Home / ಕವನ / ಕವಿತೆ / ಅಪ್ಪ ಸತ್ತಾಗ!

ಅಪ್ಪ ಸತ್ತಾಗ!

ಅಪ್ಪ ಸತ್ತಾಗ! ನಾ ಇನ್ನು ಚಿಕ್ಕವನು|
ಗೋಲಿ ಆಡುವ ವಯಸ್ಸು
ಸದಾ ಟಿ.ವಿ ನೋಡುವ ಮನಸು||

ಏನೋ ಪೋನ್ ಬಂತು
ಎಲ್ಲ ಗುಸುಗುಸು ಮಾತು
ಅಮ್ಮನಿಗೆ ಭಯ ದನಿಯ ಕಂಪನ|
ಅಂದು ತಡವಾಗಿ ಚಿಕ್ಕಪ್ಪ ಹೇಳಿದರು
ನಿನ್ನ ಅಪ್ಪ ಇನ್ನಿಲ್ಲವೆಂದು|
ನನಗೆ ಏನೂ ಅನ್ನಿಸಲಿಲ್ಲ ಅಂದು
ಎಲ್ಲರೂ ಗೊಳೋ ಎಂದು ಅಳುತ್ತಿದ್ದರು||
ನನಗೆ ಅಳುಬರುತ್ತಿರಲಿಲ್ಲ

ಅಳುವವರ ನೋಡಿದರೂ
ಅರ್ಥವಾಗುತ್ತಿರಲಿಲ್ಲ|
ಬಂದ ಸಂಬಂಧಿಕರೆಲ್ಲಾ
ನನ್ನ ನೋಡಿದೊಡನೆ ಅವರ
ಕಣ್ಣುಗಳು ತುಂಬಿಕೊಳ್ಳುತ್ತಿದ್ದವು||

ಅಪ್ಪ ನಿನ್ನೆ ಹೊರಡುವಾಗ ಎಂದಿನಂತೆ
ಟಾಟ ಮಾಡಿದ್ದು ನನ್ನ ಕಣ್ಣಲ್ಲಿಯೇ ಇತ್ತು
ಆ ಟಾಟದಲ್ಲಿ ಏನೋ ವಿಶೇಷವೆನಿಸಿತ್ತು|
ಆಗ ಅನ್ನಿಸಿರಲಿಲ್ಲ ಅದುವೆ ನನ್ನಾ
ನನ್ನ ತಂದೆಯ ಕೊನೆಯ ಮಿಲನಕ್ಷಣವೆಂದು|
ರಸ್ತೆ ಅಪಘಾತ ಇಂಥಾ ಆಪತ್ತತರುತ್ತದೆಂದು
ನಾವು ಯಾರೂ ಊಹಿಸಿರಲಿಲ್ಲವೆಂದು||

ಅಪ್ಪ ಹೊರಗೆ ಹೂವಿನ ಹಾಸಿಗೆಯಲಿ
ಮಲಗಿದಂತೆ ನನಗೆ ಕಾಣಿಸುತ್ತಿತ್ತು|
ಮುಖಮಾತ್ರ ಕಾಣುತಿತ್ತು
ಬೇರೆಲ್ಲಾ ಬ್ಯಾಂಡೇಜು ಸುತ್ತಿತ್ತು|
ಮನೆತುಂಬ ಜನ, ಸಾಂಬ್ರಾಣಿ ಹೊಗೆ
ಕಣ್ಣು ಉರಿಯುತಿತ್ತು
ನೀಲಗಿರಿ‌ಎಣ್ಣೆ ವಾಸನೆ ಜಾಸ್ತಿಯೆನಿಸುತ್ತಿತ್ತು||

ಸೂರ್‍ಯ ಇಳಿಯುತ್ತಿದ್ದ ಸಮಯ
ಯಾರೋ ಮರದ ಸಾಮಾನುಗಳ ತಂದರು|
ಏನೋ ಚೌಕಾಕಾರದಂತೆ ಕಟ್ಟಿದರು
ಅದರಮೇಲೆ ಅಪ್ಪನ ಮಲಗಿಸಿದರು|
ಎಲ್ಲರೂ ಹೂ ಪತ್ರೆಗಳ ಹಾಕಿ ಹೊತ್ತೊಯ್ದರು
ಚಿಕ್ಕಪ್ಪನೇ ಎಲ್ಲಾ ಕಾರ್‍ಯವ ಮಾಡಿ
ಮುಗಿಸಿದರು||

ಆಜ್ಜಿ ಅಜ್ಜ ನಮ್ಮನು ಕರೆದುಕೊಂಡೋದರು
ಎಷ್ಟೋ ದಿನ ನೆಲ ಹಿಡಿದ
ಆಮ್ಮ ಮೇಲೆದ್ದರು|
ಸಣ್ಣದೊಂದು ಕೆಲಸಹಿಡಿದರು
ಬದುಕು ಕುಂಟುತಾ ಸಾಗಿ
ನನ್ನ ಶಾಲೆ ಹೇಗೋ ಮುಗಿಯಿತು|
ಆಮ್ಮ ಮತ್ತು ನನ್ನನು
ಮಾವಂದಿರು, ಚಿಕ್ಕಪ್ಪಂದಿರು ಎಲ್ಲಾ
ಚೆನ್ನಾಗಿ ನೋಡಿಕೊಂಡರಿಲ್ಲಿಯವರೆಗೆ||

ಆದರೆ ಏನೋ ಕೊರತೆ
ಏನೋ ಮಹತ್ವದ ಎಂದೋ
ಕಳೆದುಕೊಡ ಭಾವ ಕಾಡುತ್ತಿದೆ|
ಈಗ ಒಬ್ಬನೇ ಅಳುತ್ತಿರುವೆ
ಒಮ್ಮೊಮ್ಮೆ ಅಪ್ಪ ಎಲ್ಲಿ ಎಂದು
ಯಾರು ಸಂತೈಸುವರಿಲ್ಲ ಬಂದು|
ಅಮ್ಮನಿಗೆ ನಾನು, ನನಗೆ ಅಮ್ಮನೇ ಬಂಧು||
*****

Tagged:

Leave a Reply

Your email address will not be published. Required fields are marked *

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...