ಮಂಡೇಲನ ಬಂಧುಗಳು

ಸೂರ್ಯನಿಗೆ ಛತ್ರಿ
ಅಡ್ಡಿ ಹಿಡಿದರೇನಂತೆ?
ಸೂರ್ಯ ಹುಟ್ಟಲೇ ಇಲ್ಲವೆ?
ಎದೆಯಲ್ಲಿ ಮಾನವ ಕಾವ್ಯ
ಕೈಯಲ್ಲಿ ಖಡ್ಗ ಹಿಡಿದರೇನು
ಮಾನವೀಯತೆ ಮೊಳಗಲಾರದೆ?

ನಾಝಿಗಳ ಜೈಲಿನಲ್ಲಿ
ಸರಳು ಬಂದಿಖಾನೆಯಲಿ
ಎದೆ ಝಲ್ಲೆನಿಸುವ ವಾಸ್ತವಗಳು
ಅನುಭವ ಉಲಿಯುತ್ತಿದ್ದಾರೆ
ಮಂಡೇಲನ ಬಂಧುಗಳು.

ನರಳಿದ ನಕ್ಷತ್ರ ಮಂಡಲಗಳು
ದೌರ್ಜನ್ಯಗಳ ನಡುವೆ
ದಿಗ್ಧಂಧನಗಳ ಮಧ್ಯದಲಿ
ಬಸವಳಿದ ಹೂವುಗಳವರು
ಪ್ರೀತಿಗೆ ದುಂಬಾಲು ಬಿದ್ದವರು.

ಮೋಡ ಘನಿಗಟ್ಟಿ ಹನಿಯೊಡೆದು
ಹುಟ್ಟಿದರು ಸಾವಿರಾರು
ಶ್ರಮಜೀವಿ ಬಂಧುಗಳು.
ತೊಟ್ಟಿಕ್ಕಿ ನೆಲಕ್ಕುರುಳಿದರೆ ಸಾಕು
ಹನಿಗೊಂದು ನದಿಯಾಗುವವರು.

ಸೂರ್ಯ ಹುಟ್ಟುತ್ತಾನೆ ಇಲ್ಲಿ
ಕತ್ತಲೆಯ ಭಯ ಕಾಡದು.
ಬೆಳಕಾಗಿ ಜೀವಂತವಾಗಿದ್ದಾರವರು
ಮಂಡೇಲನ ಬಂಧುಗಳಿನ್ನೂ!
ಅವರು ಮಂಡೇಲನ ಬಂಧುಗಳು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಡವರ ನವಣೆ
Next post ಚಿಕುಹೂ

ಸಣ್ಣ ಕತೆ

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…