ಶ್ರೀಗುರುವಿನಡಿಗೆ

ಅಂದು ಏನು ಹೇಳಿದ್ದೆ ತಂದೆ ನೆನ-
ಪಿಹುದೆ ನಿನಗೆ ಮತ್ತೆ?
ಕೈಯನೆಂದಿಗೂ ಬಿಡೆನು ಎಂದಿದ್ದೆ
ಮತ್ತೆ ಏಕೆ ಬಿಟ್ಟೆ ?

ದಿವ್ಯ ಜೀವನದ ಸಾಧನೆಗೆ ಎಂದು
ಬದ್ಧನಾಗಿ ಇದ್ದೆ
ಉನ್ಮಾದದೊಂದು ಅಮಲಿನಲಿ ಗುರುವೆ
ನೆಲಕುರುಳಿ ಹೊರಳಿ ಬಿದ್ದೆ

ವಿಷವ ನೆಕ್ಕಿ ಬದುಕಲಿಕೆ ಹೆಣಗಿದೆನು
ಕೈಯ ಪಿಡಿಯೊ ಗುರುವೆ
ಬೇಗ ಬದುಕಿಸೈ ದೀಪನಂದಲಿದೆ
ಭಕ್ತ ಕಲ್ಪತರುವೆ

ಹುಲ್ಲು ಕಡ್ಡಿಯನು ನಂಬಿಹೊಳೆಯನ್ನು
ಈಸಲೆಂದು ಬಗೆದು
ಬಿದ್ದೆ ತಿರುಗಣಿಗೆ ಎತ್ತು ಗುರುದೇವ
ನನ್ನ ಮೇಲೆ ತೆಗೆದು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೧೨
Next post ರಾವಣಾಂತರಂಗ – ೮

ಸಣ್ಣ ಕತೆ

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

cheap jordans|wholesale air max|wholesale jordans|wholesale jewelry|wholesale jerseys