Home / ಕವನ / ಕವಿತೆ / ಖಾಲಿ ಆಕಾಶದ ಮೌನ

ಖಾಲಿ ಆಕಾಶದ ಮೌನ

ಬೆಳಕು
ಹರಿದ ಮೇಲೆ
ಸೂರ್ಯನಿಗೆ ಎದುರಾಗಿ
ಒಬ್ಬೊಂಟಿ ’ವಾಕಿಂಗು’
ಪೂರ್ವದ ಹಳ್ಳಿಯೆಡೆಗೆ

ಮಿರ ಮಿರ ಮಿಂಚುವದು
ಗುಳಿಬಿದ್ದ ಕರಿಟಾರು ರಸ್ತೆ
ಸೂರ್ಯಕಿರಣದಿ ತೊಯ್ದು
ಬಿದ್ದು
ಮೊಣಕಾಲು ಒಡೆದುಕೊಂಡ
ಹುಡುಗ

ರಸ್ತೆ ಹಾಕಿದ್ದು
ನಿನ್ನೆ ಮೊನ್ನೆ

ಹಾದಿಯ ಇಬ್ಬದಿಗೆ ನಿಂತ
ಲೈಟು ಕಂಬಗಳು
ಎಲ್ಲಿಂದ ಎಲ್ಲಿಗೋ ಹರಿದ
ತಂತಿಗಳು
ಬೆಳಕು ಯಾರಿಗೆ?
ಸುಳಿ ಕಡಿದ
ನೆಡು ತೋಪು ಕೆಳಗೆ
ಚಿಗುರು ಚಾಚುವದೆಲ್ಲಿಗೆ?

ಅನ್ನವರಸಿ
ಹಕ್ಕಿ
ಗೂಡು ಬಿಟ್ಟಂತೆ
ಹಿಂಡು ಹಿಂಡು ಹಳ್ಳಿಯಿಂದ
’ಡಿಲ್ಲಿ’ ಕಡೆಗೆ
ಕೂಲಿಯರಸಿ ಕೂಸು
ಕುನ್ನಿಯ ಜೊತೆ ಅವ್ವಂದಿರು
ಅಪ್ಪಂದಿರು

ಸೈಕಲ್ಲು ಹ್ಯಾಂಡಲಿಗೆ ತೂಗುಬಿದ್ದ
ನಾಟಿಕೋಳಿ
ಈಗಲೂ ಮೊಸರು ಮಾರುವ
ಮುದುಕಿ
ಕಟುಕ ಇಮಾಂಸಾಬಿ
ಯ ಲೂನಾ ಏರಿ ಹೊರಟ

ಮರಿ ಕುರಿ
ನಿತ್ಯ ಜೀವನದ ’ಕ್ಯಾನ್‌ವಾಸ್’
ನೊಳಗಣ ಮಾಸದ ಬಣ್ಣಗಳು

ಬಿಸಿಯೂಟದ ಆಸೆಗೆ
ಶಾಲೆಯತ್ತ ಪಾಟಿಚೀಲ ಹೊತ್ತು
ಬರಿಗಾಲ ಹುಡುಗರು
ಚಿತ್ತ ಹೊರಳುವದು ಭಾರಹೊತ್ತ
ಕತ್ತೆಯತ್ತ

ಇಲ್ಲ
ಮೊದಲಿನಂತೆ ಇಲ್ಲಿ
ಕಾಗೆ ಗುಬ್ಬಿ ಕಬ್ಬಕ್ಕಿ

ಹೊಲದ ಯಾವ ಮೂಲೆಯಲ್ಲೂ
ಯರೆನೆಲದ ಬಿರುಕಿಗೆ
ಖಾಲಿ ಆಕಾಶದ ಮೌನವೇ
ಉತ್ತರ

ನಡೆದದ್ದು ಸಾಕು
ಹಿಂತಿರುಗಬೇಕು
ಬಂದ ದಾರಿಯಲೆ ತಲೆ
ಸುಡುತ್ತಿತ್ತು ಬೆನ್ನೇರಿದ ಬಿಸಿಲು
ಮೇಲೇರಿ ಬಣ್ಣ ಬದಲಿಸಿದ್ದ
ಸೂರ್ಯ
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...