ಮುದ್ದು ಕಂದನ ವಚನಗಳು : ಮೂರು

ಶರಣ
ದೊಡ್ಡ ದೀಪದ ಕೆಳಗ ಉದ್ದ ಭಾಷಣ ಬಿಗಿದು
ಚಪ್ಪಾಳಿ ಹೊಡೆಸಿದರ ಶರಣನಲ್ಲ
ಕುಡ್ಡ ದೀಪದ ಕೆಳಗ ಬಿದ್ದ ಆತ್ಮರ ಹುಡಿಕಿ
ಶಿವನ ತೋರುವ ಶರಣ ಮುದ್ದುಕಂದ

ವ್ಯಾಖ್ಯಾನ
ಬಲುದೊಡ್ಡ ಜುಟ್ಟಿನಲಿ ರುದ್ರಾಕ್ಷಿ ಸರ ಬಿಗಿದು
ವ್ಯಾಖ್ಯಾನ ಕುಟ್ಟುವವ ಶರಣನಲ್ಲ
ಹಾದಿಬೀದಿಗೆ ಬಂದು ಬಿದ್ದವರ ಬಳಿ ನಿಂದು
ಸೇವೆಗೈದವ ಶರಣ ಮುದ್ದುಕಂದ

ತ್ಯಾಗ
ಹೆಣ್ಣು ಹೊನ್ನನು ಬಿಟ್ಟೆ ಮಣ್ಣು ಕಲ್ಲನ್ನು ಬಿಟ್ಟೆ
ಬಿಟ್ಟೆನೆಂಬುವ ಭಾವ ಬಿಡಲೆ ಇಲ್ಲ
ತ್ಯಾಗ ಮಾಡಿದೆನೆಂಬ ಭಾವ ತ್ಯಾಗವ ಮಾಡು
ಇದುವೆ ಶರಣನ ಹ್ಯಾವ ಮುದ್ದುಕಂದ

ಮೋಹ
ನಾನು ನನ್ನಯ ಮನೆಯು ನನ್ನ ಹೆಂಡತಿ ಬಳಗ
ನನ್ನ ಮಕ್ಕಳ ಮೋಹ ಎಲ್ಲಿ ತನಕ
ಅವರವರ ಸಾಧನೆಗೆ ಅವರವರೆ ಆಧಾರ
ಯಾಕೆ ಹೆಣಹೊರು ಭಾರ ಮುದ್ದುಕಂದ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಿಧವೆಯರ ಸಾಮಾಜಿಕ ಸ್ಥಾನಮಾನ- ದುರಂತ ಬದುಕಿನ ವ್ಯಾಖ್ಯಾನ
Next post ಮರುಭೂಮಿ

ಸಣ್ಣ ಕತೆ

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

cheap jordans|wholesale air max|wholesale jordans|wholesale jewelry|wholesale jerseys