ಕನ್ನಡಾಂಬೆಯ ಹಂಬಲ

ಏಕೀಕರಣದ ಪೂರ್ವದಲ್ಲಿ ಬರೆದ ಕವನ


ಒಂದಿರುಳ ಕನಸಿನಲಿ
ಕನ್ನಡಮ್ಮನ ಕೇಳಿದೆನು
‘ಬೇಕು ನಿನಗೇನು ಎಂದೂ’


ಪೌರ್ಣಿಮೆಯ ಚಂದ್ರನಿಗೆ
ಕಲೆಯ ತೆರದೀ ನನಗೆ
ಒಡೆದ ಕರ್ನಾಟಕದ ಕುಂದು ಎಂದೂ


ಕೋಡಿಯೊಡೆದಿಹ ಕಣ್ಣೀರು
ಹೊಳೆಯಾಗಿ ಬಿಡದೆ ಸುರಿಸಿ
ಮನಬಿಚ್ಚಿ ಮೊರೆಬಿದ್ದಳೆನಗೆ


ಹುಲಿಯ ಬಾಯಿಗೆ ಬಿದ್ದು
ಕೊರಗಿ ಕಿರುಚುತಲಿರುವ
ಕರುವಿನಾ ತೆರದಿ ಕೂಗಿದಳೆನಗೆ


‘ಸುತ್ತೆಲ್ಲಾ ಸವಿಹಣ್ಣು
ತುಂಬಿ ತುಳುಕಿದರೇನು?
ಹೊನ್ನಿನಾ ಸಂಕಲೆಯು ಸುತ್ತಿಹುದೆಂದೂ


ನನಗೊಂದೇ ವಚನವು ಬೇಕು
ಏಕೀಕರಣವು ಬೇಕು
ನಿಮ್ಮೆಲ್ಲರ ತ್ಯಾಗ ಸಾಹಸ ಬೇಕು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಈರುಳ್ಳಿ
Next post ಸಿಸೇರಿಯನ್

ಸಣ್ಣ ಕತೆ

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

cheap jordans|wholesale air max|wholesale jordans|wholesale jewelry|wholesale jerseys