ಕೈ ಗಡಿಯಾರ

ನನ್ನ ಕೈಗಡಿಯಾರದ ಹಸಿರು ಹೂತೋಟದಲ್ಲಿ
ದಿವಸಗಳ ಮೊಗ್ಗುಗಳು ಅರಳುತ್ತವೆ
ಸೆಕೆಂಡು ನಿಮಿಷ ಗಂಟೆಗಳ ದುಂಬಿಗಳು ಸುತ್ತು
ಮುತ್ತು ಮಧುರ ಆಘಾತಕ್ಕೆ
ಪದವಾಗಿ ಹಿತವಾಗಿ

ಲೆಕ್ಕಕ್ಕೆ ಸಿಕ್ಕದ ನಾನಾ
ಬಣ್ಣದ ಹಕ್ಕಿಗಳು ಬಂದು
ಹೂವುಗಳ ಅಡಿಗೆ ತಲೆಮರೆಸಿ
ಹಾಡಲಾರಂಭಿಸುತ್ತವೆ
ಕೂಜನದ ಅನುರಣನ
ವಿತ್ವದ ವಿಸ್ತಾರಕ್ಕೆ
ಹನ್ನೆರಡು ಬರಿಯ ಲೆಕ್ಕಕ್ಕೆ

ಗೋಪಿಕಾ ಸ್ತ್ರೀಯರು
ಮುದ್ದು ಕೃಷ್ಣನ ಹುಡುಕುತ್ತ
ನಂದಗೋಕುಲ ಅರಸಿದ್ದಾರೆ
ಈ ಗೋಪಿಕೆಯರ ಹಾಡಲಾಗದ ಹಾಡು
ನಿನ್ನ ಚಿಕ್ಕ ಜಗತ್ತಿನ ಜೀವಸ್ವರ

ಈ ದೃಶ್ಯದ ವರ್ತಮಾನದಾಚೆಯ
ಕಾಲನ ಕುದುರೆಯ ಖರಪುಟದ ಸಪ್ಪಳ
ನನ್ನ ಕಿವಿಯನ್ನು ಭೇದಿಸುತ್ತಿದೆ
ಅದು ತಳ್ಳುತ್ತಿದೆ ನನ್ನನ್ನು
ಅನಂತದಾಚೆಯ ಆತೀತ
ವಾಸ್ತವದ ಸತ್ಯಕ್ಕೆ –
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪರಿಸರ ಮತ್ತು ಸಸ್ಯಗಳು-ಪರಿಸರ ಮಾಲಿನ್ಯ ತಡೆಗಟ್ಟುವ ಸಸ್ಯಗಳು
Next post ಕಾಲ 1

ಸಣ್ಣ ಕತೆ

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

cheap jordans|wholesale air max|wholesale jordans|wholesale jewelry|wholesale jerseys