಿದರೆ
ಅಲ್ಲಿಂದ ತಲೆ ಮೇಲೆತ್ತಿಕೋ ಎನ್ನುತ್ತವೆ

ಕೆಲವು ಗುಲಾಬಿ, ಸೇಬುಗಳಂತೆ
ಕಂಡವರ ಕಣ್ಣು ಸೆಳೆಯುತ್ತವೆ
ಕೆಲವು ಸುಲಿದ ಬಾಳೆಹಣ್ಣಿನಂತೆ
ಒಲಿವ ಹೆಣ್ಣಿನಂತೆ ಮನವನಪ್ಪುತ್ತವೆ
ಕೆಲವು ರೊಚ್ಚೆ ಹಿಡಿದು ಕಿಚಕಿಚ ತಲೆತಿನ್ನುತ್ತವೆ
ಕೆಲವೆಲ್ಲರ ಕೈಲಾಡುವ ಚೆಂಡುಗಳಂತುಂಡಾಡಿಗಳು
ಆಡಿ ಆಡಿ ಮೈ ಕೈ ತರಚಿಕೊಂಡು
ಚಿಂದಿ ಮಂದಾಗಿ ಮೂಲೆ ಹಿಡಿಯುವವು
ಚಿಕಿತ್ಸೆಗೆ ಮೈತೆರೆದುಕೊಂಡು
ಕೆಲವು ಮಹಾರಾಜ-ರಾಣಿಯರ ಜರ್ಬಿನಿಂದ
ಎಲ್ಲರ ಕಣ್ಣು ಮುಜರೆಗಳಿಂದ ಬೀಗುತ್ತ
ಯಾರ ಕೈಗೂ ನಿಲಕದಷ್ಟೆತ್ತರ
ಸಿಂಹಾಸನದಲ್ಲಾಸೀನವಾಗುತ್ತವೆ

ಇವರನ್ನೆಲ್ಲಾ ನಾನೇ ಹಡೆದಿರುವೆನೆಂದೀರಿ ಮತ್ತೆ
ಕುಟುಂಬ ಯೋಜನೆಯಲ್ಲಾದೇನು ಕತ್ತೆ
ಎಲ್ಲೆಲ್ಲೋ ಹುಟ್ಟಿ ಬಂದು ಬಿದ್ದಿವೆ ನನ್ನ ಮಡಿಲಲ್ಲಿ
ನಾನು ಜತನವಾಗಿ ಸಾಕುವ ಮಕ್ಕಳಿವರು
ಯಾರವಾದರೇನು ನನ್ನ ಕರುಳಿಗಂಟಿ
ರಕ್ತ ಕಣ ಕಣಗಳಾಗಿ ಬೆರೆತು ಹೋಗಿವೆ
ಇವರು ಬೇರೆಯವರಲ್ಲಿ ದುಡಿದು ಬಂದು
ಸೋತು ಮುಖ ಬಾಡಿಸಿಕೊಂಡು ಕೂತಾಗ
ಕಂಡ ನನ್ನ ಕಣ್ಣು ಕೆಂಡವಾಗುತ್ತವೆ
ಮೈತಟ್ಟಿ ಮೂಕವಾಗಿ ರೋದಿಸಿ
ಕಟುಕ ಕರುಳುಗಳನ್ನು ಬೈದುಕೊಂಡು
ಸಮಾಧಾನ ಮಾಡಿಕೊಳ್ಳುತ್ತೇನೆ
ಅವುಗಳು ಮಾಡುವ ಮೌನಾರೋಪಣೆಗಳನ್ನು ಕೇಳಿ ಸುಮ್ಮನೆ
ಸಾಧ್ಯವಾದಷ್ಟು ಬೆಚ್ಚಗೆ ತಟ್ಟಿ ಮಲಗಿಸುತ್ತೇನೆ
(೩-೭-೭೫)
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ರೇಮ
Next post ಸೂರ್ಯ ದೇವರೇ

ಸಣ್ಣ ಕತೆ

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

cheap jordans|wholesale air max|wholesale jordans|wholesale jewelry|wholesale jerseys