Home / ಕವನ / ಕವಿತೆ / ಸಮುದ್ರ ಗೀತೆ

ಸಮುದ್ರ ಗೀತೆ

ಸಮುದ್ರದ ಗೀತೆ ಮುಗಿಯುವದಿಲ್ಲ
ಲೆಕ್ಕ ಪುಸ್ತಕದಲಿ ಬಾಕಿ ಕೊಡಬೇಕಾಗಿದೆ
ಋತುಗಳು ಬದಲಾಗುತ್ತವೆ
ಬಿಡುಗಡೆಯ ಕನಸುಗಳು ಕಾಣಬೇಕಾಗಿದೆ.

ಮಾತನಾಡಿದ ಮಾತುಗಳು
ಹಿಂದೆ ತೆಗೆದುಕೊಳ್ಳುವದಕ್ಕೆ ಬರುವುದಿಲ್ಲ.
ನೀಲ ಗಗನದ ಹೊಳೆವ ಚಿಕ್ಕಿಗಳು
ಹೊನ್ನ ಮರಳಿನಲಿ ಅಡಗುವುದಿಲ್ಲ.

ಬಯಕೆ ಪ್ರಾರ್ಥನೆಗಳು ಉಲಿದಾಗ
ಅವನು ಎದೆಗೆ ಅಪ್ಪಿಕೊಳ್ಳುವನು
ವಸಂತ ವೈಶಾಖದಲಿ ಹುಟ್ಟುವುದು
ಶಿಶಿರದಲಿ ಬಾಡುವುದು ಅಲೆಯ ಹಾಡು.

ನದಿಯ ತೀರದ ಚೆಲುವಿನ ಮರ
ಹಸಿದವರಿಗೆ ನೀಡುತ್ತದೆ ಫಲಗಳ
ಸಂಜೆ ಬೆಳಕಿನಾಚೆಯೊಳು
ಮುಳುಗುವ ಸೂರ್ಯ ಕನಸು ಕಟ್ಟುತ್ತಾನೆ.

ಮೌನದಲಿ ಹೂವುಗಳು
ಅರಳುವುದು ಬಾಡುವುದು
ಬೆಳಕಿನ ಸೂರ್ಯ ಬಯಕೆಯಂತೆ
ಅವುಗಳನ್ನು ಚುಂಬಿಸಿಯೇ ಚುಂಬಿಸುತ್ತಾನೆ.

ಸಾಗರಕ್ಕೆ ವಿರಹದಿಂದ ನಿದ್ರೆ ಇಲ್ಲ
ಇರುವ ಜ್ವಾಲೆಗೆ ಮನ ಸಿಲುಕಿದೆ
ಸಂತೈಸುವುದು ಮೌನದಲಿ ಅಲೆಗಳು
ಸಾಗರ ಮತ್ತು ನನ್ನನ್ನು ಕತ್ತಲಲಿ.

ಪ್ರೇಮದ ಅಕ್ಷರಗಳು ಒಂದು
ಮಾಡಿದವು ನಮ್ಮೆಲ್ಲರ ಕನಸುಗಳ
ಯಾರು ತಾನೆ ಅಗಲಿಸಬಲ್ಲರು
ಗೋರಿಯಲಿ ಒಂದಾದ ನಮ್ಮಾತ್ಮಗಳ.

ಮುಳುಗುವ ಸೂರ್ಯ ಸುರಿಸಿದ
ಚಿನ್ನದ ಅಂಚುಗಳ ಮೋಡಕೆ
ಆ ದೂರದಲಿ ಆತ್ಮ ನುಡಿಯಿತು
ಓ ದೇವರೇ ನನಗೆ ಜಾಗವಿದೆ ಎಂದು.

ತುಂಬ ಪ್ರೀತಿಸುದಕೆ ಬದುಕು ಒಂದು
ಮೆರವಣಿಗೆ ನಿಧಾನವಾಗಿ ಹೆಜ್ಜೆ
ಹಾಕಲಾರದವರು ಮೆಲ್ಲಕೆ ಸರಿವರು
ಪಕ್ಷಕ್ಕೆ ಚಲಿಸುವ ಸೂರ್ಯ ಕಂತಿದ ಹಾಗೆ.

ಏಕಾಂತದ ಬಿರುಗಾಳಿ ನಮ್ಮ
ಸುತ್ತ ಎಲ್ಲ ರೆಂಬೆಗಳ ಕತ್ತರಿಸಿ
ಬೇರುಗಳು ಇಳಿದಿವೆ ಜೀವಂತವಾಗಿ
ಭೂಮಿಯೊಳಗೆ ಸೂರ್ಯ ನಗುತ್ತಾನೆ.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...