ಜ್ಞಾನ

ಸದ್ದಿಲ್ಲದೇ ಅರಳಿದ ಹೂಗಳು
ಮರದ ತುಂಬ ಹರಡಿ ಹಾಸಿತು
ಜೀವಗಂಧ ಝೇಂಕಾರದಲಿ ದುಂಬಿ ತಂಡ
ಗಾಳಿ ಬೀಸಿತು ತಂಪಾಗಿ ಮರದಲಿ
ಕುಳಿತ ಹಕ್ಕಿಗಳು ಉಲಿದವು ಇಂಪಾಗಿ.

ಗೂಡು ಕಟ್ಟುವ ನೆರಳು ಮಣ್ಣ
ಕಣಕಣದಲಿ ಹರಡಿ ಆಳಕ್ಕಿಳಿದ ಕಣ್ಣು
ತಾಯಿಬೇರು ನೂರು ರೂಪಕಗಳು
ಹುಟ್ಟಿದ ಜೀವ ಜಾಲ ಮೈ ಮನಸ್ಸಿನಲಿ
ಉಳಿದ ಮೌನ ಪ್ರತಿಧ್ವನಿ ರಿಂಗಣ.

ಆಳಕ್ಕೆ ಇಳಿದ ಭಾವಬಂಧ
ಮೇಲಕ್ಕೆ ಹಬ್ಬಿದ ಚಿಗುರಬಳ್ಳಿ
ಬಿಸಿಲು ಮಳೆ ಬೆಳದಿಂಗಳು
ಬೆಳೆಯುತ್ತ ಒಂದರೊಳಗೆ ಮತ್ತೊಂದು
ಎಂದೂ ಬರಿದಾಗದ ಕಡಲ ತಟ.

ಈ ಬೆಳವಣಿಗೆಯ ಬೆಳೆಯ ಇಳೆ
ಕೊನೆಯೆಂಬುದಿಲ್ಲ ಕ್ರಿಯೆ ಎದೆಯೊಳಗೆ
ಸೂರ್ಯ ಮುಳುಗಿದ ಮೇಲೆ ಬೆಳಕ ಕೊಡುವ ಚಂದ್ರ
ಕಣ್ಣಕಾಂತಿಯಲಿ ತೇಲಿದ ಗೌತಮನ ಬೆಳಕು
ಒಳಗೊಳಗೆ ಉಳಿದ ಪೂರ್ಣ ಪ್ರಜ್ಞೆ ಜ್ಞಾನ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನೀವು ಹೆಂಗಸರಂತು ಎಳೆಯ ಮಕ್ಕಳಹಾಗೆ
Next post ಅರಮನೆ

ಸಣ್ಣ ಕತೆ

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

cheap jordans|wholesale air max|wholesale jordans|wholesale jewelry|wholesale jerseys