Home / ಕವನ / ಕವಿತೆ / ಖಾಲಿ ಆಕಾಶದ ಮೌನ

ಖಾಲಿ ಆಕಾಶದ ಮೌನ

ಬೆಳಕು
ಹರಿದ ಮೇಲೆ
ಸೂರ್ಯನಿಗೆ ಎದುರಾಗಿ
ಒಬ್ಬೊಂಟಿ ’ವಾಕಿಂಗು’
ಪೂರ್ವದ ಹಳ್ಳಿಯೆಡೆಗೆ

ಮಿರ ಮಿರ ಮಿಂಚುವದು
ಗುಳಿಬಿದ್ದ ಕರಿಟಾರು ರಸ್ತೆ
ಸೂರ್ಯಕಿರಣದಿ ತೊಯ್ದು
ಬಿದ್ದು
ಮೊಣಕಾಲು ಒಡೆದುಕೊಂಡ
ಹುಡುಗ

ರಸ್ತೆ ಹಾಕಿದ್ದು
ನಿನ್ನೆ ಮೊನ್ನೆ

ಹಾದಿಯ ಇಬ್ಬದಿಗೆ ನಿಂತ
ಲೈಟು ಕಂಬಗಳು
ಎಲ್ಲಿಂದ ಎಲ್ಲಿಗೋ ಹರಿದ
ತಂತಿಗಳು
ಬೆಳಕು ಯಾರಿಗೆ?
ಸುಳಿ ಕಡಿದ
ನೆಡು ತೋಪು ಕೆಳಗೆ
ಚಿಗುರು ಚಾಚುವದೆಲ್ಲಿಗೆ?

ಅನ್ನವರಸಿ
ಹಕ್ಕಿ
ಗೂಡು ಬಿಟ್ಟಂತೆ
ಹಿಂಡು ಹಿಂಡು ಹಳ್ಳಿಯಿಂದ
’ಡಿಲ್ಲಿ’ ಕಡೆಗೆ
ಕೂಲಿಯರಸಿ ಕೂಸು
ಕುನ್ನಿಯ ಜೊತೆ ಅವ್ವಂದಿರು
ಅಪ್ಪಂದಿರು

ಸೈಕಲ್ಲು ಹ್ಯಾಂಡಲಿಗೆ ತೂಗುಬಿದ್ದ
ನಾಟಿಕೋಳಿ
ಈಗಲೂ ಮೊಸರು ಮಾರುವ
ಮುದುಕಿ
ಕಟುಕ ಇಮಾಂಸಾಬಿ
ಯ ಲೂನಾ ಏರಿ ಹೊರಟ

ಮರಿ ಕುರಿ
ನಿತ್ಯ ಜೀವನದ ’ಕ್ಯಾನ್‌ವಾಸ್’
ನೊಳಗಣ ಮಾಸದ ಬಣ್ಣಗಳು

ಬಿಸಿಯೂಟದ ಆಸೆಗೆ
ಶಾಲೆಯತ್ತ ಪಾಟಿಚೀಲ ಹೊತ್ತು
ಬರಿಗಾಲ ಹುಡುಗರು
ಚಿತ್ತ ಹೊರಳುವದು ಭಾರಹೊತ್ತ
ಕತ್ತೆಯತ್ತ

ಇಲ್ಲ
ಮೊದಲಿನಂತೆ ಇಲ್ಲಿ
ಕಾಗೆ ಗುಬ್ಬಿ ಕಬ್ಬಕ್ಕಿ

ಹೊಲದ ಯಾವ ಮೂಲೆಯಲ್ಲೂ
ಯರೆನೆಲದ ಬಿರುಕಿಗೆ
ಖಾಲಿ ಆಕಾಶದ ಮೌನವೇ
ಉತ್ತರ

ನಡೆದದ್ದು ಸಾಕು
ಹಿಂತಿರುಗಬೇಕು
ಬಂದ ದಾರಿಯಲೆ ತಲೆ
ಸುಡುತ್ತಿತ್ತು ಬೆನ್ನೇರಿದ ಬಿಸಿಲು
ಮೇಲೇರಿ ಬಣ್ಣ ಬದಲಿಸಿದ್ದ
ಸೂರ್ಯ
*****

Tagged:

Leave a Reply

Your email address will not be published. Required fields are marked *

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...

ಒಂದೊಂದೆ ನೀರ ಹನಿಗಳು ಮುಳಿಹುಲ್ಲಿನ ಮಾಡಿನಿಂದ ಜಿನುಗಿ ತೊಟ್ಟಿಕ್ಕಿ ಆತ ಹೊದ್ದ ಕಂಬಳಿಯ ನೆನೆಸಿ ಒಳನುಸುಳಿ ಆತನ ಕುಂಡೆಯ ಭಾಗವೆಲ್ಲಾ ಒದ್ದೆಯಾದ ಕಾರಣವೋ ಹೊತ್ತಿಗೆ ಮುಂಚೆ ಎಂದೂ ಏಳದ ಹೊಲಿಯಪ್ಪ ಅಂದು ದಡಬಡಿಸಿ ಎದ್ದ. ಆತ ಮಲಗಿದ ಕಡೆಯಲ್ಲಿ ನೆಲವೆಲ್ಲಾ ಅದಾಗಲೇ ಹಸಿಯಾಗಿತ್ತಲ್ಲ. ಹ...

ಅದು ರಾಷ್ಟೀಯ ಹೆದ್ದಾರಿ ಎನ್.ಎಚ್.೧೭. ಎಡೆಬಿಡದ ವಾಹನಗಳ ಸಂಚಾರ. ಮಧ್ಯೆ ಮಧ್ಯೆ ಅಪಾಯಕಾರಿ ತಿರುವುಗಳು. ಹೊಸಬರಿಗೆ ಅಪರಿಚಿತರಿಗೆ ಮುಂದೆ ತಿರುವು ಇದೆ ಎಂದು ತಿಳಿಯಲಾಗದ, ಅವಘಡವೇನಾದರೂ ಸಂಭವಿಸಿದರೆ ನೇರವಾಗಿ ಪ್ರಪಾತದ ಪಾಲಾಗುವ ಭಯವನ್ನು ಹೊಂದಿದ ಭೀಕರ ತಿರುವುಗಳನ್ನು ಹೊಂದಿದ ವಕ...