ಹೊರತು

ಈ ಸೆಲ್ಲಿನೊಳಗಿಂದ ನೋಟವೇ ಬೇರೆ-ಮೇಲಕ್ಕೆ ತೆರೆದ
ಅವಕಾಶದಲ್ಲಿ ಕತ್ತಲಾಗಿರಬಹುದು ಬೆಳಕಾಗಿರಬಹುದು
ಮೋಡ ಹಾಯುತ್ತಿರಬಹುದು ನಕ್ಷತ್ರಗಳ ಬೆಳಕು
ಬೀಳುತ್ತಿರಬಹುದು ಮುಖಗಳು ಮೂಡುತ್ತಿರಬಹುದು
ನೆನಪು ಹಣಿಕುತ್ತಿರಬಹುದು

ರಾತ್ರಿಯ ತಣ್ಣನೆ ಗಾಳಿ ಮಣ್ಣಿನ ವಾಸನೆ ಉಪ್ಪಿನ
ವಾಸನೆ ತರುವ ಕಿನಾರೆ ಗಾಳಿ ನಿದ್ದೆ ಜೊಂಪಿನ ಬೇಸಗೆಯ
ರಾತ್ರಿ ಗಾಳಿ ಗಾರೆ ಗೋಡೆಯ ಮೇಲೆ ವ್ಯರ್ಥ ಬಡಿದು
ಬೆಳಗಾದಾಗ ಇಲ್ಲಿಗೆ ಬಂದು ತಲುಪುತ್ತಿರುವ ಧ್ವನಿಗಳೇ ಬೇರೆ
ಅವುಗಳ ರೀತಿಯೇ ಬೇರೆ ಆ ಅಲೆಗಳೇ ಬೇರೆ
ರೇಲ್ವೆಯ ಹರಿತ ಧ್ವನಿ ಟ್ರಕ್ಕಿನ ಖಂಡಿ ಧ್ವನಿ
ಯಾವ ಜಗತ್ತಿಗೋ ಹೋಗುತ್ತಿರುವ ಜನರ ಸ್ಟೀಮರಿನ
ಸೈರರಿನ ಧ್ವನಿ ಸ್ವಂತಕ್ಕೆ ಸಂಬಂಧವಿಲ್ಲದೇ
ಮೂಕ ಧ್ವನಿಯಲ್ಲಿ ಸೇರಿ ನಿಶ್ಶಬ್ದವಾಗಿ
ಬಂದು ಬಡಿಯುವ ಶೈಲಿಯೇ ಬೇರೆ
ಈ ಗೋಡೆಗಳ ಒಳಗೆ
ಆ ಜಗತ್ತೇ ಬೇರೆ-ಎಂದಿಗೂ ಸಂಬಂಧವಿರದ
ಮಣ್ಣ ಬೊಂಬೆಗಳ ಸಾಲು ನಿರ್ವಿಕಾರ
ಆಕಾರಗಳ ಸಾಲು ಈ ಗೋಡೆಗಳ ಬದಿಗೆ
ನೆರಳಿದಲ್ಲದ ಜನಗಳ ನಿಟ್ಟುಸಿರು ತಾಗಿ ನಿಂತ ಈ ಕಲ್ಲುಗಳ
ಗೋಡೆ ಮೈಗಳ ಬೆವರು ಜಿಗುಟುಗಟ್ಟಿದ ಗೋಡೆ
ಬಿದ್ದರೂ ಎದ್ದು ನಿಲ್ಲುವ ಈ ಸ್ವಂತ ಮೈ
ಗೋಡೆ ಕಟ್ಟಿ ಮಾಡಿದ ಸಮಾಧಿ
ಸಮಾಧಿಯಲ್ಲಿ ಸತ್ತ ಸಂವೇದನೆ ಮತ್ತು
ಇದಕ್ಕೆಲ್ಲ ಹೊರತಾದ ನಿರ್ವಾತ ಕೋಶ
ಅದೃಶ್ಯಗಳೊಡನೆ ಮಾತಾಡಿ ಅರ್ಥಗಳ ಹಿಂದೆ ಅಲೆದಾಡಿ
ಗೇಣು ನೆಲದಲ್ಲಿ ಸುತ್ತಾಡಿ ದೂಳಿನ ರುಚಿ
ಅನ್ನದ ರುಚಿ ಕಾಮದ ರುಚಿ ವ್ಯತ್ಯಾಸವಿಲ್ಲದ ಅಸ್ತಿತ್ವವಿಲ್ಲದ
ನೆನಪಿನ ಪರೆಯಂತೆ ಅನುಭವ ಮತ್ತು ಸ್ವಂತದ ನಡುವೆ
ಮೈ ಮತ್ತು ಮಾತಿನ ನಡುವೆ ಮೂರ್ಛೆ ಮತ್ತು ಪ್ರಜ್ಞೆಯ ನಡುವೆ
ಮೊದಲಾಗುವುದಕ್ಕೆ ಮತ್ತು ಕೊನೆಗೊಳ್ಳುವುದಕ್ಕೆ
ಕಾಯುವ ಈ ಅವಸ್ಥೆಯೇ ಬೇರೆ
ಇರುವಿಕೆ ಇಲ್ಲದಿರುವಿಕೆಯ ಹೊರಗೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಿಂತು ಬಿಡೇ ನೀ ಹೀಗೆ
Next post ಯೌವನದ ಯುವತಿ

ಸಣ್ಣ ಕತೆ

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

cheap jordans|wholesale air max|wholesale jordans|wholesale jewelry|wholesale jerseys