Home / ಕವನ / ಕವಿತೆ / ಎಂಥೆಂಥಾ ಚಿತ್ರಗಳು ಈ ಮೋಡಗಳಲ್ಲಿ….

ಎಂಥೆಂಥಾ ಚಿತ್ರಗಳು ಈ ಮೋಡಗಳಲ್ಲಿ….

ಯುರೋಮ್ಯೂಸಿಯಂದ ಬೆತ್ತಲೆ ಚಿತ್ರಗಳ
ಉಬ್ಬರಿಳಿತ
ಮಾರ್ಬಲ್ಲಿನ ಕೆತ್ತನೆಯ ನರನಾಡಿಗಳು
ಮಾರ್ಕೆಟ್ಟಿನ ತುಂಡು ಬಟ್ಟೆಯ ಹುಡುಗಿಯರು
ಚೌಕ ಸುತ್ತ ಬಳಿಸಿ ಮುದ್ದಿಸುವ ಪ್ರೇಮಿಗಳು
ಪರಿವೆ ಇಲ್ಲದೆ ಬಿದ್ದಿರುವ ಹಾದಿಬದಿಯ ಕಾಮಿಗಳು
ಎಂಥೆಂಥಾ ಚಿತ್ರಗಳಿವು…
ಬೆಳ್ಳಿ ಚೌಕಟ್ಟಿನೊಳಗೆ ಹಾಕಿ
ನೀಲಾಕಾಶದ ಭಿತ್ತಿಗೆ ತೂಗು ಹಾಕಿದೆ.

ಲಾಸ್‌ವೆಗಾಸಿನ ಚಿತ್ರ ಆಕಾಶಕ್ಕೇರಿ
ಝಣಝಣಿಸುವ ಚೀಲಕಂಡು ಹಿಗ್ಗೋ ಹಿಗ್ಗು;
ಛೇ! ಇಲ್ಲೆಲ್ಲಿ ಕೃಷ್ಣನ ಚಕ್ರ
ಧರ್ಮ ನೀತಿಯ ಭಾಷಣ
ಕಾಲರ್‍ ಸರಿಪಡಿಸಿ ಟೈ ಬಿಗಿಯುವ ಮುದುಕರು
ಮಠಮಾನ್ಯ ಮರೆತ ಕಪಟರ
ಕಣ್ಣು, ಬಾಯಿ ಅಲ್ಲ ಇಡೀ ದೇಹವೇ ಚಪಲ
ಚಿತ್ರಗಳೊಂದರ ಮೇಲೊಂದು

ಉರಿವಂಗಳದೊಳಗೇ ಹುಟ್ಟಿ ಬೆಳೆದ
ಮರುಭೂಮಿ ಹುಡುಗಿಯರ
ಹೊಳಪು ಕಣ್ಣು ಖರ್ಜೂರವಾಗಿ ಕಾಣಿಸಿದ
ಕೆಲವೇ ಕ್ಷಣ ಅವರೆದೆಯ ಸುಟ್ಟು ಕರಕಲಾದ
ಗಾಯಗಳು ಮಾಯದೇ ನೋವಿನ ರೂಪಿನ
ಮೋಡಗಳೋ ಕಪ್ಪು ಹೆಬ್ಬಂಡೆಗಳೋ
ನಿಂತಲ್ಲೇ ನಿಂತು ಬಿಟ್ಟ ಚಿತ್ರಗಳು

ಬಾಗ್ದಾದ್ ಬಸ್ರಾದ ತುಂಬೆಲ್ಲ
ಹೆಣಗಳ ರಾಶಿರಾಶಿ, ತೈಲಬಾವಿಗಳ ಬೆಂಕಿ
ಆಕಾಶವೇ ಛಿದ್ರಿಸಿ ನೆಲನಡುಗಿಸುವ
ಯುದ್ಧ ಯುದ್ಧ ಯುದ್ಧ
ಬ್ಯಾಬಿಲಾನ್ ಸುಂದರಿಯರ ಕಣ್ಣೀರು
ಯುಫ್ರೇಟಿಸ್, ಟೈಗ್ರಿಸ್‌ದೊಳಗೆ ಬೆರೆತು
ಆವಿಯಾದ ಸಿಡಿಲು ಚಿತ್ರಗಳು
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...