Home / ಕವನ / ಕವಿತೆ / ಬುದ್ಧಿ ಚಿತ್ತ ಹಮ್ಮುಗಳೇ

ಬುದ್ಧಿ ಚಿತ್ತ ಹಮ್ಮುಗಳೇ

ಬುದ್ಧಿ ಚಿತ್ತ ಹಮ್ಮುಗಳೇ, ವಿಷಯೇಂದ್ರಿಯ ಬಿಮ್ಮುಗಳೇ
ನನ್ನ ಹೊತ್ತು ಗಾಳಿಯಲ್ಲಿ ಜಿಗಿದೋಡುವ ಗುಮ್ಮಗಳೇ!
ಓಡಬೇಡಿ ಕೆಡವಬೇಡಿ ಅಶ್ವಗಳೇ ನನ್ನನು
ಎಸೆಯಬಹುದೆ ಕೊರಕಲಲ್ಲಿ ರಥದಿ ಕುಳಿತ ದೊರೆಯನು?

ಸಾವಧಾನ ಎಳೆದು ಸಾಗಿ ಹೊಣೆಯನರಿತು ರಥವನು
ವಶವಾಗದೆ ಸವಿಯಬೇಕು ದಾರಿಬದಿಯ ಚೆಲುವನು
ಪ್ರೀತಿಸಿಯೂ ಅಣ್ಣ ತಮ್ಮ ಹೆತ್ತು ಹೊತ್ತ ತಾಯಿಯ
ಬಲಿಯಾಗದೆ ಅರಿಯಬೇಕು ಮಾಟಗಾತಿ ಮಾಯೆಯ

ಎಂಥ ಲೋಕ, ಏನು ಚೆಲುವು, ಯಾರದು ಈ ಸೃಷ್ಟಿಯು
ಎದುರು ಬಾರನೇಕೆ ಇದನು ರೂಪಿಸಿದಾ ಸ್ವಾಮಿಯು?
ಹೀಗೆ ನಮ್ಮ ಸೆಳೆವುದೇಕೆ, ಮೋಹದಲ್ಲಿ ಹಿಡಿವುದೇಕೆ
ಗೆಲ್ಲು ಇದನು ಎನುವುದೇಕೆ, ಏನು ಅವನ ಲೀಲೆಯು?

ಗಡಿಗೆಯೊಳಗೆ ಸೆರೆಯಾದ ನೀರಿನಂತೆ ನಾನು
ಹೊರಗೆ ಹರಿದು ಸೇರಬೇಕು ಜನ್ಮವಿತ್ತ ಕಡಲನು,
ಇಲ್ಲಿ ಇರುವ ತನಕ ಎಲ್ಲ ಲೋಕ ನಿಯಮ ನಡೆಸಿ
ಮಿತಿಯಳಿದ ಅನಂತನಾಗಬೇಕು ಕಡೆಗೆ ನಾನು.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...