Home / ಕವನ / ಕವಿತೆ / ಎಂಥೆಂಥಾ ಚಿತ್ರಗಳು ಈ ಮೋಡಗಳಲ್ಲಿ….

ಎಂಥೆಂಥಾ ಚಿತ್ರಗಳು ಈ ಮೋಡಗಳಲ್ಲಿ….

ಯುರೋಮ್ಯೂಸಿಯಂದ ಬೆತ್ತಲೆ ಚಿತ್ರಗಳ
ಉಬ್ಬರಿಳಿತ
ಮಾರ್ಬಲ್ಲಿನ ಕೆತ್ತನೆಯ ನರನಾಡಿಗಳು
ಮಾರ್ಕೆಟ್ಟಿನ ತುಂಡು ಬಟ್ಟೆಯ ಹುಡುಗಿಯರು
ಚೌಕ ಸುತ್ತ ಬಳಿಸಿ ಮುದ್ದಿಸುವ ಪ್ರೇಮಿಗಳು
ಪರಿವೆ ಇಲ್ಲದೆ ಬಿದ್ದಿರುವ ಹಾದಿಬದಿಯ ಕಾಮಿಗಳು
ಎಂಥೆಂಥಾ ಚಿತ್ರಗಳಿವು…
ಬೆಳ್ಳಿ ಚೌಕಟ್ಟಿನೊಳಗೆ ಹಾಕಿ
ನೀಲಾಕಾಶದ ಭಿತ್ತಿಗೆ ತೂಗು ಹಾಕಿದೆ.

ಲಾಸ್‌ವೆಗಾಸಿನ ಚಿತ್ರ ಆಕಾಶಕ್ಕೇರಿ
ಝಣಝಣಿಸುವ ಚೀಲಕಂಡು ಹಿಗ್ಗೋ ಹಿಗ್ಗು;
ಛೇ! ಇಲ್ಲೆಲ್ಲಿ ಕೃಷ್ಣನ ಚಕ್ರ
ಧರ್ಮ ನೀತಿಯ ಭಾಷಣ
ಕಾಲರ್‍ ಸರಿಪಡಿಸಿ ಟೈ ಬಿಗಿಯುವ ಮುದುಕರು
ಮಠಮಾನ್ಯ ಮರೆತ ಕಪಟರ
ಕಣ್ಣು, ಬಾಯಿ ಅಲ್ಲ ಇಡೀ ದೇಹವೇ ಚಪಲ
ಚಿತ್ರಗಳೊಂದರ ಮೇಲೊಂದು

ಉರಿವಂಗಳದೊಳಗೇ ಹುಟ್ಟಿ ಬೆಳೆದ
ಮರುಭೂಮಿ ಹುಡುಗಿಯರ
ಹೊಳಪು ಕಣ್ಣು ಖರ್ಜೂರವಾಗಿ ಕಾಣಿಸಿದ
ಕೆಲವೇ ಕ್ಷಣ ಅವರೆದೆಯ ಸುಟ್ಟು ಕರಕಲಾದ
ಗಾಯಗಳು ಮಾಯದೇ ನೋವಿನ ರೂಪಿನ
ಮೋಡಗಳೋ ಕಪ್ಪು ಹೆಬ್ಬಂಡೆಗಳೋ
ನಿಂತಲ್ಲೇ ನಿಂತು ಬಿಟ್ಟ ಚಿತ್ರಗಳು

ಬಾಗ್ದಾದ್ ಬಸ್ರಾದ ತುಂಬೆಲ್ಲ
ಹೆಣಗಳ ರಾಶಿರಾಶಿ, ತೈಲಬಾವಿಗಳ ಬೆಂಕಿ
ಆಕಾಶವೇ ಛಿದ್ರಿಸಿ ನೆಲನಡುಗಿಸುವ
ಯುದ್ಧ ಯುದ್ಧ ಯುದ್ಧ
ಬ್ಯಾಬಿಲಾನ್ ಸುಂದರಿಯರ ಕಣ್ಣೀರು
ಯುಫ್ರೇಟಿಸ್, ಟೈಗ್ರಿಸ್‌ದೊಳಗೆ ಬೆರೆತು
ಆವಿಯಾದ ಸಿಡಿಲು ಚಿತ್ರಗಳು
*****

Tagged:

Leave a Reply

Your email address will not be published. Required fields are marked *

ಬೀರ ಹಾಸಿಗೆಯಲ್ಲಿ ಹೊರಳುತ್ತಿದ್ದಾನೆ, ಕಣ್ಣಿಗೆ ನಿದ್ರೆಯಿಲ್ಲ; ಮನಸ್ಸಿಗೆ ಶಾ೦ತಿಯಿಲ್ಲ. ಸಾಯಂಕಾಲ ಊರ ಚಾವಡಿಯಲ್ಲಿ “ಹೆಚ್ಚು ಆಹಾರ ಧಾನ್ಯ ಬೆಳೆಯಿರಿ!” ಎಂಬ ವಿಷಯದ ಮೇಲೆ ಅಧಿಕಾರಿಗಳ ವ್ಯಾಖ್ಯಾನ ಕೇಳಿದ್ದನಾತ. ಆಗಿನಿಂದಲೂ ಅವನಿಗೆ ತಾನೊಂದು ಬಾವಿಯನ್ನೇಕೆ ತೋಡಬಾರದು ಎನ್ನ...

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...