ಬಾಳು ಬವಣೆ

ಬದುಕು ಬೆಳಕಾಗಲಿಲ್ಲ
ಮುಳ್ಳಿಗೆ ಸಿಕ್ಕಿಕೊಂಡ ಬಟ್ಟೆ
ಮೂರಾಬಟ್ಟೆ
ಅಂದಿನ ಆ ಕಾತುರ ನಿಟ್ಟುಸಿರು
ಹಂಬಲಿಕೆ ಇಂದಿಲ್ಲ
ಸವಿಗನಸಿಗೂ ಇಂದು ಬರ
ನಿನ್ನೆ ಕಟ್ಟಿದ ಕಲ್ಪನೆಯ
ಹಾಯಿ ದೋಣಿಗಳ ಸಾಲು
ಇಂದು ಪಟ್ಟ ಬಿಚ್ಚಿ ಹೋಗಿ
ದೆಸೆ ಕಾಣದೆ ದಿಕ್ಕಾಪಾಲು

ಮೋಡ ಚದುರಿ ಬಿಸಿಲು
ಇಣುಕುವ ಹೊತ್ತು
ಮೈಯೊಡ್ಡಿ ತಣಿಯುವ ಕ್ಷಣ
ಕಾರ್ಮೋಡಗಳು ಮುತ್ತಿ ಮುಸುರಿದ್ದೇಕೆ?

ನಲ್ಲ ಇಂದು ಅಂದಿನಂತಿಲ್ಲ
ಬಳಲಿಕೆಯ ಬೇಗೆ
ಅಗಲಿಕೆಯ ದಾಗ
ಪಾಠ ಕಲಿಸಿದೆ ಬದುಕು
ಬೇವು ಬೆಲ್ಲ, ಇಲ್ಲ ಬೆಲ್ಲ
ಬರಿಯ ಬೇವೆ ಎಲ್ಲಾ
ಅದರಕ್ಕೆ ಕಹಿ, ಉದರಕ್ಕೆ ಸಿಹಿ
ಹೌದಲ್ಲ, ಕಾನನದೊಳಗೂ ಬದುಕ
ಚಿಗುರಿಸುವ ಧೈರ್ಯ ಬಂದುದ್ದು
ಸುಳ್ಳಲ್ಲ – ಬಾಳು ಬೆಳಕಾಗಲಿಲ್ಲ ಸತ್ಯ
ಅಂಧಕಾರಕ್ಕೆ ಹುಡುಕುತ್ತಿದ್ದೇನೆ ಚಿಮಣಿ ನಿತ್ಯ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಕ್ಕಿ ಆರಿಸುವಾಗ
Next post ಪ್ರತಿಮೆ

ಸಣ್ಣ ಕತೆ

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…