Home / ಕವನ / ಅನುವಾದ / ಹಂಸಗಳ ಹಿಂಡು

ಹಂಸಗಳ ಹಿಂಡು

ಶರತ್ಕಾಲದ ಚೆಲುವ ಹೊದ್ದು ನಿಂತಿವೆ ಮರ
ಕಾಡುದಾರಿಗಳೆಲ್ಲ ಒಣಗಿವೆ;
ಕಾರ್‍ತಿಕದ ಸಂಜೆಬೆಳಕಲ್ಲಿ ಮಿಂಚುವ ನೀರು
ಶಾಂತ ಆಗಸವನ್ನು ಪ್ರತಿಫಲಿಸಿದೆ;
ಬಂಡಗಳ ನಡುವೆ ಮಡುನಿಂತ ನೀರಿನ ಮೇಲೆ
ಐವತ್ತೊಂಬತ್ತು ಹಂಸ ತೇಲಿವೆ.

ನಾನು ಮೊದಲೆಣಿಕೆ ಮಾಡಿದ್ದು ನೆನಪಿದೆ, ಅದು
ಹತ್ತೊಂಬತ್ತು ಶರದೃತುಗಳಷ್ಟು ಹಿಂದೆ.
ಕಂಡೆ, ಇದೊ ಎಣಿಸಿಯೇ ಬಿಟ್ಟೆ ಎನ್ನುವ ಮುಂಚೆ
ಥಟ್ಟನೇರಿ ಸವಾರಿ, ಹಾರಿಬಿಟ್ಟವು ಅಂಚೆ,
ಮೊರೆವ ರೆಕ್ಕೆಯ ಬೀಸಿ ಮುರಿದ ಬೃಹದಾಕಾರ
ವೃತ್ತ ಚಿತ್ರಗಳಾಗಿ ಹರಡಿ.

ಪರಿಭಾವಿಸಿದ್ದೆ ಆ ಉಜ್ವಲ ಜೀವಿಗಳ ಹಿಂದೆ
ಘಾಸಿಗೊಂಡಿದೆ ಈಗ ಹೃದಯ.
ಮೊದಲ ಸಲ ಸಂಜೆಬೆಳಕಲ್ಲಿ ಈ ದಡದಲ್ಲಿ
ನಿಂತು ತಲೆಮೇಲೆ
ಹಕ್ಕಿ ರೆಕ್ಕೆಯ ಗಂಟೆಬಡಿತ ಆಲಿಸಿ, ಆಹ!
ನಡೆದಿದ್ದೆ ಹಗುರಾಗಿ ಆಗ,
ಎಲ್ಲ ಬದಲಾಗಿದೆ ಈಗ

ದಣಿಯದಿವೆ ಈ ಪ್ರಣಯ ಜೋಡಿಗಳು ಈಗಲೂ
ಸ್ನೇಹ ಶೀತಳ ತರಂಗಿಣಿಯ ಬಗೆದೀಜುತ್ತ,
ಗಾಳಿಯಲ್ಲೇರುತ್ತ,
ಮುಪ್ಪು ಹೃದಯಕ್ಕೆ ಎಂದೆಂದೂ ತಾಗದಿರುತ್ತ;
ಎಲ್ಲಿ ಹಾರಲಿ ಅವು, ಆರದಿವೆ ಅವಕ್ಕೆ ರತಿಯುದ್ರೇಕ ಇಲ್ಲವೇ
ಗೆದ್ದು ಮೀರುವ ತವಕ,
ನಿಂತ ನೀರಿನ ಮೇಲೆ ಶಾಂತ ತೇಲಿವೆ ಹಕ್ಕಿ
ಏನು ಮೋಹಕ, ಎಷ್ಟು ಗೂಢ!
ಮುಂದೆಂದೊ ಒಂದು ದಿನ ಈ ಹಂಸ ಸಂಕುಲ
ಹಾರಿಹೋಯಿತೆ ಎಂದು ಚಿಂತಿಸುವ ಹೊತ್ತಲ್ಲಿ
ಯಾವ ಕೊಳದಲ್ಲಿ ಸರೋವರದ ತಡಿಯಲ್ಲಿ
ಯಾವ ಜೊಂಡುಗಳಲ್ಲಿ ತಂಗಿರುವುದೋ ಇದು
ಯಾರ ಕಣ್ಣಿಗೆ ಹಬ್ಬವಾಗಿ ನಲಿದಿರುವುದೋ!
*****
ಮೂಲ: ವಿಲಿಯಂ ಬಟ್ಲರ್ ಏಟ್ಸ್

ಕೂಲೆ ಉದ್ಯಾನ ಲೇಡಿ ಗ್ರೆಗರಿಯ ಮನೆಗೆ ಸೇರಿದ್ದು. ಏಟ್ಸ್ ಅಲ್ಲಿಯ ಕೊಳದಲ್ಲಿ ಹಂಸದ ಹಿಂಡೊಂದನ್ನು ನೋಡುತ್ತಾನೆ. ಹತ್ತೊಂಬತ್ತು ವರ್‍ಷಗಳಷ್ಟು ಹಿಂದೆ ಅಲ್ಲಿಯೇ, ಅಂಥದೇ ದೃಶ್ಯವನ್ನು ನೋಡಿದ್ದು ಅವನಿಗೆ ನೆನಪಾಗುತ್ತದೆ. ಆಗ ಅವನು ಯುವಕನಾಗಿದ್ದ; ಪ್ರೇಮದಲ್ಲಿದ್ದ; ಕುಣಿಯುವ ಹೃದಯ ಹೊತ್ತು ನಡೆದಿದ್ದ. ಈಗ ಅವನ ಮೇಲೆ ಕಾಲ ದಾಳಿಮಾಡಿದೆ, ಪ್ರೇಮ ಭ್ರಮೆಯೆನಿಸಿ ಕುಸಿದಿದೆ, ಹೃದಯ ಭಾರವಾಗಿದೆ. ಹಂಸಗಳು ಮಾತ್ರ ಆಗಿನಷ್ಟೇ ಚೆಲುವಾಗಿ, ಚುರುಕಾಗಿ, ಸಡಗರದ ಜೋಡಿಗಳಾಗಿ ಉಳಿದಿವೆ.

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...