ಮುಗಿಲ ಮಲ್ಲಿಗಿ ಅರಳಿತ್ತ
ಬೆಳ್ಳಿ ಬಣ್ಣ ಹರಡುತ ರಾತ್ರಿ ಕರಿಯನೇರಿ ಬರುತ್ತಿತ್ತ
ಬೆಳ್ಳಿಮೋಡ ಚದುರಿ ಬೆಳ್ಳಿ ಚುಕ್ಕಿ ಮೂಡಿ
ಬಾನು ಪುಷ್ಪಗಳ ರಮ್ಯ ತಾಣವಾಗಿತ್ತ
ಪ್ರಾಣಿ ಪಕ್ಷಿ ಗೂಡಸೇರತಿರಲು
ಜಗಕೆ ನಿಶೆಯು ದಾದಿಯಾಗಿ ಬಂದಿತ್ತ
ಮೊದಲ ರಾತ್ರಿ ಸಂಗಾತಿ ಕಂಡು ಸ್ಪರ್ಶಕೆ
ಮನ ಮಿಡುಕಿ ಪ್ರಶ್ನೆಯೊಂದು ಕಾಡುತಿತ್ತ
ನಿದ್ದೆಯೊಳಗಿದ್ದ ಕಾಗೆಗಳ ಮ್ಯಾಗ
ಶರವೇಗದಲಿ ಬಂದೊಂದು ಗೂಗಿ ಕುಕ್ಕುತಿತ್ತ
ಗೌಡರ ಆಳೊಂದು ಕರೆಯಲು
ಉಸಿರು ಮೆತ್ತಗಾಗಿ ಸ್ವಾತಂತ್ರ್ಯ ಕೈ ಬಿಟ್ಟಿತ್ತ
ಕಟು ರೋಷ ಉಕ್ಕಿ
ಕಣ್ಣು ಕೆಂಪಡರಿ
ಹಲ್ಲು ಕಟ-ಕಟನೆ ಕಡಿದಿತ್ತ
ಆದರೇನು ಮಾಡಲಿ
ನಾನಾಗಿದ್ದೆ ಜೀತದೆತ್ತ
*****
Related Post
ಸಣ್ಣ ಕತೆ
-
ಕಲ್ಪನಾ
ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…
-
ಧನ್ವಂತರಿ
ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…
-
ನಿಂಗನ ನಂಬಿಗೆ
ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…
-
ಹನುಮಂತನ ಕಥೆ
ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…
-
ಗದ್ದೆ
ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…