Home / ಕವನ / ಕವಿತೆ / ಇಷ್ಟೊಂದು ದೊಡ್ಡ ಬಯಲಲ್ಲಿ

ಇಷ್ಟೊಂದು ದೊಡ್ಡ ಬಯಲಲ್ಲಿ

ಇಷ್ಟೊಂದು ದೊಡ್ಡ ಬಯಲಲ್ಲಿ
ನಾನು ಒಂದು ನಕ್ಷತ್ರ ನೀನು
ಒಂದು ನಕ್ಷತ್ರ. ನಾವಿಬ್ಬರೂ
ನಮ್ಮಿಬ್ಬರಿಗೆ ಮಾತ್ರ ಗೊತ್ತು.
ಬೆಳಕನ್ನು ಲಕ್ಕ ಮಾಡೋಣ.
ಮುಕ್ಕಾಲು ಚಂದ್ರನನ್ನು ಎಬ್ಬಿ
ಕಾಫೀ ಬಟ್ಟಲಿಗೆ ಹಾಕಿಕೊ, ತಣ್ಣಗಿರುತ್ತದೆ.

ಇಣುಕಿನೋಡು ಏನೇನು ಕಾಣುತ್ತದೆ-

ತೆಂಗಿನ ಮರಗಳು ಸುಮ್ಮನೆ ನಿಂತಿವೆ.
ಮೀನು ಕಣ್ಣಿನ ಹುಡುಗಿ
ಮಡಕೆಯಲ್ಲಿ ನೀರು ತಂದು
ಮೇಕೆಯ ಜೊತೆಯಲ್ಲಿ ಅಡುತ್ತಿದ್ದಾಳೆ.
ಬಯಲಲ್ಲಿ ಒಂದು ದನ ಮೇಯುತ್ತಿದೆ.
ಸಿಂಹವನ್ನು ಕ೦ಡರೆ ಭಯವೋ
ಚೇಳನ್ನು ಕಂಡರೆ ಭಯವೋ ?

ಚಂದ್ರ ಕರಗಿ ಹೋದನೇನು ನೋಡು.

ಹಸುವಿನಂಥವನು ನಾನು.
ನನ್ನ ಈಜು ಕೊಳಕ್ಕೆ ಬಂದ ಮೀನು
ತನ್ನ ಯಜ್ಞಕ್ಕೆ ನನ್ನ, ಬಲಿ ಏಕೆ ಬಯಸಿದ್ದು?
ಮಾತಿನ ಕುಟುಕಿಗೆ ಹೆದರಿ ನುಣುಚಿಕೊಂಡದ್ದು?

ನಿನ್ನ ಸಾಲದ ಬೆಳೆಕನಲ್ಲಿ ಅವರು ಇವರು
ನನ್ನ ಮುಖ ನೋಡಬೇಕಾಗಿಲ್ಲ.
ನನ್ನ ಸಿಂಹಾಸನಕ್ಕೆ ಮೂವತ್ತೆರಡು ಮೆಟ್ಟಲಿವೆ.
ಒಂದೊಂದು ಮೆಟ್ಟಲಿಗೂ ಒಂದೊಂದು ಬೊಂಬೆ
ನನ್ನ ಒಂದೊಂದು ಕಥೆ ಹೇಳುತ್ತದೆ, ಬಂದು ನೋಡು,
ನನ್ನ ಮನಸ್ಸಿಗೆ ಸಾವಿರ ಮುಖ ಇದೆ,
ಬೆಳಕಿಗೆ ಸಾವಿರ ದಾರಿ ಇದೆ.

ರುಚಿಯಾದ ಮಾತಿನಲ್ಲಿ ನನ್ನ ಕತೆ ಹೇಳಲಾರೆ.
ನಿನ್ನ ಭಾಷೆಯಲ್ಲಿ ನನ್ನ ಅರ್ಥ ನನ್ನ ಇಷ್ಟದ ಹಾಗೇ
ಉಳಿದೀತೇನು ?

ಬೆಳೆಗಿನ ಜಾವದ ರೈಲು ಕೂಗುತ್ತಿದೆ. ನಕ್ಷತ್ರಕ್ಕೂ
ನಕ್ಷತ್ರಕ್ಕೂ ತುಂಬ ದೂರ……….
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...