Home / ಕವನ / ಕವಿತೆ / ಯೌವನದ ಯುವತಿ

ಯೌವನದ ಯುವತಿ

ಯೌವನಕ್ಕೆ ಬಂದ ಯುವತಿಯೇ ನನ್ನನ್ನು
ಕಂಡು ಎಷ್ಟೊಂದು ಹಲುಬುತಿದಿ
ನನ್ನ ದೃಷ್ಟಿಯನ್ನಿಯುವಲ್ಲಿ ನೀನಿರುವೇ
ನಾನಿದ್ದಲಿಗೆ ತಾನಾಗಿಯೇ ಓಡೋಡಿ ಬರುವೆ.

ಪ್ರೇಮವೆಂಬ ರೋಗವನ್ನು ಬೆನ್ನಟ್ಟಿದಿ
ಮುಂದೆ ಬಂದಾಗ ಏನಾದರೂ ಹೇಳಲು
ಬಯಸತ್ತಿದೆ ದಿಕ್ಕೂ ತೋಚಲಾರದೇ
ಮುಂದೆ ಅಲ್ಲಿಂದಿಲ್ಲಿಗೆ ಅಲೆದಾಡುತ್ತಿರುವೇ

ಪ್ರೀತಿಯೆಂಬ ವಿಷದ ಬೀಜದಲ್ಲಿ ನೀ
ನಿನ್ನನೆ ಮರೆತು ನನ್ನನ್ನು ಬೆರೆಸುತ್ತಿರುವವೇ
ತಾನು ಹಾಳಾಗುತ್ತಿದದ್ದನ್ನು ಅರಿಯದೇ
ನನ್ನನ್ನು ಆ ಹಾಳು ಬಾವಿಗೆ ತಳ್ಳುತ್ತಿರುವೇ

ಮಂದಿರಕೆ ಬಂದರೂ ನನ್ನನ್ನು ಏಕೆ
ಕಾಮುಕ ದೃಷ್ಟಿಯನ್ನಿಯಿತ್ತಿರುವಿ
ನಿಮ್ಮಂಥ ಕಾಮವನ್ನು ಬಯಸುವವರಿಗೆ
ಎಲ್ಲಿದೆ ದೇವರು? ಎಲ್ಲಿದೇ ಮಂದಿರ?

ಯೌವನದ ಜೀವನ ಸಾಗಿಸುವ ಯುವತಿಗೆ
ಕಾಮವನ್ನು ತನ್ನದಾಗಿಸಿಕೊಂಡಲಿಯೇ!
ಸರ್ವ, ಸಂಪನ್ನ, ಅಲ್ಲಿಯೇ ದೇವರು
ಅಲ್ಲಿಯೇ ಸ್ವರ್ಗವೂ ಕಂಡುಕೊಳ್ಳುವರು.

ಕಾಮದಾಸೆಗೆ ಕಾಯುತ್ತಿದೆ ನನ್ನನ್ನು
ನನ್ನ ಮೇಲೆ ಇಟ್ಟ ನಿನ್ನ ಕಾಮುಕತನವ
ಬಿಟ್ಟು ಬಿಡು ಗೆಳತಿ ನಿನ್ನದಾರಿ ನೀ ನೋಡಿಕೋ
ನಿನ್ನ ಮೂರ್ಖತನವು ಈಗಲಾದರೂ ಬಿಟ್ಟುಬಿಡು

ಯೌವನಕ್ಕೆ ಬಂದ ಯುವತಿಯೇ
ಈಗಲಾದರೂ ಬಿಡು ನಿನ್ನ ಹಟಮಾರಿತನ
ಬೇರೆ ಯುವಕನನ್ನು ನೋಡಿಕೋ ಗೆಳತಿ
ಆ ಹಾಳು ಬಾವಿಗೆ ನನ್ನನ್ನು ದೂಡಬೇಡವೆಂದು
ನಿನ್ನಲ್ಲಿ ಕೈಮುಗಿದು ಪ್ರಾರ್ಥಿಸುವೆನು.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...