Home / ಕವನ / ಕವಿತೆ / ಯೌವನದ ಯುವತಿ

ಯೌವನದ ಯುವತಿ

ಯೌವನಕ್ಕೆ ಬಂದ ಯುವತಿಯೇ ನನ್ನನ್ನು
ಕಂಡು ಎಷ್ಟೊಂದು ಹಲುಬುತಿದಿ
ನನ್ನ ದೃಷ್ಟಿಯನ್ನಿಯುವಲ್ಲಿ ನೀನಿರುವೇ
ನಾನಿದ್ದಲಿಗೆ ತಾನಾಗಿಯೇ ಓಡೋಡಿ ಬರುವೆ.

ಪ್ರೇಮವೆಂಬ ರೋಗವನ್ನು ಬೆನ್ನಟ್ಟಿದಿ
ಮುಂದೆ ಬಂದಾಗ ಏನಾದರೂ ಹೇಳಲು
ಬಯಸತ್ತಿದೆ ದಿಕ್ಕೂ ತೋಚಲಾರದೇ
ಮುಂದೆ ಅಲ್ಲಿಂದಿಲ್ಲಿಗೆ ಅಲೆದಾಡುತ್ತಿರುವೇ

ಪ್ರೀತಿಯೆಂಬ ವಿಷದ ಬೀಜದಲ್ಲಿ ನೀ
ನಿನ್ನನೆ ಮರೆತು ನನ್ನನ್ನು ಬೆರೆಸುತ್ತಿರುವವೇ
ತಾನು ಹಾಳಾಗುತ್ತಿದದ್ದನ್ನು ಅರಿಯದೇ
ನನ್ನನ್ನು ಆ ಹಾಳು ಬಾವಿಗೆ ತಳ್ಳುತ್ತಿರುವೇ

ಮಂದಿರಕೆ ಬಂದರೂ ನನ್ನನ್ನು ಏಕೆ
ಕಾಮುಕ ದೃಷ್ಟಿಯನ್ನಿಯಿತ್ತಿರುವಿ
ನಿಮ್ಮಂಥ ಕಾಮವನ್ನು ಬಯಸುವವರಿಗೆ
ಎಲ್ಲಿದೆ ದೇವರು? ಎಲ್ಲಿದೇ ಮಂದಿರ?

ಯೌವನದ ಜೀವನ ಸಾಗಿಸುವ ಯುವತಿಗೆ
ಕಾಮವನ್ನು ತನ್ನದಾಗಿಸಿಕೊಂಡಲಿಯೇ!
ಸರ್ವ, ಸಂಪನ್ನ, ಅಲ್ಲಿಯೇ ದೇವರು
ಅಲ್ಲಿಯೇ ಸ್ವರ್ಗವೂ ಕಂಡುಕೊಳ್ಳುವರು.

ಕಾಮದಾಸೆಗೆ ಕಾಯುತ್ತಿದೆ ನನ್ನನ್ನು
ನನ್ನ ಮೇಲೆ ಇಟ್ಟ ನಿನ್ನ ಕಾಮುಕತನವ
ಬಿಟ್ಟು ಬಿಡು ಗೆಳತಿ ನಿನ್ನದಾರಿ ನೀ ನೋಡಿಕೋ
ನಿನ್ನ ಮೂರ್ಖತನವು ಈಗಲಾದರೂ ಬಿಟ್ಟುಬಿಡು

ಯೌವನಕ್ಕೆ ಬಂದ ಯುವತಿಯೇ
ಈಗಲಾದರೂ ಬಿಡು ನಿನ್ನ ಹಟಮಾರಿತನ
ಬೇರೆ ಯುವಕನನ್ನು ನೋಡಿಕೋ ಗೆಳತಿ
ಆ ಹಾಳು ಬಾವಿಗೆ ನನ್ನನ್ನು ದೂಡಬೇಡವೆಂದು
ನಿನ್ನಲ್ಲಿ ಕೈಮುಗಿದು ಪ್ರಾರ್ಥಿಸುವೆನು.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...