ಮುಗಿಲ ಮಲ್ಲಿಗಿ ಅರಳಿತ್ತ
ಬೆಳ್ಳಿ ಬಣ್ಣ ಹರಡುತ ರಾತ್ರಿ ಕರಿಯನೇರಿ ಬರುತ್ತಿತ್ತ
ಬೆಳ್ಳಿಮೋಡ ಚದುರಿ ಬೆಳ್ಳಿ ಚುಕ್ಕಿ ಮೂಡಿ
ಬಾನು ಪುಷ್ಪಗಳ ರಮ್ಯ ತಾಣವಾಗಿತ್ತ
ಪ್ರಾಣಿ ಪಕ್ಷಿ ಗೂಡಸೇರತಿರಲು
ಜಗಕೆ ನಿಶೆಯು ದಾದಿಯಾಗಿ ಬಂದಿತ್ತ
ಮೊದಲ ರಾತ್ರಿ ಸಂಗಾತಿ ಕಂಡು ಸ್ಪರ್ಶಕೆ
ಮನ ಮಿಡುಕಿ ಪ್ರಶ್ನೆಯೊಂದು ಕಾಡುತಿತ್ತ
ನಿದ್ದೆಯೊಳಗಿದ್ದ ಕಾಗೆಗಳ ಮ್ಯಾಗ
ಶರವೇಗದಲಿ ಬಂದೊಂದು ಗೂಗಿ ಕುಕ್ಕುತಿತ್ತ
ಗೌಡರ ಆಳೊಂದು ಕರೆಯಲು
ಉಸಿರು ಮೆತ್ತಗಾಗಿ ಸ್ವಾತಂತ್ರ್ಯ ಕೈ ಬಿಟ್ಟಿತ್ತ
ಕಟು ರೋಷ ಉಕ್ಕಿ
ಕಣ್ಣು ಕೆಂಪಡರಿ
ಹಲ್ಲು ಕಟ-ಕಟನೆ ಕಡಿದಿತ್ತ
ಆದರೇನು ಮಾಡಲಿ
ನಾನಾಗಿದ್ದೆ ಜೀತದೆತ್ತ
*****
Related Post
ಸಣ್ಣ ಕತೆ
-
ದೊಡ್ಡವರು
ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…
-
ಕಳಕೊಂಡವನು
ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…
-
ಅಂತರಂಗ ಶುದ್ಧಿ ಬಹಿರಂಗ ಶುದ್ಧಿ
ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…
-
ಗುಲ್ಬಾಯಿ
ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…
-
ಎರಡು…. ದೃಷ್ಟಿ!
ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…