ಬಾಳು ಬವಣೆ

ಬದುಕು ಬೆಳಕಾಗಲಿಲ್ಲ
ಮುಳ್ಳಿಗೆ ಸಿಕ್ಕಿಕೊಂಡ ಬಟ್ಟೆ
ಮೂರಾಬಟ್ಟೆ
ಅಂದಿನ ಆ ಕಾತುರ ನಿಟ್ಟುಸಿರು
ಹಂಬಲಿಕೆ ಇಂದಿಲ್ಲ
ಸವಿಗನಸಿಗೂ ಇಂದು ಬರ
ನಿನ್ನೆ ಕಟ್ಟಿದ ಕಲ್ಪನೆಯ
ಹಾಯಿ ದೋಣಿಗಳ ಸಾಲು
ಇಂದು ಪಟ್ಟ ಬಿಚ್ಚಿ ಹೋಗಿ
ದೆಸೆ ಕಾಣದೆ ದಿಕ್ಕಾಪಾಲು

ಮೋಡ ಚದುರಿ ಬಿಸಿಲು
ಇಣುಕುವ ಹೊತ್ತು
ಮೈಯೊಡ್ಡಿ ತಣಿಯುವ ಕ್ಷಣ
ಕಾರ್ಮೋಡಗಳು ಮುತ್ತಿ ಮುಸುರಿದ್ದೇಕೆ?

ನಲ್ಲ ಇಂದು ಅಂದಿನಂತಿಲ್ಲ
ಬಳಲಿಕೆಯ ಬೇಗೆ
ಅಗಲಿಕೆಯ ದಾಗ
ಪಾಠ ಕಲಿಸಿದೆ ಬದುಕು
ಬೇವು ಬೆಲ್ಲ, ಇಲ್ಲ ಬೆಲ್ಲ
ಬರಿಯ ಬೇವೆ ಎಲ್ಲಾ
ಅದರಕ್ಕೆ ಕಹಿ, ಉದರಕ್ಕೆ ಸಿಹಿ
ಹೌದಲ್ಲ, ಕಾನನದೊಳಗೂ ಬದುಕ
ಚಿಗುರಿಸುವ ಧೈರ್ಯ ಬಂದುದ್ದು
ಸುಳ್ಳಲ್ಲ – ಬಾಳು ಬೆಳಕಾಗಲಿಲ್ಲ ಸತ್ಯ
ಅಂಧಕಾರಕ್ಕೆ ಹುಡುಕುತ್ತಿದ್ದೇನೆ ಚಿಮಣಿ ನಿತ್ಯ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಕ್ಕಿ ಆರಿಸುವಾಗ
Next post ಪ್ರತಿಮೆ

ಸಣ್ಣ ಕತೆ

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

cheap jordans|wholesale air max|wholesale jordans|wholesale jewelry|wholesale jerseys