ಇಷ್ಟೊಂದು ದೊಡ್ಡ ಬಯಲಲ್ಲಿ

ಇಷ್ಟೊಂದು ದೊಡ್ಡ ಬಯಲಲ್ಲಿ
ನಾನು ಒಂದು ನಕ್ಷತ್ರ ನೀನು
ಒಂದು ನಕ್ಷತ್ರ. ನಾವಿಬ್ಬರೂ
ನಮ್ಮಿಬ್ಬರಿಗೆ ಮಾತ್ರ ಗೊತ್ತು.
ಬೆಳಕನ್ನು ಲಕ್ಕ ಮಾಡೋಣ.
ಮುಕ್ಕಾಲು ಚಂದ್ರನನ್ನು ಎಬ್ಬಿ
ಕಾಫೀ ಬಟ್ಟಲಿಗೆ ಹಾಕಿಕೊ, ತಣ್ಣಗಿರುತ್ತದೆ.

ಇಣುಕಿನೋಡು ಏನೇನು ಕಾಣುತ್ತದೆ-

ತೆಂಗಿನ ಮರಗಳು ಸುಮ್ಮನೆ ನಿಂತಿವೆ.
ಮೀನು ಕಣ್ಣಿನ ಹುಡುಗಿ
ಮಡಕೆಯಲ್ಲಿ ನೀರು ತಂದು
ಮೇಕೆಯ ಜೊತೆಯಲ್ಲಿ ಅಡುತ್ತಿದ್ದಾಳೆ.
ಬಯಲಲ್ಲಿ ಒಂದು ದನ ಮೇಯುತ್ತಿದೆ.
ಸಿಂಹವನ್ನು ಕ೦ಡರೆ ಭಯವೋ
ಚೇಳನ್ನು ಕಂಡರೆ ಭಯವೋ ?

ಚಂದ್ರ ಕರಗಿ ಹೋದನೇನು ನೋಡು.

ಹಸುವಿನಂಥವನು ನಾನು.
ನನ್ನ ಈಜು ಕೊಳಕ್ಕೆ ಬಂದ ಮೀನು
ತನ್ನ ಯಜ್ಞಕ್ಕೆ ನನ್ನ, ಬಲಿ ಏಕೆ ಬಯಸಿದ್ದು?
ಮಾತಿನ ಕುಟುಕಿಗೆ ಹೆದರಿ ನುಣುಚಿಕೊಂಡದ್ದು?

ನಿನ್ನ ಸಾಲದ ಬೆಳೆಕನಲ್ಲಿ ಅವರು ಇವರು
ನನ್ನ ಮುಖ ನೋಡಬೇಕಾಗಿಲ್ಲ.
ನನ್ನ ಸಿಂಹಾಸನಕ್ಕೆ ಮೂವತ್ತೆರಡು ಮೆಟ್ಟಲಿವೆ.
ಒಂದೊಂದು ಮೆಟ್ಟಲಿಗೂ ಒಂದೊಂದು ಬೊಂಬೆ
ನನ್ನ ಒಂದೊಂದು ಕಥೆ ಹೇಳುತ್ತದೆ, ಬಂದು ನೋಡು,
ನನ್ನ ಮನಸ್ಸಿಗೆ ಸಾವಿರ ಮುಖ ಇದೆ,
ಬೆಳಕಿಗೆ ಸಾವಿರ ದಾರಿ ಇದೆ.

ರುಚಿಯಾದ ಮಾತಿನಲ್ಲಿ ನನ್ನ ಕತೆ ಹೇಳಲಾರೆ.
ನಿನ್ನ ಭಾಷೆಯಲ್ಲಿ ನನ್ನ ಅರ್ಥ ನನ್ನ ಇಷ್ಟದ ಹಾಗೇ
ಉಳಿದೀತೇನು ?

ಬೆಳೆಗಿನ ಜಾವದ ರೈಲು ಕೂಗುತ್ತಿದೆ. ನಕ್ಷತ್ರಕ್ಕೂ
ನಕ್ಷತ್ರಕ್ಕೂ ತುಂಬ ದೂರ……….
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಿಶ್ವ ಕೂಡಲ ಸಂಗಮಾ
Next post ಬದಲಾವಣೆಯ ಅರಿವು

ಸಣ್ಣ ಕತೆ

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

cheap jordans|wholesale air max|wholesale jordans|wholesale jewelry|wholesale jerseys