ಅಮೃತ ಮಂಥನ

ಪುರಾಣ, ಕಾವ್ಯವೊ, ಕಲ್ಪದ್ರುಮವೊ
ಯುಗದ ಪೂರ್ವದ ನಾಕ-ನರಕವೊ
ಜನನ ಮರಣವ ಗೆಲುವ ಸಮರವು
ಸುರಾಸುರರ ಸಮರದ ಪರಿಪಾಠವು |

ನಿತ್ಯ ನಡೆದಿದೆ
ಮಥನ-ಮಂಥನ
ಉಳಿವಳಿವು ಬೆಳೆವೊಳಪಿನ ಸಂಚಿಗೆ
ಶಸ್ತ್ರ-ಶಾಸ್ತ್ರ ಹಿಡಿದ
ಸಮ್ಮೋಹ ಮಾಯೆಯ
ಮುಖವಾಡದೊಳಗಿನ ಸುಖ ಬದುಕಿಗೆ |

ಮಥಿಸಲುದಿಸಿದಮೃತವದೆಲ್ಲವು
ಸುರರ ಕಂಗಳ ಭಾಗ್ಯಕೆ ಹಬ್ಬವು
ಸುರೆಯಮಲಲಿ ಹರಿದ ಬೆವರಿಗೆ
ಸಾವ ಶೂಲ ಪಾಶ ಕಲಹದ ಬೀಜವು |

ಹೆಜ್ಜೆ ಇಡುತಿದೆ,
ಮುಂಡವಿರದ ರುಂಡದ,
ರಾಹುಕೇತುಛಲ ಬಾನೆದೆ ಗೂಡಿಗೆ
ಶಸ್ತ್ರ ಶಾಸ್ತ್ರ ಹಿಡಿದ
ಜಗದೆದೆಯನಲುಗಿಸೋ
ಮುಖವಾಡ ತೆರೆಮರೆ ಸಂಚ ಸಂಚಿಗೆ |

ಯುಗ ಯುಗದ ಸಂಭದವತಾರಿ ದೇವರ
ಛದ್ಮ ವೇಷದ ರಂಗು ರಂಗದ ಸಜ್ಜಿಕೆ
ಮುಗುದ ಕಂಗಳೊಡಲ ವಾಸಿಯವನಿಗೂ
ವೇಷಾಂಬರ ವೇಷದ ಭೂಮಿಕೆ |

ಕಾರಿರುಳಗಣ್ಣಲಿ ಗೆಲುವ ಛಲದಲಿ
ಸಾಗಿದೆ ಪಯಣ ಉನ್ಮತ್ತ ದಿಕ್ಕಿಗೆ
ಗೊತ್ತು-ಗುರಿಯ ಪರಿವೆ-ತೊರೆದ
ಮುಖವಾಡ ಮಸಣದ ಹೊಗೆ ಧಗೆ ನಗೆ |
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಸಂತ
Next post ತೂಗುತಿದೆ ಉಯ್ಯಾಲೆ

ಸಣ್ಣ ಕತೆ

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

cheap jordans|wholesale air max|wholesale jordans|wholesale jewelry|wholesale jerseys