ಮರುಭೂಮಿ

ವರುಷ ವರುಷಕೆ ಮಳೆಯು ಬಾರದಿರೆ ನೊಗಗುಂದಿ
ಬಿಸಿಲಿಗೆದೆಯೆಲ್ಲ ನಿಗಿನಿಗಿಯಾಗಿ ಮಲಗಿಹುದು
ಮರುಭೂಮಿ ಕಂರಗತ ಪ್ರಾಣ ತಾ ಹಲುಬಿಹುದು
ಗಂಗೋದಕವ ಬೇಡಿ ಸಸ್ಯಗಳು ಕಳೆಗುಂದಿ
ನಿಶ್ಚೇಷ್ಟವಿರೆ ಹೆಮ್ಮರಗಳು ನಿಂತಿವೆ ಹೊಂದಿ
ನೂರಾರು ಕೆಳಗಿರುವ ಜೀವನವ, ತೊಲಗಿಹುದು
ಜೀವಕಳೆ ಪಕ್ಷಿ ಚಾತಕವಕ್ಷಿಯನಬಹುದು.
ಇಂಥ ಮರುಳ್ನೆಲ ಜಗದಿ ವಿರಲವೆನವರು ಮಂದಿ!

ದೇವದೇವನ ಕರುಣೆ ಮಳೆಯಾಗಿ ಬಿದ್ದೊಡನೆ
ಮೊಳಕೆಯೊಡೆಯುವುದು ಮರುಭೂಮಿಯೊಳು
ಕಣಕಣದಿ
ನೆಲೆಗೊಂಡ ರಣರಣಿಕೆ ಮಾಯವಾಗಲು, ವೃಕ್ಷ
ಚಿಗಿಯುವವು ಪಕ್ಷಿಸಂಕುಳವೊರೆಯುವದು ಮುದದಿ
ಸುಗ್ಗಿ ಗಿಹ ಜಾತಕವ ಪ್ರಾಣ ತಿರುಗಿತು ಮೃಡನೆ
ಬುವಿಯೊಳವತರಿಸಿದೊಲು – ತೆರೆಯೆ ಮನದ ಗವಾಕ್ಷ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮುದ್ದು ಕಂದನ ವಚನಗಳು : ಮೂರು
Next post ಮೂರ್‍ಖರಾಗದೇ ಉಳಿವೆವೇ ?

ಸಣ್ಣ ಕತೆ

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…