Home / ಕವನ / ಕವಿತೆ / ಅಪ್ಪ ಸತ್ತಾಗ!

ಅಪ್ಪ ಸತ್ತಾಗ!

ಅಪ್ಪ ಸತ್ತಾಗ! ನಾ ಇನ್ನು ಚಿಕ್ಕವನು|
ಗೋಲಿ ಆಡುವ ವಯಸ್ಸು
ಸದಾ ಟಿ.ವಿ ನೋಡುವ ಮನಸು||

ಏನೋ ಪೋನ್ ಬಂತು
ಎಲ್ಲ ಗುಸುಗುಸು ಮಾತು
ಅಮ್ಮನಿಗೆ ಭಯ ದನಿಯ ಕಂಪನ|
ಅಂದು ತಡವಾಗಿ ಚಿಕ್ಕಪ್ಪ ಹೇಳಿದರು
ನಿನ್ನ ಅಪ್ಪ ಇನ್ನಿಲ್ಲವೆಂದು|
ನನಗೆ ಏನೂ ಅನ್ನಿಸಲಿಲ್ಲ ಅಂದು
ಎಲ್ಲರೂ ಗೊಳೋ ಎಂದು ಅಳುತ್ತಿದ್ದರು||
ನನಗೆ ಅಳುಬರುತ್ತಿರಲಿಲ್ಲ

ಅಳುವವರ ನೋಡಿದರೂ
ಅರ್ಥವಾಗುತ್ತಿರಲಿಲ್ಲ|
ಬಂದ ಸಂಬಂಧಿಕರೆಲ್ಲಾ
ನನ್ನ ನೋಡಿದೊಡನೆ ಅವರ
ಕಣ್ಣುಗಳು ತುಂಬಿಕೊಳ್ಳುತ್ತಿದ್ದವು||

ಅಪ್ಪ ನಿನ್ನೆ ಹೊರಡುವಾಗ ಎಂದಿನಂತೆ
ಟಾಟ ಮಾಡಿದ್ದು ನನ್ನ ಕಣ್ಣಲ್ಲಿಯೇ ಇತ್ತು
ಆ ಟಾಟದಲ್ಲಿ ಏನೋ ವಿಶೇಷವೆನಿಸಿತ್ತು|
ಆಗ ಅನ್ನಿಸಿರಲಿಲ್ಲ ಅದುವೆ ನನ್ನಾ
ನನ್ನ ತಂದೆಯ ಕೊನೆಯ ಮಿಲನಕ್ಷಣವೆಂದು|
ರಸ್ತೆ ಅಪಘಾತ ಇಂಥಾ ಆಪತ್ತತರುತ್ತದೆಂದು
ನಾವು ಯಾರೂ ಊಹಿಸಿರಲಿಲ್ಲವೆಂದು||

ಅಪ್ಪ ಹೊರಗೆ ಹೂವಿನ ಹಾಸಿಗೆಯಲಿ
ಮಲಗಿದಂತೆ ನನಗೆ ಕಾಣಿಸುತ್ತಿತ್ತು|
ಮುಖಮಾತ್ರ ಕಾಣುತಿತ್ತು
ಬೇರೆಲ್ಲಾ ಬ್ಯಾಂಡೇಜು ಸುತ್ತಿತ್ತು|
ಮನೆತುಂಬ ಜನ, ಸಾಂಬ್ರಾಣಿ ಹೊಗೆ
ಕಣ್ಣು ಉರಿಯುತಿತ್ತು
ನೀಲಗಿರಿ‌ಎಣ್ಣೆ ವಾಸನೆ ಜಾಸ್ತಿಯೆನಿಸುತ್ತಿತ್ತು||

ಸೂರ್‍ಯ ಇಳಿಯುತ್ತಿದ್ದ ಸಮಯ
ಯಾರೋ ಮರದ ಸಾಮಾನುಗಳ ತಂದರು|
ಏನೋ ಚೌಕಾಕಾರದಂತೆ ಕಟ್ಟಿದರು
ಅದರಮೇಲೆ ಅಪ್ಪನ ಮಲಗಿಸಿದರು|
ಎಲ್ಲರೂ ಹೂ ಪತ್ರೆಗಳ ಹಾಕಿ ಹೊತ್ತೊಯ್ದರು
ಚಿಕ್ಕಪ್ಪನೇ ಎಲ್ಲಾ ಕಾರ್‍ಯವ ಮಾಡಿ
ಮುಗಿಸಿದರು||

ಆಜ್ಜಿ ಅಜ್ಜ ನಮ್ಮನು ಕರೆದುಕೊಂಡೋದರು
ಎಷ್ಟೋ ದಿನ ನೆಲ ಹಿಡಿದ
ಆಮ್ಮ ಮೇಲೆದ್ದರು|
ಸಣ್ಣದೊಂದು ಕೆಲಸಹಿಡಿದರು
ಬದುಕು ಕುಂಟುತಾ ಸಾಗಿ
ನನ್ನ ಶಾಲೆ ಹೇಗೋ ಮುಗಿಯಿತು|
ಆಮ್ಮ ಮತ್ತು ನನ್ನನು
ಮಾವಂದಿರು, ಚಿಕ್ಕಪ್ಪಂದಿರು ಎಲ್ಲಾ
ಚೆನ್ನಾಗಿ ನೋಡಿಕೊಂಡರಿಲ್ಲಿಯವರೆಗೆ||

ಆದರೆ ಏನೋ ಕೊರತೆ
ಏನೋ ಮಹತ್ವದ ಎಂದೋ
ಕಳೆದುಕೊಡ ಭಾವ ಕಾಡುತ್ತಿದೆ|
ಈಗ ಒಬ್ಬನೇ ಅಳುತ್ತಿರುವೆ
ಒಮ್ಮೊಮ್ಮೆ ಅಪ್ಪ ಎಲ್ಲಿ ಎಂದು
ಯಾರು ಸಂತೈಸುವರಿಲ್ಲ ಬಂದು|
ಅಮ್ಮನಿಗೆ ನಾನು, ನನಗೆ ಅಮ್ಮನೇ ಬಂಧು||
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...