Home / ಕವನ / ಕವಿತೆ / ಯಾಕೆ ನಿಂತಿ ಬೆರ್‍ಚಪ್ಪ

ಯಾಕೆ ನಿಂತಿ ಬೆರ್‍ಚಪ್ಪ

ಯಾಕೆ ನಿಂತಿ ಬೆರ್‍ಚಪ್ಪ
ಹೊಲದ ಮಧ್ಯೆ ಇಂತು ನೀನು
ಯಾರು ಬೆದರುತಾರೆ ನಿನಗೆ
ಬೆದರಲ್ಲ ನಾವಂತು

ತಲೆಗೆ ಒಡಕು ಮಡಕೆ ಕಟ್ಟಿ
ಕಣ್ಣಿಗೆ ಸುಣ್ಣದ ಬೊಟ್ಟನಿಟ್ಟಿ
ಕಿವಿ ಬಾಯಿ ತೂತು
ಕೈ ಮಾತ್ರ ದಾಯ ಬಾಯ
ಮೂಗು ಮಂಗಮಾಯ

ಯಾರದೀ ಹರಕಂಗಿ
ಯಾರದೀ ದೊಗಲೆ ಚಡ್ಡಿ
ಯಾರದೀ ಕೆಂಪು ರುಮಾಲು
ಕಾಲೊಂದು ಬಿದಿರ ಕೋಲು
ಕಾದು ಕೂತಿಯಲ್ಲೊ ನೀನು
ಕಬ್ಬಕ್ಕಿ ಸಾಲು

ರಾತ್ರಿ ಕನಸ ಹೇಳೆಲೊ
ಹಗಲು ಕನಸ ಹೇಳೆಲೊ
ನಿನ್ನೆ ಕಂಡ ರಾಜಕುಮಾರಿ
ಇಂದು ಎಲ್ಲಿ ಹೋದಳೋ
ನಿನ್ನೆ ನೀನು ಉಂಡಿದ್ದ
ಅರಮನೆಯೂ ಮಾಯವೋ

ನೀನಲ್ಲಿ ಬಿಸಿಲಿಗೆ
ನಾವಿಲ್ಲಿ ತಣಲಿಗೆ
ನೀನಲ್ಲಿ ಮಂಜಿಗೆ
ನಾವಿಲ್ಲಿ ಬೆಚ್ಚಗೆ

ಒಂಟಿಯ ಮಾಡಿದರಲ್ಲೊ ನಿನ್ನ
ನಂಟರಿಲ್ಲದಾದರೋ
ನಂಟರಿಲ್ಲ ಬಂಟರಿಲ್ಲ
ಮೆಂಟೆಯೆ ಗತಿಯಾಯಿತಲ್ಲ

ಆದರು ಅಪ್ಪಾ ಕೋಪ ಮಾಡದೆ
ನಮ್ಮ ಭತ್ತ ಕಾಯೊ ಅಪ್ಪ
ಭತ್ತ ಕಾಯೋ ರಾಗಿ ಕಾಯೊ
ರಾಗಿ ಕಾಯೊ ಜ್ವಾಳ ಕಾಯೊ
ಜ್ವಾಳ ಕಾಯೊ ಬಾಳುವೆ ಕಾಯೊ
ಸ್ವಾಮಿ ನಮ್ಮ ಬೆರ್‍ಚಪ್ಪ
ಮನೆ ತುಂಬಿದಾಗ ನಿನ್ನ
ಮನತುಂಬ ಮರೆತೆವೋ
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...