Home / ಕವನ / ಕವಿತೆ / ಸಮುದ್ರ ಗೀತೆ

ಸಮುದ್ರ ಗೀತೆ

ಸಮುದ್ರದ ಗೀತೆ ಮುಗಿಯುವದಿಲ್ಲ
ಲೆಕ್ಕ ಪುಸ್ತಕದಲಿ ಬಾಕಿ ಕೊಡಬೇಕಾಗಿದೆ
ಋತುಗಳು ಬದಲಾಗುತ್ತವೆ
ಬಿಡುಗಡೆಯ ಕನಸುಗಳು ಕಾಣಬೇಕಾಗಿದೆ.

ಮಾತನಾಡಿದ ಮಾತುಗಳು
ಹಿಂದೆ ತೆಗೆದುಕೊಳ್ಳುವದಕ್ಕೆ ಬರುವುದಿಲ್ಲ.
ನೀಲ ಗಗನದ ಹೊಳೆವ ಚಿಕ್ಕಿಗಳು
ಹೊನ್ನ ಮರಳಿನಲಿ ಅಡಗುವುದಿಲ್ಲ.

ಬಯಕೆ ಪ್ರಾರ್ಥನೆಗಳು ಉಲಿದಾಗ
ಅವನು ಎದೆಗೆ ಅಪ್ಪಿಕೊಳ್ಳುವನು
ವಸಂತ ವೈಶಾಖದಲಿ ಹುಟ್ಟುವುದು
ಶಿಶಿರದಲಿ ಬಾಡುವುದು ಅಲೆಯ ಹಾಡು.

ನದಿಯ ತೀರದ ಚೆಲುವಿನ ಮರ
ಹಸಿದವರಿಗೆ ನೀಡುತ್ತದೆ ಫಲಗಳ
ಸಂಜೆ ಬೆಳಕಿನಾಚೆಯೊಳು
ಮುಳುಗುವ ಸೂರ್ಯ ಕನಸು ಕಟ್ಟುತ್ತಾನೆ.

ಮೌನದಲಿ ಹೂವುಗಳು
ಅರಳುವುದು ಬಾಡುವುದು
ಬೆಳಕಿನ ಸೂರ್ಯ ಬಯಕೆಯಂತೆ
ಅವುಗಳನ್ನು ಚುಂಬಿಸಿಯೇ ಚುಂಬಿಸುತ್ತಾನೆ.

ಸಾಗರಕ್ಕೆ ವಿರಹದಿಂದ ನಿದ್ರೆ ಇಲ್ಲ
ಇರುವ ಜ್ವಾಲೆಗೆ ಮನ ಸಿಲುಕಿದೆ
ಸಂತೈಸುವುದು ಮೌನದಲಿ ಅಲೆಗಳು
ಸಾಗರ ಮತ್ತು ನನ್ನನ್ನು ಕತ್ತಲಲಿ.

ಪ್ರೇಮದ ಅಕ್ಷರಗಳು ಒಂದು
ಮಾಡಿದವು ನಮ್ಮೆಲ್ಲರ ಕನಸುಗಳ
ಯಾರು ತಾನೆ ಅಗಲಿಸಬಲ್ಲರು
ಗೋರಿಯಲಿ ಒಂದಾದ ನಮ್ಮಾತ್ಮಗಳ.

ಮುಳುಗುವ ಸೂರ್ಯ ಸುರಿಸಿದ
ಚಿನ್ನದ ಅಂಚುಗಳ ಮೋಡಕೆ
ಆ ದೂರದಲಿ ಆತ್ಮ ನುಡಿಯಿತು
ಓ ದೇವರೇ ನನಗೆ ಜಾಗವಿದೆ ಎಂದು.

ತುಂಬ ಪ್ರೀತಿಸುದಕೆ ಬದುಕು ಒಂದು
ಮೆರವಣಿಗೆ ನಿಧಾನವಾಗಿ ಹೆಜ್ಜೆ
ಹಾಕಲಾರದವರು ಮೆಲ್ಲಕೆ ಸರಿವರು
ಪಕ್ಷಕ್ಕೆ ಚಲಿಸುವ ಸೂರ್ಯ ಕಂತಿದ ಹಾಗೆ.

ಏಕಾಂತದ ಬಿರುಗಾಳಿ ನಮ್ಮ
ಸುತ್ತ ಎಲ್ಲ ರೆಂಬೆಗಳ ಕತ್ತರಿಸಿ
ಬೇರುಗಳು ಇಳಿದಿವೆ ಜೀವಂತವಾಗಿ
ಭೂಮಿಯೊಳಗೆ ಸೂರ್ಯ ನಗುತ್ತಾನೆ.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...