Home / ಕವನ / ಕವಿತೆ / ಸಮುದ್ರ ಗೀತೆ

ಸಮುದ್ರ ಗೀತೆ

ಸಮುದ್ರದ ಗೀತೆ ಮುಗಿಯುವದಿಲ್ಲ
ಲೆಕ್ಕ ಪುಸ್ತಕದಲಿ ಬಾಕಿ ಕೊಡಬೇಕಾಗಿದೆ
ಋತುಗಳು ಬದಲಾಗುತ್ತವೆ
ಬಿಡುಗಡೆಯ ಕನಸುಗಳು ಕಾಣಬೇಕಾಗಿದೆ.

ಮಾತನಾಡಿದ ಮಾತುಗಳು
ಹಿಂದೆ ತೆಗೆದುಕೊಳ್ಳುವದಕ್ಕೆ ಬರುವುದಿಲ್ಲ.
ನೀಲ ಗಗನದ ಹೊಳೆವ ಚಿಕ್ಕಿಗಳು
ಹೊನ್ನ ಮರಳಿನಲಿ ಅಡಗುವುದಿಲ್ಲ.

ಬಯಕೆ ಪ್ರಾರ್ಥನೆಗಳು ಉಲಿದಾಗ
ಅವನು ಎದೆಗೆ ಅಪ್ಪಿಕೊಳ್ಳುವನು
ವಸಂತ ವೈಶಾಖದಲಿ ಹುಟ್ಟುವುದು
ಶಿಶಿರದಲಿ ಬಾಡುವುದು ಅಲೆಯ ಹಾಡು.

ನದಿಯ ತೀರದ ಚೆಲುವಿನ ಮರ
ಹಸಿದವರಿಗೆ ನೀಡುತ್ತದೆ ಫಲಗಳ
ಸಂಜೆ ಬೆಳಕಿನಾಚೆಯೊಳು
ಮುಳುಗುವ ಸೂರ್ಯ ಕನಸು ಕಟ್ಟುತ್ತಾನೆ.

ಮೌನದಲಿ ಹೂವುಗಳು
ಅರಳುವುದು ಬಾಡುವುದು
ಬೆಳಕಿನ ಸೂರ್ಯ ಬಯಕೆಯಂತೆ
ಅವುಗಳನ್ನು ಚುಂಬಿಸಿಯೇ ಚುಂಬಿಸುತ್ತಾನೆ.

ಸಾಗರಕ್ಕೆ ವಿರಹದಿಂದ ನಿದ್ರೆ ಇಲ್ಲ
ಇರುವ ಜ್ವಾಲೆಗೆ ಮನ ಸಿಲುಕಿದೆ
ಸಂತೈಸುವುದು ಮೌನದಲಿ ಅಲೆಗಳು
ಸಾಗರ ಮತ್ತು ನನ್ನನ್ನು ಕತ್ತಲಲಿ.

ಪ್ರೇಮದ ಅಕ್ಷರಗಳು ಒಂದು
ಮಾಡಿದವು ನಮ್ಮೆಲ್ಲರ ಕನಸುಗಳ
ಯಾರು ತಾನೆ ಅಗಲಿಸಬಲ್ಲರು
ಗೋರಿಯಲಿ ಒಂದಾದ ನಮ್ಮಾತ್ಮಗಳ.

ಮುಳುಗುವ ಸೂರ್ಯ ಸುರಿಸಿದ
ಚಿನ್ನದ ಅಂಚುಗಳ ಮೋಡಕೆ
ಆ ದೂರದಲಿ ಆತ್ಮ ನುಡಿಯಿತು
ಓ ದೇವರೇ ನನಗೆ ಜಾಗವಿದೆ ಎಂದು.

ತುಂಬ ಪ್ರೀತಿಸುದಕೆ ಬದುಕು ಒಂದು
ಮೆರವಣಿಗೆ ನಿಧಾನವಾಗಿ ಹೆಜ್ಜೆ
ಹಾಕಲಾರದವರು ಮೆಲ್ಲಕೆ ಸರಿವರು
ಪಕ್ಷಕ್ಕೆ ಚಲಿಸುವ ಸೂರ್ಯ ಕಂತಿದ ಹಾಗೆ.

ಏಕಾಂತದ ಬಿರುಗಾಳಿ ನಮ್ಮ
ಸುತ್ತ ಎಲ್ಲ ರೆಂಬೆಗಳ ಕತ್ತರಿಸಿ
ಬೇರುಗಳು ಇಳಿದಿವೆ ಜೀವಂತವಾಗಿ
ಭೂಮಿಯೊಳಗೆ ಸೂರ್ಯ ನಗುತ್ತಾನೆ.
*****

Tagged:

Leave a Reply

Your email address will not be published. Required fields are marked *

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...

ನನ್ನ ಜನ್ಮ ಗ್ರಾಮಕ್ಕೆ ಹೋಗದೆ ನಾಲ್ಕಾರು ವರುಷಗಳಾಗಿದ್ದವು. ಮೇ ತಿಂಗಳ ಬೆವರನ್ನು ತೋಟದ ಅಬ್ಬಿಯಲ್ಲಿ ತೊಳೆದು ತಂಪಾಗಿ ಒಂದು ಮಾಸ ಕಳೆದು ಬರುವ ಎಂದು ಹಳ್ಳಿಗೆ ಹೋಗಿದ್ದೆ. ಮನೆಗೆ ತಲುಪಿದ ಮರುದಿನವೇ ತಂಗಿಯ ಮನೆಗೆ ಹೋಗುವದು ನನ್ನ ಪದ್ಧತಿ. ನಮ್ಮ ಕೇರಿಯ ಎದುರಿನ ಗುಡ್ಡೆಯನ್ನು ಹತ್...