ಅಪ್ಪ ಸತ್ತಾಗ!

ಅಪ್ಪ ಸತ್ತಾಗ! ನಾ ಇನ್ನು ಚಿಕ್ಕವನು|
ಗೋಲಿ ಆಡುವ ವಯಸ್ಸು
ಸದಾ ಟಿ.ವಿ ನೋಡುವ ಮನಸು||

ಏನೋ ಪೋನ್ ಬಂತು
ಎಲ್ಲ ಗುಸುಗುಸು ಮಾತು
ಅಮ್ಮನಿಗೆ ಭಯ ದನಿಯ ಕಂಪನ|
ಅಂದು ತಡವಾಗಿ ಚಿಕ್ಕಪ್ಪ ಹೇಳಿದರು
ನಿನ್ನ ಅಪ್ಪ ಇನ್ನಿಲ್ಲವೆಂದು|
ನನಗೆ ಏನೂ ಅನ್ನಿಸಲಿಲ್ಲ ಅಂದು
ಎಲ್ಲರೂ ಗೊಳೋ ಎಂದು ಅಳುತ್ತಿದ್ದರು||
ನನಗೆ ಅಳುಬರುತ್ತಿರಲಿಲ್ಲ

ಅಳುವವರ ನೋಡಿದರೂ
ಅರ್ಥವಾಗುತ್ತಿರಲಿಲ್ಲ|
ಬಂದ ಸಂಬಂಧಿಕರೆಲ್ಲಾ
ನನ್ನ ನೋಡಿದೊಡನೆ ಅವರ
ಕಣ್ಣುಗಳು ತುಂಬಿಕೊಳ್ಳುತ್ತಿದ್ದವು||

ಅಪ್ಪ ನಿನ್ನೆ ಹೊರಡುವಾಗ ಎಂದಿನಂತೆ
ಟಾಟ ಮಾಡಿದ್ದು ನನ್ನ ಕಣ್ಣಲ್ಲಿಯೇ ಇತ್ತು
ಆ ಟಾಟದಲ್ಲಿ ಏನೋ ವಿಶೇಷವೆನಿಸಿತ್ತು|
ಆಗ ಅನ್ನಿಸಿರಲಿಲ್ಲ ಅದುವೆ ನನ್ನಾ
ನನ್ನ ತಂದೆಯ ಕೊನೆಯ ಮಿಲನಕ್ಷಣವೆಂದು|
ರಸ್ತೆ ಅಪಘಾತ ಇಂಥಾ ಆಪತ್ತತರುತ್ತದೆಂದು
ನಾವು ಯಾರೂ ಊಹಿಸಿರಲಿಲ್ಲವೆಂದು||

ಅಪ್ಪ ಹೊರಗೆ ಹೂವಿನ ಹಾಸಿಗೆಯಲಿ
ಮಲಗಿದಂತೆ ನನಗೆ ಕಾಣಿಸುತ್ತಿತ್ತು|
ಮುಖಮಾತ್ರ ಕಾಣುತಿತ್ತು
ಬೇರೆಲ್ಲಾ ಬ್ಯಾಂಡೇಜು ಸುತ್ತಿತ್ತು|
ಮನೆತುಂಬ ಜನ, ಸಾಂಬ್ರಾಣಿ ಹೊಗೆ
ಕಣ್ಣು ಉರಿಯುತಿತ್ತು
ನೀಲಗಿರಿ‌ಎಣ್ಣೆ ವಾಸನೆ ಜಾಸ್ತಿಯೆನಿಸುತ್ತಿತ್ತು||

ಸೂರ್‍ಯ ಇಳಿಯುತ್ತಿದ್ದ ಸಮಯ
ಯಾರೋ ಮರದ ಸಾಮಾನುಗಳ ತಂದರು|
ಏನೋ ಚೌಕಾಕಾರದಂತೆ ಕಟ್ಟಿದರು
ಅದರಮೇಲೆ ಅಪ್ಪನ ಮಲಗಿಸಿದರು|
ಎಲ್ಲರೂ ಹೂ ಪತ್ರೆಗಳ ಹಾಕಿ ಹೊತ್ತೊಯ್ದರು
ಚಿಕ್ಕಪ್ಪನೇ ಎಲ್ಲಾ ಕಾರ್‍ಯವ ಮಾಡಿ
ಮುಗಿಸಿದರು||

ಆಜ್ಜಿ ಅಜ್ಜ ನಮ್ಮನು ಕರೆದುಕೊಂಡೋದರು
ಎಷ್ಟೋ ದಿನ ನೆಲ ಹಿಡಿದ
ಆಮ್ಮ ಮೇಲೆದ್ದರು|
ಸಣ್ಣದೊಂದು ಕೆಲಸಹಿಡಿದರು
ಬದುಕು ಕುಂಟುತಾ ಸಾಗಿ
ನನ್ನ ಶಾಲೆ ಹೇಗೋ ಮುಗಿಯಿತು|
ಆಮ್ಮ ಮತ್ತು ನನ್ನನು
ಮಾವಂದಿರು, ಚಿಕ್ಕಪ್ಪಂದಿರು ಎಲ್ಲಾ
ಚೆನ್ನಾಗಿ ನೋಡಿಕೊಂಡರಿಲ್ಲಿಯವರೆಗೆ||

ಆದರೆ ಏನೋ ಕೊರತೆ
ಏನೋ ಮಹತ್ವದ ಎಂದೋ
ಕಳೆದುಕೊಡ ಭಾವ ಕಾಡುತ್ತಿದೆ|
ಈಗ ಒಬ್ಬನೇ ಅಳುತ್ತಿರುವೆ
ಒಮ್ಮೊಮ್ಮೆ ಅಪ್ಪ ಎಲ್ಲಿ ಎಂದು
ಯಾರು ಸಂತೈಸುವರಿಲ್ಲ ಬಂದು|
ಅಮ್ಮನಿಗೆ ನಾನು, ನನಗೆ ಅಮ್ಮನೇ ಬಂಧು||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ರತ್ನನ್ ಪರ್‍ಪಂಚ
Next post ಸ್ವಾತಂತ್ರ್ಯ

ಸಣ್ಣ ಕತೆ

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

cheap jordans|wholesale air max|wholesale jordans|wholesale jewelry|wholesale jerseys