ಶಿರೀಷ

ಶಿರೀಷ
ಹೇಳಲರಿಯದ
ಆನಂದದ ಆವಿರ್ಭಾವವಾಗುವುದು
ತೇಲಿ ಬರುವ ನಿನ್ನ ಮೂರ್ತಿಯನ್ನು ಕಂಡಾಗ,

ಯೋಜಿಸುವುದು ಮನಸು
ಸಾರಿ ಬರ ಸೆಳೆದು ಆಲಂಗಿಸಲೇ
ಕಂಡು ಕಣ್ಣಿನಲ್ಲಿಯೇ ಹೀರಿ
ಎದೆಯಲ್ಲಿ ಹಿಡಿದಿಟ್ಟುಕೊಳ್ಳಲೇ ಭದ್ರವಾಗಿ
ಹೇಗೆ ? ಹೇಗೆ ತಣಿಯಲಿ ಎಂದು.

ನಿನ್ನ ರಾಗ ರಂಜಿತ
ಮೊಲ್ಲೆ ಮೊಗ್ಗಿನ ತುಟಿಗಳಿಂದ
ಆವಿರ್ಭವಿಸುವ ನಿಯ ನುಡಿ ಮುತ್ತುಗಳ
ಶೇಖರಿಸಿಡುವೆ ಅತ್ಯಂತ ಜತನದಿಂದ
ಮಾಗಿದ ಮಾವಿನ ಹಣ್ಣುಗಳಂತೆ.. ಮೋಹಾವೇಶದಲಿ.

ಪ್ರಿಯವಾದ ಆಟಿಕೆಯ
ಯಾರೊಬ್ಬರಿಗೂ ಕೊಡದೆ
ಮುಟ್ಟಲೂ ಬಿಡದೆ
ನಿದ್ದೆಯಲಿ ಎಚ್ಚರದಲಿ
ಅವುಕಿ ಹಿಡಿವ
ಒಡೆತನ ಸಾಧಿಸುವ
ಮಗುವಿನಂತಾಡುವೆನು; ಮಿಟುಕುವೆನು
ನಿನ್ನ ಪ್ರೇಮಾತಿರೇಕದಲಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗುಲ್ಬಾಯಿ
Next post ಎಲ್ಲರಂತಾನುಂ ಪ್ರಜಾರಾಜನಿರಲೇನು ತಪ್ಪು ? ಗೊಣಗಿದರೆ ?

ಸಣ್ಣ ಕತೆ

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…