ಅಡುಗೆಯ ಮನೆಯ ನಾಟ್ಯ !

ಅಡುಗೆ ರಸರುಚಿ ವಾಸನೆಯ ಮೋಹ ಸವಿಗೆ
ಬಾಗದವನಾರು ಹೇಳು ?
ಕುರಿಯ ಕಾವ ಕುರುಬನೀಂ; ಧರೆಯ ಕಾವ ರಾಜಗೆ
ಪಕ್ವಾನ್ನ ನಾಕಕೆ ಅನ್ಯ ಕೀಳು

ಮೊಸರನ್ನ ಸಂಡಿಗೆ ಉಪ್ಪಿನಕಾಯ ಲೀಲಾಂಮೃತಕೆ
ಸಖ್ಯನಾಗದವನಾರು ಧೀರ ?
ರಣರಂಗ ಕಲಿಯೇನು; ಕಾಳಗದ ಹುಲಿಯೇನಿದಕೆ
ವಿಶ್ವ ಅಡುಗೆ ಶಾಲೆಗೆ ಕಿಂಕರ!

ಹಂಚಿನೆಣ್ಣೆಯ ಕೆರೆಯಲಿ ಚೆಕ್ಕಲಿಯ ಈ ಸಾಟಿ
ಕಂಡ ಬಾಯ್ಗೆಲ್ಲ ಕುಣಿದಾಟ
ಒಲೆಯ ಕೆಂಡದ ಮೇಲೆ ಹಪ್ಪಳದ ಚಲ್ಲಾಟ
ಉಂಡ ನಾಲ್ಗೆಲ್ಲ ಜಿಗಿದಾಟ

ನಯನ ಹೋಳಿಗೆ ಕಂಪು; ಮಾಡುವದು ಹೋಂಪುಳಿ
ಬಿಸಿ ಕಡಬು ತುಪ್ಪ ಸಾಕು!
ಬೆಣ್ಣೆ ಮಜ್ಜಿಗೆ ತರುವ ಕಡಗೋಲಿನಬ್ಬರ ಕೇಳಿ
ಬಾಯಿ ನೀರಾಗಲೇ ಬೇಕು

ದಪ್ಪ ಚಪಾತಿಯ ಮೇಲೆ ಕಡಲೆಯುಸುಳೆಯ ಮೇಲ್ಮೆ
ಮೊಸರು ಸುರಿಯಬೇಕು
ಸರ್ವ ರಸಾನ್ನಗಳ ಕೂಟ; ಕೈ ಬಾಯಿಗೆಲ್ಲ ಒಲ್ಮೆ
ರುಚಿಯೂಟ ನೋಡಬೇಕು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಂಸಾರ
Next post ಕವನವೆಂದರೆ

ಸಣ್ಣ ಕತೆ

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…