Home / ಕವನ / ಕವಿತೆ / ವಸಂತ

ವಸಂತ

ವಸಂತ ಬಾ ಹಸಿರೆಲ್ಲವೂ
ಒಂದಾಗಿ ಜೀವದ ಫಲ ಆರಿಸುತಲಿದೆ
ನಿನ್ನ ಮಾಂತ್ರಿಕ ಸ್ಪರ್ಶ ಛಂದದ ಪರಾಕ್ರಮ
ಹುಟ್ಟುತ್ತಲಿವೆ ಹೊಸ ಹೊಸ ಚಿಗುರುಗಳು
ಹೊಸ ಜಾತ್ರೆ ಹೊಸ ತೇರುಗಳು
ಬೇಸಿಗೆ ಹರಡಿ ಬಿರು ಬಿಸಿಲು ಅರಳಿವೆ|

ಒಂದಾಗುವ ಪಿಂಡ ಮರು ಹುಟ್ಟು
ಪಡೆದ ಗಳಿಗೆ ಯುಗಾದಿ ಹೊಸವರ್ಷ
ನೆನಪಿನ ಕೋಗಿಲೆಯ ಕೊರಳು ಹೊರಳಾಡುವ
ಇರುಳು ನೇಯುವ ಕಂಬಳಿಗಳ ಸುತ್ತ
ಸತ್ವ ಸಂಸ್ಕೃತಿ ಪೊಟರೆಯಲಿ ಚಿಲಿಪಿಲಿ ಗಾನ
ಎದೆಯ ಆಳಕೆ ನೀ ಬರೆದ ಕವಿತೆ|

ಬಾ ವಸಂತ ನದಿಯ ದಡಕೆ
ಕೈ ಮುಗಿವೆ ನೆನೆದ ಮನದಲಿ
ಎರಡರ ನಡುವೆ ಒಂದು ಒಲವ ಹರಡಿ
ಉಸಿರೇ ಹಸಿರಾಗುವ ಗುಹೇಶ್ವರನ ಬಯಲು
ಎಲ್ಲಿಯೂ ನಿಲ್ಲದ ಜೀವಭಾವ
ವಿದಾಯವಿಲ್ಲದ ಬೆಳಕು ನಡಿಗೆ|

ಹೇಳು ವಸಂತ ಚಿಗುರಿಗೆ ಕೆಂಬಣ್ಣ
ಸೂಸಿ ಹುಟ್ಟುವ ಸೂರ್ಯನ ಜೊತೆ ಸರಸ
ದೋಣಿ ತೇಲಿದ ನದಿಯ ಅಲೆಗುಂಟ
ಗಾಳಿ ಗಂಧ ಹೂವು ಚಿಟ್ಟೆ ಚಿಲಿಪಿಲಿ
ಜಗದ ಗಂತವ್ಯ ಮುಗಿಲ ಮುಟ್ಟುವ ಹಂತ
ಮೋಡಗಳಾಗಲು ಕಾತರಿಸಿದ ಹಸಿಗಳು|

ಎಲ್ಲೆಲ್ಲೂ ಮುರಳಿಯ ನಾದಲೋಕ
ಜಗದ ವಿಸ್ಮಯಗಳ ಸಂಕೇತಗಳು
ನೀ ಬಂದರೆ ಹಾದಿ ಬೀದಿಯ ತುಂಬ
ಬೆಳಕು ಬೆಳದಿಂಗಳು ಪಸರಿಸಿ ಹಾಯಿ
ಎದೆಯ ಭಾವಕೆ ಹಾಡಾದ ಗೀತೆಗಳು
ಮತ್ತೆ ಎಲ್ಲವೂ ನೆನಪಾದ ಲಹರಿಯ ಪಾಡು.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...