ಯೌವನದ ಯುವತಿ

ಯೌವನಕ್ಕೆ ಬಂದ ಯುವತಿಯೇ ನನ್ನನ್ನು
ಕಂಡು ಎಷ್ಟೊಂದು ಹಲುಬುತಿದಿ
ನನ್ನ ದೃಷ್ಟಿಯನ್ನಿಯುವಲ್ಲಿ ನೀನಿರುವೇ
ನಾನಿದ್ದಲಿಗೆ ತಾನಾಗಿಯೇ ಓಡೋಡಿ ಬರುವೆ.

ಪ್ರೇಮವೆಂಬ ರೋಗವನ್ನು ಬೆನ್ನಟ್ಟಿದಿ
ಮುಂದೆ ಬಂದಾಗ ಏನಾದರೂ ಹೇಳಲು
ಬಯಸತ್ತಿದೆ ದಿಕ್ಕೂ ತೋಚಲಾರದೇ
ಮುಂದೆ ಅಲ್ಲಿಂದಿಲ್ಲಿಗೆ ಅಲೆದಾಡುತ್ತಿರುವೇ

ಪ್ರೀತಿಯೆಂಬ ವಿಷದ ಬೀಜದಲ್ಲಿ ನೀ
ನಿನ್ನನೆ ಮರೆತು ನನ್ನನ್ನು ಬೆರೆಸುತ್ತಿರುವವೇ
ತಾನು ಹಾಳಾಗುತ್ತಿದದ್ದನ್ನು ಅರಿಯದೇ
ನನ್ನನ್ನು ಆ ಹಾಳು ಬಾವಿಗೆ ತಳ್ಳುತ್ತಿರುವೇ

ಮಂದಿರಕೆ ಬಂದರೂ ನನ್ನನ್ನು ಏಕೆ
ಕಾಮುಕ ದೃಷ್ಟಿಯನ್ನಿಯಿತ್ತಿರುವಿ
ನಿಮ್ಮಂಥ ಕಾಮವನ್ನು ಬಯಸುವವರಿಗೆ
ಎಲ್ಲಿದೆ ದೇವರು? ಎಲ್ಲಿದೇ ಮಂದಿರ?

ಯೌವನದ ಜೀವನ ಸಾಗಿಸುವ ಯುವತಿಗೆ
ಕಾಮವನ್ನು ತನ್ನದಾಗಿಸಿಕೊಂಡಲಿಯೇ!
ಸರ್ವ, ಸಂಪನ್ನ, ಅಲ್ಲಿಯೇ ದೇವರು
ಅಲ್ಲಿಯೇ ಸ್ವರ್ಗವೂ ಕಂಡುಕೊಳ್ಳುವರು.

ಕಾಮದಾಸೆಗೆ ಕಾಯುತ್ತಿದೆ ನನ್ನನ್ನು
ನನ್ನ ಮೇಲೆ ಇಟ್ಟ ನಿನ್ನ ಕಾಮುಕತನವ
ಬಿಟ್ಟು ಬಿಡು ಗೆಳತಿ ನಿನ್ನದಾರಿ ನೀ ನೋಡಿಕೋ
ನಿನ್ನ ಮೂರ್ಖತನವು ಈಗಲಾದರೂ ಬಿಟ್ಟುಬಿಡು

ಯೌವನಕ್ಕೆ ಬಂದ ಯುವತಿಯೇ
ಈಗಲಾದರೂ ಬಿಡು ನಿನ್ನ ಹಟಮಾರಿತನ
ಬೇರೆ ಯುವಕನನ್ನು ನೋಡಿಕೋ ಗೆಳತಿ
ಆ ಹಾಳು ಬಾವಿಗೆ ನನ್ನನ್ನು ದೂಡಬೇಡವೆಂದು
ನಿನ್ನಲ್ಲಿ ಕೈಮುಗಿದು ಪ್ರಾರ್ಥಿಸುವೆನು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೊರತು
Next post ಮಾದಿತನ

ಸಣ್ಣ ಕತೆ

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…