ಖಾಲಿ ಆಕಾಶದ ಮೌನ

ಬೆಳಕು
ಹರಿದ ಮೇಲೆ
ಸೂರ್ಯನಿಗೆ ಎದುರಾಗಿ
ಒಬ್ಬೊಂಟಿ ’ವಾಕಿಂಗು’
ಪೂರ್ವದ ಹಳ್ಳಿಯೆಡೆಗೆ

ಮಿರ ಮಿರ ಮಿಂಚುವದು
ಗುಳಿಬಿದ್ದ ಕರಿಟಾರು ರಸ್ತೆ
ಸೂರ್ಯಕಿರಣದಿ ತೊಯ್ದು
ಬಿದ್ದು
ಮೊಣಕಾಲು ಒಡೆದುಕೊಂಡ
ಹುಡುಗ

ರಸ್ತೆ ಹಾಕಿದ್ದು
ನಿನ್ನೆ ಮೊನ್ನೆ

ಹಾದಿಯ ಇಬ್ಬದಿಗೆ ನಿಂತ
ಲೈಟು ಕಂಬಗಳು
ಎಲ್ಲಿಂದ ಎಲ್ಲಿಗೋ ಹರಿದ
ತಂತಿಗಳು
ಬೆಳಕು ಯಾರಿಗೆ?
ಸುಳಿ ಕಡಿದ
ನೆಡು ತೋಪು ಕೆಳಗೆ
ಚಿಗುರು ಚಾಚುವದೆಲ್ಲಿಗೆ?

ಅನ್ನವರಸಿ
ಹಕ್ಕಿ
ಗೂಡು ಬಿಟ್ಟಂತೆ
ಹಿಂಡು ಹಿಂಡು ಹಳ್ಳಿಯಿಂದ
’ಡಿಲ್ಲಿ’ ಕಡೆಗೆ
ಕೂಲಿಯರಸಿ ಕೂಸು
ಕುನ್ನಿಯ ಜೊತೆ ಅವ್ವಂದಿರು
ಅಪ್ಪಂದಿರು

ಸೈಕಲ್ಲು ಹ್ಯಾಂಡಲಿಗೆ ತೂಗುಬಿದ್ದ
ನಾಟಿಕೋಳಿ
ಈಗಲೂ ಮೊಸರು ಮಾರುವ
ಮುದುಕಿ
ಕಟುಕ ಇಮಾಂಸಾಬಿ
ಯ ಲೂನಾ ಏರಿ ಹೊರಟ

ಮರಿ ಕುರಿ
ನಿತ್ಯ ಜೀವನದ ’ಕ್ಯಾನ್‌ವಾಸ್’
ನೊಳಗಣ ಮಾಸದ ಬಣ್ಣಗಳು

ಬಿಸಿಯೂಟದ ಆಸೆಗೆ
ಶಾಲೆಯತ್ತ ಪಾಟಿಚೀಲ ಹೊತ್ತು
ಬರಿಗಾಲ ಹುಡುಗರು
ಚಿತ್ತ ಹೊರಳುವದು ಭಾರಹೊತ್ತ
ಕತ್ತೆಯತ್ತ

ಇಲ್ಲ
ಮೊದಲಿನಂತೆ ಇಲ್ಲಿ
ಕಾಗೆ ಗುಬ್ಬಿ ಕಬ್ಬಕ್ಕಿ

ಹೊಲದ ಯಾವ ಮೂಲೆಯಲ್ಲೂ
ಯರೆನೆಲದ ಬಿರುಕಿಗೆ
ಖಾಲಿ ಆಕಾಶದ ಮೌನವೇ
ಉತ್ತರ

ನಡೆದದ್ದು ಸಾಕು
ಹಿಂತಿರುಗಬೇಕು
ಬಂದ ದಾರಿಯಲೆ ತಲೆ
ಸುಡುತ್ತಿತ್ತು ಬೆನ್ನೇರಿದ ಬಿಸಿಲು
ಮೇಲೇರಿ ಬಣ್ಣ ಬದಲಿಸಿದ್ದ
ಸೂರ್ಯ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬುದ್ಧಿ ಚಿತ್ತ ಹಮ್ಮುಗಳೇ
Next post ಯಾವ ಸೌಭಾಗ್ಯ ಸಮ ಈ ಚೆಲುವಿಗೆ?

ಸಣ್ಣ ಕತೆ

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…