ಸ್ವಾತಂತ್ರ್ಯ ಕೈ ಬಿಟ್ಟಿತ್ತ

ಮುಗಿಲ ಮಲ್ಲಿಗಿ ಅರಳಿತ್ತ
ಬೆಳ್ಳಿ ಬಣ್ಣ ಹರಡುತ ರಾತ್ರಿ ಕರಿಯನೇರಿ ಬರುತ್ತಿತ್ತ
ಬೆಳ್ಳಿಮೋಡ ಚದುರಿ ಬೆಳ್ಳಿ ಚುಕ್ಕಿ ಮೂಡಿ
ಬಾನು ಪುಷ್ಪಗಳ ರಮ್ಯ ತಾಣವಾಗಿತ್ತ
ಪ್ರಾಣಿ ಪಕ್ಷಿ ಗೂಡಸೇರತಿರಲು
ಜಗಕೆ ನಿಶೆಯು ದಾದಿಯಾಗಿ ಬಂದಿತ್ತ
ಮೊದಲ ರಾತ್ರಿ ಸಂಗಾತಿ ಕಂಡು ಸ್ಪರ್ಶಕೆ
ಮನ ಮಿಡುಕಿ ಪ್ರಶ್ನೆಯೊಂದು ಕಾಡುತಿತ್ತ
ನಿದ್ದೆಯೊಳಗಿದ್ದ ಕಾಗೆಗಳ ಮ್ಯಾಗ
ಶರವೇಗದಲಿ ಬಂದೊಂದು ಗೂಗಿ ಕುಕ್ಕುತಿತ್ತ
ಗೌಡರ ಆಳೊಂದು ಕರೆಯಲು
ಉಸಿರು ಮೆತ್ತಗಾಗಿ ಸ್ವಾತಂತ್ರ್ಯ ಕೈ ಬಿಟ್ಟಿತ್ತ
ಕಟು ರೋಷ ಉಕ್ಕಿ
ಕಣ್ಣು ಕೆಂಪಡರಿ
ಹಲ್ಲು ಕಟ-ಕಟನೆ ಕಡಿದಿತ್ತ
ಆದರೇನು ಮಾಡಲಿ
ನಾನಾಗಿದ್ದೆ ಜೀತದೆತ್ತ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬೋನಸ್
Next post ಒಂದೇ ದೋಣಿಯ ಪ್ರಯಾಣಿಕರು

ಸಣ್ಣ ಕತೆ

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…