ಏಳಿ ಎದ್ದೇಳಿ

ಏಳಿ ಎದ್ದೇಳಿ
ದುಡಿವ ಜಗದ ಕೈಗಳೊಂದಾಗಲ್ಹೇಳಿ.
ಕ್ರೂರ ಕೈಗಳ
ದಾಸ್ಯ ಬಿಡಿಸಲೇಳಿ.

ನಿಮ್ಮ ಬಲ ಜಗದ ಬಲ
ನಿಮ್ಮ ಛಲ ಯುಗಕೆ ಫಲ
ನಿಮ್ಮೆದೆಯ ಹಣತೆಯಲಿ
ಒಡಲ ಜಗದ ಬೆಳಕು
ನಿಮ್ಮೊಲವ ನುಡಿಯಿಂದ
ಮಾನವತೆ ಬದುಕು |

ನರಿಯ ನುಣ್ದನಿಗಿನ್ನೂ
ಕೂಗೋ ಕಾಕವಾಗುವಿರೇಕೆ
ಇರುವ ರೊಟ್ಟಿಯ ಮರೆತು
ತಿರುಕರಾಗುವುದೇಕೆ
ಮತಿಗೆಡಿಸೊ ಪಾಶಗಳ ಸಖ್ಯವೇಕೆ
ಮರೆತೆಯೋ ನೀವಿನ್ನು ಜೋಕೆ…. ಜೋಕೆ

ಬಿಡು ಹುಟ್ಟಿನಾ ಭ್ರಾಂತಿ ಜಾತಿ ಭೀತಿ
ತೊಡು ಕಂಕಣವಿನ್ನೂ
ಒಂದಾಗಿಸಲು ಮನುಜ ಪ್ರೀತಿ…. ನೀತಿ
ಅವರಿವರು ಹುಟ್ಟಿಸಿದಾ
ದೇವರಾಗೊಡವೆ ತೊಡವೆ ನಿನಗೇಕೆ
ನಿನ್ನೆದೆಯ ಗುಡಿಯ ದೇವರ ಮರೆವುದೇಕೆ?

ಮತ್ತೆ ಮರಳದಿರಿ
ಕತ್ತಲಿತಿಹಾಸಕ್ಕೆ ನಿತ್ಯವರಳೋ ಮೂಡಣದಿ
ನವ ಬದುಕಿದೆ
ಸತ್ತು ಮಲಗುವ ಬದುಕದೇತಕೋ ಕಾಣೆ….
ನಿಮ್ಮಾಣೆ…. ನಿನ್ನನ್ನು ನಂಬಿದರೆಂತೂ
ನಿನ್ನ ಬದುಕನು ರಾಗಾನುವೀಣೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಮುದ್ರ ಗೀತೆ
Next post ಎಂಥೆಂಥಾ ಚಿತ್ರಗಳು ಈ ಮೋಡಗಳಲ್ಲಿ….

ಸಣ್ಣ ಕತೆ

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

cheap jordans|wholesale air max|wholesale jordans|wholesale jewelry|wholesale jerseys