ಯಾಕೆ ನಿಂತಿ ಬೆರ್‍ಚಪ್ಪ

ಯಾಕೆ ನಿಂತಿ ಬೆರ್‍ಚಪ್ಪ
ಹೊಲದ ಮಧ್ಯೆ ಇಂತು ನೀನು
ಯಾರು ಬೆದರುತಾರೆ ನಿನಗೆ
ಬೆದರಲ್ಲ ನಾವಂತು

ತಲೆಗೆ ಒಡಕು ಮಡಕೆ ಕಟ್ಟಿ
ಕಣ್ಣಿಗೆ ಸುಣ್ಣದ ಬೊಟ್ಟನಿಟ್ಟಿ
ಕಿವಿ ಬಾಯಿ ತೂತು
ಕೈ ಮಾತ್ರ ದಾಯ ಬಾಯ
ಮೂಗು ಮಂಗಮಾಯ

ಯಾರದೀ ಹರಕಂಗಿ
ಯಾರದೀ ದೊಗಲೆ ಚಡ್ಡಿ
ಯಾರದೀ ಕೆಂಪು ರುಮಾಲು
ಕಾಲೊಂದು ಬಿದಿರ ಕೋಲು
ಕಾದು ಕೂತಿಯಲ್ಲೊ ನೀನು
ಕಬ್ಬಕ್ಕಿ ಸಾಲು

ರಾತ್ರಿ ಕನಸ ಹೇಳೆಲೊ
ಹಗಲು ಕನಸ ಹೇಳೆಲೊ
ನಿನ್ನೆ ಕಂಡ ರಾಜಕುಮಾರಿ
ಇಂದು ಎಲ್ಲಿ ಹೋದಳೋ
ನಿನ್ನೆ ನೀನು ಉಂಡಿದ್ದ
ಅರಮನೆಯೂ ಮಾಯವೋ

ನೀನಲ್ಲಿ ಬಿಸಿಲಿಗೆ
ನಾವಿಲ್ಲಿ ತಣಲಿಗೆ
ನೀನಲ್ಲಿ ಮಂಜಿಗೆ
ನಾವಿಲ್ಲಿ ಬೆಚ್ಚಗೆ

ಒಂಟಿಯ ಮಾಡಿದರಲ್ಲೊ ನಿನ್ನ
ನಂಟರಿಲ್ಲದಾದರೋ
ನಂಟರಿಲ್ಲ ಬಂಟರಿಲ್ಲ
ಮೆಂಟೆಯೆ ಗತಿಯಾಯಿತಲ್ಲ

ಆದರು ಅಪ್ಪಾ ಕೋಪ ಮಾಡದೆ
ನಮ್ಮ ಭತ್ತ ಕಾಯೊ ಅಪ್ಪ
ಭತ್ತ ಕಾಯೋ ರಾಗಿ ಕಾಯೊ
ರಾಗಿ ಕಾಯೊ ಜ್ವಾಳ ಕಾಯೊ
ಜ್ವಾಳ ಕಾಯೊ ಬಾಳುವೆ ಕಾಯೊ
ಸ್ವಾಮಿ ನಮ್ಮ ಬೆರ್‍ಚಪ್ಪ
ಮನೆ ತುಂಬಿದಾಗ ನಿನ್ನ
ಮನತುಂಬ ಮರೆತೆವೋ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಚಿಕುಹೂ
Next post ಉಮರನ ಒಸಗೆ – ೨೩

ಸಣ್ಣ ಕತೆ

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…