ಬುದ್ಧಿ ಚಿತ್ತ ಹಮ್ಮುಗಳೇ

ಬುದ್ಧಿ ಚಿತ್ತ ಹಮ್ಮುಗಳೇ, ವಿಷಯೇಂದ್ರಿಯ ಬಿಮ್ಮುಗಳೇ
ನನ್ನ ಹೊತ್ತು ಗಾಳಿಯಲ್ಲಿ ಜಿಗಿದೋಡುವ ಗುಮ್ಮಗಳೇ!
ಓಡಬೇಡಿ ಕೆಡವಬೇಡಿ ಅಶ್ವಗಳೇ ನನ್ನನು
ಎಸೆಯಬಹುದೆ ಕೊರಕಲಲ್ಲಿ ರಥದಿ ಕುಳಿತ ದೊರೆಯನು?

ಸಾವಧಾನ ಎಳೆದು ಸಾಗಿ ಹೊಣೆಯನರಿತು ರಥವನು
ವಶವಾಗದೆ ಸವಿಯಬೇಕು ದಾರಿಬದಿಯ ಚೆಲುವನು
ಪ್ರೀತಿಸಿಯೂ ಅಣ್ಣ ತಮ್ಮ ಹೆತ್ತು ಹೊತ್ತ ತಾಯಿಯ
ಬಲಿಯಾಗದೆ ಅರಿಯಬೇಕು ಮಾಟಗಾತಿ ಮಾಯೆಯ

ಎಂಥ ಲೋಕ, ಏನು ಚೆಲುವು, ಯಾರದು ಈ ಸೃಷ್ಟಿಯು
ಎದುರು ಬಾರನೇಕೆ ಇದನು ರೂಪಿಸಿದಾ ಸ್ವಾಮಿಯು?
ಹೀಗೆ ನಮ್ಮ ಸೆಳೆವುದೇಕೆ, ಮೋಹದಲ್ಲಿ ಹಿಡಿವುದೇಕೆ
ಗೆಲ್ಲು ಇದನು ಎನುವುದೇಕೆ, ಏನು ಅವನ ಲೀಲೆಯು?

ಗಡಿಗೆಯೊಳಗೆ ಸೆರೆಯಾದ ನೀರಿನಂತೆ ನಾನು
ಹೊರಗೆ ಹರಿದು ಸೇರಬೇಕು ಜನ್ಮವಿತ್ತ ಕಡಲನು,
ಇಲ್ಲಿ ಇರುವ ತನಕ ಎಲ್ಲ ಲೋಕ ನಿಯಮ ನಡೆಸಿ
ಮಿತಿಯಳಿದ ಅನಂತನಾಗಬೇಕು ಕಡೆಗೆ ನಾನು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಿಂಚುಳ್ಳಿ ಬೆಳಕಿಂಡಿ – ೩೫
Next post ಖಾಲಿ ಆಕಾಶದ ಮೌನ

ಸಣ್ಣ ಕತೆ

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

cheap jordans|wholesale air max|wholesale jordans|wholesale jewelry|wholesale jerseys