ಪ್ರತಿಮೆ

ಆತ ನಾಲ್ಕು ರಸ್ತೆಗಳು ಸೇರುವಲ್ಲಿ ಬಂದು ಅತ್ತ-
ಅಳುತ್ತಲೇ ಇದ್ದ. ಕಾರುಗಳು, ಬಸ್ಸುಗಳು,
ಟಾರ್ಪಲಿನ್‌ ಹೊದ್ದ ಭಾರವಾದ ಟ್ರಕ್ಕುಗಳು
ಹಾದು ಹೋಗುತ್ತಲೇ ಇದ್ದುವು.
ಎತ್ತಿನ ನಿಧಾನ ಗಾಡಿಗಳು
ಸಾಗುತ್ತಲೇ ಇದ್ದುವು.

ನಿದ್ರಿಸುವ ನಗರ ಎಚ್ಚರಾಗುತ್ತಿತ್ತು. ಮತ್ತೆ ನಿದ್ರಿಸುತ್ತಿತ್ತು
ಭಾರೀ ಕಸದ ಡಬ್ಬಿಗಳ, ಬೆದೆಯೆದ್ದ ಹಂದಿಗಳ,
ಎಲ್ಲಿಂದಲೋ ಬಂದು ಹೋಗುವ ರೈಲುಗಳ ನಡುವೆ
ತನ್ನ ನಿರಾಳ ಆಲಸ್ಯದಲ್ಲಿ ಬಿದ್ದು.

ಕಳ್ಳಿನಂಗಡಿಯಲ್ಲಿ ಕೂತವರು
ತರಕಾರಿಗೆ ಬಂದ ಹೆಂಗಸರು
ಕೆಲಸಕ್ಕೆ ಕಾಯುವ ಕೂಲಿಗಳು
ಯಾರೂ ಗಮನಿಸಲಿಲ್ಲ-

ಸುತ್ತಲೂ ಅಣಬೆಗಳು ಹುಟ್ಟುವ ತನಕ
ಲಿಲಿಹೂಗಳು ಬೆಳೆಯುವ ತನಕ
ಅರಿಯದೆ ಬಂದ ಮಳೆ, ಯಾರದೊ ನಿಟ್ಟುಸಿರ ಮೇಲಿಂದ
ಬೀಸಿದ ಗಾಳಿ, ಚಳಿಗಾಲದ ಇರುಳು
ತಟ್ಟಿಯೂ ತಟ್ಟಿದಂತಿದ್ದವನು

ಯಾರಿಗೂ ತಿಳಿಯದಲೆ ಎದ್ದು ನಿಂತಿದ್ದನೊಮ್ಮೆಲೇ
ಸಾವರಿಸಿಕೊಂಡು, ಆವರಿಸಿಕೊಂಡು
ನಿಂತು ಏನೋ ಹೇಳಹೊರಟವನು
ಹೇಳುವುದೇಕೆಂದು ತಟಸ್ಥವಾದಂತೆ
ಬಿರಿದೂ ಬಿರಿಯದ ನಗೆ
ಬಚ್ಚಿಟ್ಟ ಪ್ರತಿಯೊಬ್ಬರ ಪಾಪದಂತೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಾಳು ಬವಣೆ
Next post ನಾ ನಂಬಿದೆ

ಸಣ್ಣ ಕತೆ

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…