ಪ್ರತಿಮೆ

ಆತ ನಾಲ್ಕು ರಸ್ತೆಗಳು ಸೇರುವಲ್ಲಿ ಬಂದು ಅತ್ತ-
ಅಳುತ್ತಲೇ ಇದ್ದ. ಕಾರುಗಳು, ಬಸ್ಸುಗಳು,
ಟಾರ್ಪಲಿನ್‌ ಹೊದ್ದ ಭಾರವಾದ ಟ್ರಕ್ಕುಗಳು
ಹಾದು ಹೋಗುತ್ತಲೇ ಇದ್ದುವು.
ಎತ್ತಿನ ನಿಧಾನ ಗಾಡಿಗಳು
ಸಾಗುತ್ತಲೇ ಇದ್ದುವು.

ನಿದ್ರಿಸುವ ನಗರ ಎಚ್ಚರಾಗುತ್ತಿತ್ತು. ಮತ್ತೆ ನಿದ್ರಿಸುತ್ತಿತ್ತು
ಭಾರೀ ಕಸದ ಡಬ್ಬಿಗಳ, ಬೆದೆಯೆದ್ದ ಹಂದಿಗಳ,
ಎಲ್ಲಿಂದಲೋ ಬಂದು ಹೋಗುವ ರೈಲುಗಳ ನಡುವೆ
ತನ್ನ ನಿರಾಳ ಆಲಸ್ಯದಲ್ಲಿ ಬಿದ್ದು.

ಕಳ್ಳಿನಂಗಡಿಯಲ್ಲಿ ಕೂತವರು
ತರಕಾರಿಗೆ ಬಂದ ಹೆಂಗಸರು
ಕೆಲಸಕ್ಕೆ ಕಾಯುವ ಕೂಲಿಗಳು
ಯಾರೂ ಗಮನಿಸಲಿಲ್ಲ-

ಸುತ್ತಲೂ ಅಣಬೆಗಳು ಹುಟ್ಟುವ ತನಕ
ಲಿಲಿಹೂಗಳು ಬೆಳೆಯುವ ತನಕ
ಅರಿಯದೆ ಬಂದ ಮಳೆ, ಯಾರದೊ ನಿಟ್ಟುಸಿರ ಮೇಲಿಂದ
ಬೀಸಿದ ಗಾಳಿ, ಚಳಿಗಾಲದ ಇರುಳು
ತಟ್ಟಿಯೂ ತಟ್ಟಿದಂತಿದ್ದವನು

ಯಾರಿಗೂ ತಿಳಿಯದಲೆ ಎದ್ದು ನಿಂತಿದ್ದನೊಮ್ಮೆಲೇ
ಸಾವರಿಸಿಕೊಂಡು, ಆವರಿಸಿಕೊಂಡು
ನಿಂತು ಏನೋ ಹೇಳಹೊರಟವನು
ಹೇಳುವುದೇಕೆಂದು ತಟಸ್ಥವಾದಂತೆ
ಬಿರಿದೂ ಬಿರಿಯದ ನಗೆ
ಬಚ್ಚಿಟ್ಟ ಪ್ರತಿಯೊಬ್ಬರ ಪಾಪದಂತೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಾಳು ಬವಣೆ
Next post ನಾ ನಂಬಿದೆ

ಸಣ್ಣ ಕತೆ

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

cheap jordans|wholesale air max|wholesale jordans|wholesale jewelry|wholesale jerseys