ಬಾಳು ಬವಣೆ

ಬದುಕು ಬೆಳಕಾಗಲಿಲ್ಲ
ಮುಳ್ಳಿಗೆ ಸಿಕ್ಕಿಕೊಂಡ ಬಟ್ಟೆ
ಮೂರಾಬಟ್ಟೆ
ಅಂದಿನ ಆ ಕಾತುರ ನಿಟ್ಟುಸಿರು
ಹಂಬಲಿಕೆ ಇಂದಿಲ್ಲ
ಸವಿಗನಸಿಗೂ ಇಂದು ಬರ
ನಿನ್ನೆ ಕಟ್ಟಿದ ಕಲ್ಪನೆಯ
ಹಾಯಿ ದೋಣಿಗಳ ಸಾಲು
ಇಂದು ಪಟ್ಟ ಬಿಚ್ಚಿ ಹೋಗಿ
ದೆಸೆ ಕಾಣದೆ ದಿಕ್ಕಾಪಾಲು

ಮೋಡ ಚದುರಿ ಬಿಸಿಲು
ಇಣುಕುವ ಹೊತ್ತು
ಮೈಯೊಡ್ಡಿ ತಣಿಯುವ ಕ್ಷಣ
ಕಾರ್ಮೋಡಗಳು ಮುತ್ತಿ ಮುಸುರಿದ್ದೇಕೆ?

ನಲ್ಲ ಇಂದು ಅಂದಿನಂತಿಲ್ಲ
ಬಳಲಿಕೆಯ ಬೇಗೆ
ಅಗಲಿಕೆಯ ದಾಗ
ಪಾಠ ಕಲಿಸಿದೆ ಬದುಕು
ಬೇವು ಬೆಲ್ಲ, ಇಲ್ಲ ಬೆಲ್ಲ
ಬರಿಯ ಬೇವೆ ಎಲ್ಲಾ
ಅದರಕ್ಕೆ ಕಹಿ, ಉದರಕ್ಕೆ ಸಿಹಿ
ಹೌದಲ್ಲ, ಕಾನನದೊಳಗೂ ಬದುಕ
ಚಿಗುರಿಸುವ ಧೈರ್ಯ ಬಂದುದ್ದು
ಸುಳ್ಳಲ್ಲ – ಬಾಳು ಬೆಳಕಾಗಲಿಲ್ಲ ಸತ್ಯ
ಅಂಧಕಾರಕ್ಕೆ ಹುಡುಕುತ್ತಿದ್ದೇನೆ ಚಿಮಣಿ ನಿತ್ಯ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಕ್ಕಿ ಆರಿಸುವಾಗ
Next post ಪ್ರತಿಮೆ

ಸಣ್ಣ ಕತೆ

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

cheap jordans|wholesale air max|wholesale jordans|wholesale jewelry|wholesale jerseys