ಬಯಕೆ

ಬಯಕೆಯೊಂದದು
ಮನದೊಳಂದುದು
ಎನಿತೆನಿತೊ ತವಕದಿ ಮೂಡುತೆ,
ಹಿತದ, ಹಿತಕೆ
ನಿಸ್ಪೃಹದ ನೇರಕೆ
ಇನಿಸು ತಪ್ಪದೆಡೆ ಮಾಡುತೆ |

ಹೊಂಬೆಳಗಲ್ಲರಳಿ, ಸೌಗಂಧ ಸೂಸಿ
ತನಿಗಾಳಿಯೋಳ್ ಬೆರೆತು ಮಕರಂದ ನೀಡೆ
ಮಣ್ಣು – ಮುಗಿಲನೆ ಕಂಡು ದಿನವೆಲ್ಲ ಘಮಘಮಿಸಿ
ನಸುನಗುವ ನಂದನದ ಹೂವಾಗೋ ಬಯಕೆ

ಬಯಕೆಯೊಂದದು
ಮನದೊಳಂದುದು
ಎನಿತೆನಿತೊ ತವಕದಿ ಮೂಡುತೆ
ಹಿತದ, ಹಿತಕೆ
ನಿಸ್ಪೃಹದ ನೇರಕೆ
ಇನಿಸು ತಪ್ಪದೆಡೆ ಮಾಡುತೆ

ಬೆಟ್ಟ ಗುಡ್ಡ ಸಾಲಲಿ ಪಯಣಿಗರ ಪಥದಲಿ
ತಣ್ಣೆಳಲನಿತ್ತು, ಸವಿ ಫಲವ ನೀಡೆ
ಕಡಿದುರಿಯೊಳಿಟ್ಟರು, ಬೆಂದುದನುಂಡವರಲಿ
ಸಂತೃಪ್ತವಾಗೋ ಗಿಡ-ಮರವಾಗುವಾ ಬಯಕೆ

ಬಯಕೆಯೊಂದದು
ಮನದೊಳಂದದು
ಎನಿತೆನಿತೊ ತವಕದಿ ಮೂಡುತೆ
ಹಿತದ, ಹಿತಕೆ
ನಿಸ್ಪೃಹದ ನೇರಕೆ
ಇನಿಸು ತಪ್ಪದೆಡೆ ಮಾಡುತೆ

ಗಿರಿಶೃಂಗದಿಂದಲಿ ಧುಮ್ಮಿಕ್ಕಿ ನಲಿಯುತ
ತೊರೆ ನದಿಯಾಗಿ ಸಾಗರೆಡೆಗೆ ಓಡೆ
ಹಾದಿ ಹಾದಿಯಿಕ್ಕೆಲದ ಹಸಿರ ಹೆಸರ ಕಾಣುತ
ಜೀವದೆದೆಯ ದಾಹಕೆ ಧಾರೆಯಾಗುವ ಬಯಕೆ

ಬಯಕೆಯೊಂದದು
ಮನದೊಳಂದದು
ಎನಿತೆನಿತೊ ತವಕದಿ ಮೂಡುತೆ
ಹಿತದ, ಹಿತಕೆ
ನಿಸ್ಪೃಹದ ನೇರಕೆ
ಇನಿಸು ತಪ್ಪದೆಡೆ ಮಾಡುತೆ.

ಭುವಿ ಬಾನ ಬಿತ್ತರ ಕಡಲೈಸಿರಿಯ ಚಿತ್ತರ
ಬಯಲ ಬಯಲ ಸೀಮಾ ಸೀಮೆಗಳಾಚೆ
ದಾಟಿ ದಾಟಿದ ರೆಕ್ಕೆ-ಪುಕ್ಕ ಬಲದ ಸಿಂಗರ
ಪಾರತಂತ್ರ ತೊರೆದಾ ಹಕ್ಕಿಯಾಗುವ ಬಯಕೆ

ಬಯಕೆಯೊಂದದು
ಮನದೊಳಂದದು
ಎನಿತೆನಿತೊ ತವಕದಿ ಮೂಡುತೆ
ಹಿತದ ಹಿತಕೆ
ನಿಸ್ಪೃಹದ ನೇರಕೆ
ಇನಿಸು ತಪ್ಪದೆಡೆ ಮಾಡುತೆ

ಕಂಡ ಅಗುಳಿಗೆ ತನ್ನ ಬಳಗವ ಕೂಗಿ ಕರೆಯುವ
ಹಂಚಿಕೊಳುತ ನೇಹದ ಮಮತೆ ಮೂಡೆ
ಗೂಡ ಕಟ್ಟಿದ ಪಿಕದ ಕುಲಕೂ ಗುಟಕನೀಯುವ
ಒಲವೆದೆಯ ಗೂಡಿನ ‘ಕಾಕ’ವಾಗುವ ಬಯಕೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಿಂಬ
Next post ಮೇಘ(ನಾ)

ಸಣ್ಣ ಕತೆ

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

cheap jordans|wholesale air max|wholesale jordans|wholesale jewelry|wholesale jerseys