ನೀರಿಲ್ಲದೂರಿನಲಿ

ನೀರಿಲ್ಲದೂರಿನಲಿ ಮುಗಿಲ ಹುಡುಕಿದರು
ಮುಗಿಲಿಲ್ಲದೂರಿನಲಿ ನೀರ ಹುಡುಕಿದರು

ಹೊಲವಿಲ್ಲದೂರಿನಲಿ ಹಸುವ ಹುಡುಕಿದರು
ಹಸುವಿಲ್ಲದೂರಿನಲಿ ಹೊಲವ ಹುಡುಕಿದರು

ಹೂವಿಲ್ಲದೂರಿನಲಿ ತುಂಬಿಯ ಹುಡುಕಿದರು
ತುಂಬಿಯಿಲ್ಲದೂರಿನಲಿ ಹೂವ ಹುಡುಕಿದರು

ಮರವಿಲ್ಲದೂರಿನಲಿ ಹಣ್ಣ ಹುಡುಕಿದರು
ಹಣ್ಣಿಲ್ಲದೂರಿನಲಿ ಮರವ ಹುಡುಕಿದರು

ಹೆಣ್ಣಿಲ್ಲದೂರಿನಲಿ ಗಂಡ ಹುಡುಕಿದರು
ಗಂಡಿಲ್ಲದೂರಿನಲಿ ಹೆಣ್ಣ ಹುಡುಕಿದರು

ಪ್ರೀತಿಯಿಲ್ಲದೂರಿನಲಿ ಮಕ್ಕಳ ಹುಡುಕಿದರು
ಮಕ್ಕಳಿಲ್ಲದೂರಿನಲಿ ಪ್ರೀತಿಯ ಹುಡುಕಿದರು

ಮನುಷ್ಯರಿಲ್ಲದೂರಿನಲಿ ದೇವರ ಹುಡುಕಿದರು
ದೇವರಿಲ್ಲದೂರಿನಲಿ ಮನುಷ್ಯರ ಹುಡುಕಿದರು

ಮನಃಸ್ಸಾಕ್ಷಿಯಿಲ್ಲದೂರಿನಲಿ ಸತ್ಯವ ಹುಡುಕಿದರು
ಸತ್ಯವಿಲ್ಲದೂರಿನಲಿ ಮನಃಸ್ಸಾಕ್ಷಿಯ ಹುಡುಕಿದರು

ದಯೆಯಿಲ್ಲದೂರಿನಲಿ ಹೃದಯವ ಹುಡುಕಿದರು
ಹೃದಯವಿಲ್ಲದೂರಿನಲ್ಲಿ ದಯೆಯ ಹುಡುಕಿದರು

ಭಾವವಿಲ್ಲದೂರಿನಲಿ ಕವಿತೆಯ ಹುಡುಕಿದರು
ಕವಿತೆಯಿಲ್ಲದೂರಿನಲಿ ಭಾವವ ಹುಡುಕಿದರು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕೆರೆಯ ತಡಿಯಲ್ಲಿ
Next post ಉಮರನ ಒಸಗೆ – ೧೯

ಸಣ್ಣ ಕತೆ

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…