Home / ಲೇಖನ / ಇತರೆ / ಮೂರ್‍ಖರಾಗದೇ ಉಳಿವೆವೇ ?

ಮೂರ್‍ಖರಾಗದೇ ಉಳಿವೆವೇ ?

ಪ್ರಿಯ ಸಖಿ,

ಜ್ಞಾನಪೀಠ ಪ್ರಶಸ್ತಿ ವಿಜೇತರಾದ ಲೇಖಕ ಯು. ಆರ್. ಅನಂತಮೂರ್‍ತಿಯವರು ಸಂವಾದಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ, ನಮ್ಮ ದೇಶದ ದುರಂತವೆಂದರೆ ಜನರಿಗೆ ಮೊದಲು ದೂರದರ್‍ಶನವನ್ನು ನೀಡಿದ್ದು! ಮೊದಲು ನಾವು ಜನರಿಗೆ ವೈಚಾರಿಕ ಪ್ರಜ್ಞೆಯನ್ನು, ವಿವೇಚನೆಯನ್ನು ಮೂಡಿಸುವಂತಹ ಉತ್ತಮ ಶಿಕ್ಷಣವನ್ನು ನೀಡಬೇಕಿತ್ತು. ಆದರೆ ಯೋಚನೆ ಮಾಡದೇ ಅಂಧರಾಗಿ ಮೂರ್‍ಖರ ಪೆಟ್ಟಿಗೆಯನ್ನು ನೀಡಿಬಿಟ್ಟಿದ್ದೇವೆ ಎಂದು ವಿಷಾದಿಸಿದರು.

ದೂರದರ್‍ಶನ ಹಾವಳಿಯಿಂದ ಇಂದು ಮನೆಗಳಲ್ಲಿ ಆರೋಗ್ಯ ಪೂರ್‍ಣ ಮಾತುಕತೆ, ಚರ್‍ಚೆ, ನಗುಹರಟೆಗಳು ಹೆಚ್ಚು ಕಡಿಮೆ ನಿಂತೇ ಹೋಗಿವೆ. ಕಿರಿಯರಲ್ಲಿ ಬುದ್ಧಿ ಕೌಶಲ್ಯವನ್ನು ಹೆಚ್ಚಿಸುತ್ತಿದ್ದ ನಮ್ಮ ಅನೇಕ ಒಳಾಂಗಣ ಆಟಗಳಾದ ಚೌಕಾಬಾರ, ಪಗಡೆ, ಅಳುಗುಳಿ ಮನೆ, ಹುಲಿ ಕುರಿ, ಇತ್ಯಾದಿ ಆಟಗಳು ಎಂದೋ ಮೂಲೆ ಸೇರಿವೆ. ಇಂದಿನ ಪೀಳಿಗೆಯ ಮಕ್ಕಳು ಬಹುಶಃ ಈ ಆಟಗಳ ಹೆಸರನ್ನೂ ಕೇಳಲಿಲ್ಲವೇನೋ? ಜೊತೆಗೆ ದೂರದರ್‍ಶನ ಈ ಪೀಳಿಗೆಯವರಿಂದ ಅತ್ಯಂತ ಮಹತ್ವದ ಓದಿನ ಹವ್ಯಾಸವನ್ನೇ ನುಂಗಿಬಿಟ್ಟಿದೆ. ಅಗಾಧ ಸಾಹಿತ್ಯ ಭಂಡಾರವನ್ನು ಹೊಂದಿರುವ ಕನ್ನಡ ಸಾಹಿತ್ಯ ಕ್ಷೇತ್ರ, ಓದುವವರು ಕಡಿಮೆಯಾಗಿ ದಿನದಿಂದ ದಿನಕ್ಕೆ ಸೊರಗುತ್ತಿದೆ. ನಮ್ಮ ಸಂಸ್ಕೃತಿಯ ಒಂದು ಭಾಗವಾಗಿರುವ ಜನಪದರಿಂದ ಬಳುವಳಿ ಬಂದ ಒಗಟು, ಗಾದೆ, ನುಡಿಗಟ್ಟು, ಒಡಪಿನ ಹಾಡುಗಳು ಮಕ್ಕಳಿಗಿರಲಿ ದೊಡ್ಡವರಿಗೇ ಬೇಡವಾಗುತ್ತಿದೆ.

ಕ್ರೌರ್‍ಯ, ಹಿಂಸೆ, ಅನೈತಿಕ ಸಂಬಂಧಗಳನ್ನು ವೈಭವೀಕರಿಸುವ ಚಲನಚಿತ್ರ, ದೂರದರ್‍ಶನ ಧಾರಾವಾಹಿಗಳು ನೂರೆಂಟು ಚಾನೆಲ್ಗಳಲ್ಲಿ ಹರಿದು ಬರುವ ಹಾಡು ಕುಣಿತಗಳು ನಮ್ಮ ಸಂಸ್ಕೃತಿಯ ಔನ್ನತ್ಯವನ್ನು ಕ್ರಮೇಣ ನುಂಗಿಹಾಕುತ್ತಿವೆ. ಒಂದಾದ ನಂತರ ಒಂದು ಹರಿದು ಬರುವ ಧಾರಾವಾಹಿಗಳನ್ನು ನೋಡುತ್ತಾ ಅಮೂಲ್ಯ ಸಮಯ, ಕಲೆಗಾರಿಕೆ, ಹವ್ಯಾಸಗಳು, ಹೊಸದನ್ನು ಆವಿಷ್ಕರಿಸುವ ಮನೋಭಾವವನ್ನು ನಮ್ಮ ಪೀಳಿಗೆಯವರು ಕಳೆದುಕೊಳ್ಳುತ್ತಿರುವುದು ಅರಿವಿಗೆ ಬರುವುದು ಯಾವಾಗ ? ಧಾರಾವಾಹಿಗಳು ಬರುತ್ತಿರುವಾಗ ಮನೆಗೆ ಬಂದ ಅತಿಥಿ, ಸ್ನೇಹಿತರನ್ನು ಮಾತನಾಡಿಸುವ ತಾಳ್ಮೆ, ವ್ಯವಧಾನವೂ ಮನೆಯವರಿಗೆ ಇರುವುದಿಲ್ಲ. ಈ ನಿಟ್ಟಿನಲ್ಲಿ ಯೋಚಿಸಿದಾಗ ಸಾಮಾಜಿಕ ಸಮ್ಮಿಲನದ ಮೂಲ ಕೊಂಡಿಯೂ ಈ ಮೂಲಕ ಕಳೆದುಕೊಳ್ಳುತ್ತಿರುವುದು ತಿಳಿಯುತ್ತದೆ. ದೂರದರ್‍ಶನದ ನಿರಂತರ ನೋಡುವಿಕೆಯಿಂದ ಇತ್ತೀಚಿನ ದಿನಗಳಲ್ಲಿ ನೇತ್ರ ಸಂಬಂಧಿ ರೋಗಗಳು ಹೆಚ್ಚಿರುವುದನ್ನು, ಅವರ ಮುಂದೆ ಕುಳಿತು ಏಕಾಗ್ರತೆಯಿಲ್ಲದೆ ಊಟ, ತಿಂಡಿ ಮಾಡುವುದರಿಂದ ಜೀರ್‍ಣ ಕ್ರಿಯೆಗೆ ಸಂಬಂಧಿಸಿದ ರೋಗಗಳು ಹೆಚ್ಚಾಗುತ್ತಿರುವುದನ್ನು ಸಂಶೋಧನೆಗಳು ದೃಢಪಡಿಸಿವೆ.

ಸಖಿ, ದೂರದರ್‍ಶನದ ಕಪಿಮುಷ್ಠಿಗೆ ಸಿಲುಕಿರುವ ನಮ್ಮ ಸಮುದಾಯ ನಾವು ಊಹಿಸಲೂ ಸಾಧ್ಯವಿಲ್ಲದಂತಹ ಮಾನಸಿಕ ದಾಸ್ಯಕ್ಕೆ ಒಳಗಾಗಿಬಿಟ್ಟಿದೆ. ಇಂದು ಕಣ್ಣಿಗೆ ಕಾಣದಂತಹ ಆದರೆ ನಾಳೆ ನಮ್ಮ ಸುಂದರ ಭವಿಷ್ಯವನ್ನು ಸದ್ದಿಲ್ಲದಂತೆ ನಿರ್‍ನಾಮ ಮಾಡಬಲ್ಲ ಶಕ್ತಿ ದೂರದರ್‍ಶನಕ್ಕಿದೆ. ಹಾಗೆಂದು ಅದರಲ್ಲಿ ಬರುತ್ತಿರುವ ಒಳಿತು, ಮಾಹಿತಿ, ತಿಳುವಳಿಕೆ, ಅವಶ್ಯವಿರುವಷ್ಟು ಆರೋಗ್ಯ ಪೂರ್‍ಣವಾದ ಮನರಂಜನೆಯನ್ನಷ್ಟೇ ತೆಗೆದುಕೊಂಡು ಮಿಕ್ಕಿದ್ದನ್ನು ಬಿಟ್ಟು ಬಿಡುವ ವಿವೇಚನೆ ನಮ್ಮಲ್ಲಿದೆಯೇ ಎಂಬುದೇ ಮುಖ್ಯ ಪ್ರಶ್ನೆ. ಸಖಿ, ಮೂರ್‍ಖರ ಪೆಟ್ಟಿಗೆಯನ್ನು ನೋಡುತ್ತಾ ಮೂರ್‍ಖರೂ ಆಗಬಹುದು, ಅದರಲ್ಲಿ ಬೇಕಷ್ಟನ್ನು ನೋಡಿ ಜಾಣರೂ ಆಗಬಹುದು. ಆಯ್ಕೆ ನಮ್ಮ ಮುಂದಿದೆ. ಮೂರ್‍ಖರಾಗದೇ ಉಳಿಯೋಣ ಆಲ್ಲವೇ ?
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...