Home / ಕವನ / ಕವಿತೆ / ಖಾಲಿ ಆಕಾಶದ ಮೌನ

ಖಾಲಿ ಆಕಾಶದ ಮೌನ

ಬೆಳಕು
ಹರಿದ ಮೇಲೆ
ಸೂರ್ಯನಿಗೆ ಎದುರಾಗಿ
ಒಬ್ಬೊಂಟಿ ’ವಾಕಿಂಗು’
ಪೂರ್ವದ ಹಳ್ಳಿಯೆಡೆಗೆ

ಮಿರ ಮಿರ ಮಿಂಚುವದು
ಗುಳಿಬಿದ್ದ ಕರಿಟಾರು ರಸ್ತೆ
ಸೂರ್ಯಕಿರಣದಿ ತೊಯ್ದು
ಬಿದ್ದು
ಮೊಣಕಾಲು ಒಡೆದುಕೊಂಡ
ಹುಡುಗ

ರಸ್ತೆ ಹಾಕಿದ್ದು
ನಿನ್ನೆ ಮೊನ್ನೆ

ಹಾದಿಯ ಇಬ್ಬದಿಗೆ ನಿಂತ
ಲೈಟು ಕಂಬಗಳು
ಎಲ್ಲಿಂದ ಎಲ್ಲಿಗೋ ಹರಿದ
ತಂತಿಗಳು
ಬೆಳಕು ಯಾರಿಗೆ?
ಸುಳಿ ಕಡಿದ
ನೆಡು ತೋಪು ಕೆಳಗೆ
ಚಿಗುರು ಚಾಚುವದೆಲ್ಲಿಗೆ?

ಅನ್ನವರಸಿ
ಹಕ್ಕಿ
ಗೂಡು ಬಿಟ್ಟಂತೆ
ಹಿಂಡು ಹಿಂಡು ಹಳ್ಳಿಯಿಂದ
’ಡಿಲ್ಲಿ’ ಕಡೆಗೆ
ಕೂಲಿಯರಸಿ ಕೂಸು
ಕುನ್ನಿಯ ಜೊತೆ ಅವ್ವಂದಿರು
ಅಪ್ಪಂದಿರು

ಸೈಕಲ್ಲು ಹ್ಯಾಂಡಲಿಗೆ ತೂಗುಬಿದ್ದ
ನಾಟಿಕೋಳಿ
ಈಗಲೂ ಮೊಸರು ಮಾರುವ
ಮುದುಕಿ
ಕಟುಕ ಇಮಾಂಸಾಬಿ
ಯ ಲೂನಾ ಏರಿ ಹೊರಟ

ಮರಿ ಕುರಿ
ನಿತ್ಯ ಜೀವನದ ’ಕ್ಯಾನ್‌ವಾಸ್’
ನೊಳಗಣ ಮಾಸದ ಬಣ್ಣಗಳು

ಬಿಸಿಯೂಟದ ಆಸೆಗೆ
ಶಾಲೆಯತ್ತ ಪಾಟಿಚೀಲ ಹೊತ್ತು
ಬರಿಗಾಲ ಹುಡುಗರು
ಚಿತ್ತ ಹೊರಳುವದು ಭಾರಹೊತ್ತ
ಕತ್ತೆಯತ್ತ

ಇಲ್ಲ
ಮೊದಲಿನಂತೆ ಇಲ್ಲಿ
ಕಾಗೆ ಗುಬ್ಬಿ ಕಬ್ಬಕ್ಕಿ

ಹೊಲದ ಯಾವ ಮೂಲೆಯಲ್ಲೂ
ಯರೆನೆಲದ ಬಿರುಕಿಗೆ
ಖಾಲಿ ಆಕಾಶದ ಮೌನವೇ
ಉತ್ತರ

ನಡೆದದ್ದು ಸಾಕು
ಹಿಂತಿರುಗಬೇಕು
ಬಂದ ದಾರಿಯಲೆ ತಲೆ
ಸುಡುತ್ತಿತ್ತು ಬೆನ್ನೇರಿದ ಬಿಸಿಲು
ಮೇಲೇರಿ ಬಣ್ಣ ಬದಲಿಸಿದ್ದ
ಸೂರ್ಯ
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...