Home / ಕವನ / ಕವಿತೆ / ಎಂಥೆಂಥಾ ಚಿತ್ರಗಳು ಈ ಮೋಡಗಳಲ್ಲಿ….

ಎಂಥೆಂಥಾ ಚಿತ್ರಗಳು ಈ ಮೋಡಗಳಲ್ಲಿ….

ಯುರೋಮ್ಯೂಸಿಯಂದ ಬೆತ್ತಲೆ ಚಿತ್ರಗಳ
ಉಬ್ಬರಿಳಿತ
ಮಾರ್ಬಲ್ಲಿನ ಕೆತ್ತನೆಯ ನರನಾಡಿಗಳು
ಮಾರ್ಕೆಟ್ಟಿನ ತುಂಡು ಬಟ್ಟೆಯ ಹುಡುಗಿಯರು
ಚೌಕ ಸುತ್ತ ಬಳಿಸಿ ಮುದ್ದಿಸುವ ಪ್ರೇಮಿಗಳು
ಪರಿವೆ ಇಲ್ಲದೆ ಬಿದ್ದಿರುವ ಹಾದಿಬದಿಯ ಕಾಮಿಗಳು
ಎಂಥೆಂಥಾ ಚಿತ್ರಗಳಿವು…
ಬೆಳ್ಳಿ ಚೌಕಟ್ಟಿನೊಳಗೆ ಹಾಕಿ
ನೀಲಾಕಾಶದ ಭಿತ್ತಿಗೆ ತೂಗು ಹಾಕಿದೆ.

ಲಾಸ್‌ವೆಗಾಸಿನ ಚಿತ್ರ ಆಕಾಶಕ್ಕೇರಿ
ಝಣಝಣಿಸುವ ಚೀಲಕಂಡು ಹಿಗ್ಗೋ ಹಿಗ್ಗು;
ಛೇ! ಇಲ್ಲೆಲ್ಲಿ ಕೃಷ್ಣನ ಚಕ್ರ
ಧರ್ಮ ನೀತಿಯ ಭಾಷಣ
ಕಾಲರ್‍ ಸರಿಪಡಿಸಿ ಟೈ ಬಿಗಿಯುವ ಮುದುಕರು
ಮಠಮಾನ್ಯ ಮರೆತ ಕಪಟರ
ಕಣ್ಣು, ಬಾಯಿ ಅಲ್ಲ ಇಡೀ ದೇಹವೇ ಚಪಲ
ಚಿತ್ರಗಳೊಂದರ ಮೇಲೊಂದು

ಉರಿವಂಗಳದೊಳಗೇ ಹುಟ್ಟಿ ಬೆಳೆದ
ಮರುಭೂಮಿ ಹುಡುಗಿಯರ
ಹೊಳಪು ಕಣ್ಣು ಖರ್ಜೂರವಾಗಿ ಕಾಣಿಸಿದ
ಕೆಲವೇ ಕ್ಷಣ ಅವರೆದೆಯ ಸುಟ್ಟು ಕರಕಲಾದ
ಗಾಯಗಳು ಮಾಯದೇ ನೋವಿನ ರೂಪಿನ
ಮೋಡಗಳೋ ಕಪ್ಪು ಹೆಬ್ಬಂಡೆಗಳೋ
ನಿಂತಲ್ಲೇ ನಿಂತು ಬಿಟ್ಟ ಚಿತ್ರಗಳು

ಬಾಗ್ದಾದ್ ಬಸ್ರಾದ ತುಂಬೆಲ್ಲ
ಹೆಣಗಳ ರಾಶಿರಾಶಿ, ತೈಲಬಾವಿಗಳ ಬೆಂಕಿ
ಆಕಾಶವೇ ಛಿದ್ರಿಸಿ ನೆಲನಡುಗಿಸುವ
ಯುದ್ಧ ಯುದ್ಧ ಯುದ್ಧ
ಬ್ಯಾಬಿಲಾನ್ ಸುಂದರಿಯರ ಕಣ್ಣೀರು
ಯುಫ್ರೇಟಿಸ್, ಟೈಗ್ರಿಸ್‌ದೊಳಗೆ ಬೆರೆತು
ಆವಿಯಾದ ಸಿಡಿಲು ಚಿತ್ರಗಳು
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...