Home / ಕವನ / ಕವಿತೆ / ಸಮುದ್ರ ಗೀತೆ

ಸಮುದ್ರ ಗೀತೆ

ಸಮುದ್ರದ ಗೀತೆ ಮುಗಿಯುವದಿಲ್ಲ
ಲೆಕ್ಕ ಪುಸ್ತಕದಲಿ ಬಾಕಿ ಕೊಡಬೇಕಾಗಿದೆ
ಋತುಗಳು ಬದಲಾಗುತ್ತವೆ
ಬಿಡುಗಡೆಯ ಕನಸುಗಳು ಕಾಣಬೇಕಾಗಿದೆ.

ಮಾತನಾಡಿದ ಮಾತುಗಳು
ಹಿಂದೆ ತೆಗೆದುಕೊಳ್ಳುವದಕ್ಕೆ ಬರುವುದಿಲ್ಲ.
ನೀಲ ಗಗನದ ಹೊಳೆವ ಚಿಕ್ಕಿಗಳು
ಹೊನ್ನ ಮರಳಿನಲಿ ಅಡಗುವುದಿಲ್ಲ.

ಬಯಕೆ ಪ್ರಾರ್ಥನೆಗಳು ಉಲಿದಾಗ
ಅವನು ಎದೆಗೆ ಅಪ್ಪಿಕೊಳ್ಳುವನು
ವಸಂತ ವೈಶಾಖದಲಿ ಹುಟ್ಟುವುದು
ಶಿಶಿರದಲಿ ಬಾಡುವುದು ಅಲೆಯ ಹಾಡು.

ನದಿಯ ತೀರದ ಚೆಲುವಿನ ಮರ
ಹಸಿದವರಿಗೆ ನೀಡುತ್ತದೆ ಫಲಗಳ
ಸಂಜೆ ಬೆಳಕಿನಾಚೆಯೊಳು
ಮುಳುಗುವ ಸೂರ್ಯ ಕನಸು ಕಟ್ಟುತ್ತಾನೆ.

ಮೌನದಲಿ ಹೂವುಗಳು
ಅರಳುವುದು ಬಾಡುವುದು
ಬೆಳಕಿನ ಸೂರ್ಯ ಬಯಕೆಯಂತೆ
ಅವುಗಳನ್ನು ಚುಂಬಿಸಿಯೇ ಚುಂಬಿಸುತ್ತಾನೆ.

ಸಾಗರಕ್ಕೆ ವಿರಹದಿಂದ ನಿದ್ರೆ ಇಲ್ಲ
ಇರುವ ಜ್ವಾಲೆಗೆ ಮನ ಸಿಲುಕಿದೆ
ಸಂತೈಸುವುದು ಮೌನದಲಿ ಅಲೆಗಳು
ಸಾಗರ ಮತ್ತು ನನ್ನನ್ನು ಕತ್ತಲಲಿ.

ಪ್ರೇಮದ ಅಕ್ಷರಗಳು ಒಂದು
ಮಾಡಿದವು ನಮ್ಮೆಲ್ಲರ ಕನಸುಗಳ
ಯಾರು ತಾನೆ ಅಗಲಿಸಬಲ್ಲರು
ಗೋರಿಯಲಿ ಒಂದಾದ ನಮ್ಮಾತ್ಮಗಳ.

ಮುಳುಗುವ ಸೂರ್ಯ ಸುರಿಸಿದ
ಚಿನ್ನದ ಅಂಚುಗಳ ಮೋಡಕೆ
ಆ ದೂರದಲಿ ಆತ್ಮ ನುಡಿಯಿತು
ಓ ದೇವರೇ ನನಗೆ ಜಾಗವಿದೆ ಎಂದು.

ತುಂಬ ಪ್ರೀತಿಸುದಕೆ ಬದುಕು ಒಂದು
ಮೆರವಣಿಗೆ ನಿಧಾನವಾಗಿ ಹೆಜ್ಜೆ
ಹಾಕಲಾರದವರು ಮೆಲ್ಲಕೆ ಸರಿವರು
ಪಕ್ಷಕ್ಕೆ ಚಲಿಸುವ ಸೂರ್ಯ ಕಂತಿದ ಹಾಗೆ.

ಏಕಾಂತದ ಬಿರುಗಾಳಿ ನಮ್ಮ
ಸುತ್ತ ಎಲ್ಲ ರೆಂಬೆಗಳ ಕತ್ತರಿಸಿ
ಬೇರುಗಳು ಇಳಿದಿವೆ ಜೀವಂತವಾಗಿ
ಭೂಮಿಯೊಳಗೆ ಸೂರ್ಯ ನಗುತ್ತಾನೆ.
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...