ಸತ್ಯ

ಕಲ್ಲು ಮುಳ್ಳಿನ ಹಾದಿ ಸವೆದ
ಬದುಕು ಅಳೆಯಲಾರದ ಕಾಲ
ಇಂದು ನಿನ್ನೆಯ ನೆನಪುಗಳ ಬಂಧಿ
ಬಯಕೆಗಳ ನಾಳೆಗಳ ಆಲಂಗಿಸು
ಜೀವ ಎಂದೂ ಹಿಮ್ಮುಖವಾಘಿ ಚಲಿಸುವದಿಲ್ಲ.

ದುಃಖದ ಸೆರಗಿನಲಿ ಸುಖದ ಮುಖ
ತಕ್ಕಡಿ ತೂಗಿದಂತೆ ಸಮ ಸಮ
ಆತ್ಮಗಳು ಮುಲುಕಾಡಿ ವಿರಮಿಸುತ್ತವೆ
ತಮ್ಮ ಮನೆಗಳು ಸ್ವಂತ ಆಲೋಚನೆಗಳು
ಸಮುದ್ರದ ಬದುಕು ಎಂದೂ ಖಾಲಿಯಾಗುವದಿಲ್ಲ.

ಮೊಗೆ ಮೊಗೆದು ಕುಡಿದ ಖುಷಿಯ ಭಾವಿ
ಎಂದೋ ಒಮ್ಮೆ ಕಂಬನಿಗಳಿಂದ ತುಂಬಿತ್ತು.
ಊಟದ ಅನ್ನ ಅರಳುವುದು ಅವರಿವರ
ಶ್ರಮದ ಕೈಗಳು ಸುಃಖ ದುಃಖ
ಆಕಾಶ ನೀಲಿಯು ಎಂದೂ ಬರಿದಾಗುವದಿಲ್ಲ.

ಸಮುದ್ರದ ಅಲೆಗಳು ದಡಕ್ಕೆ ಅಪ್ಪಳಿಸುತ್ತವೆ
ಭೂಮಿಯ ಒಗಟೆ ಆಕಾಶದ ಗೀತೆ
ಸ್ವಾತಂತ್ರ್‍ಯ ಬೇಕಿದ್ದರೆ ಆವಿಯಾಗಿ ಮೋಡ
ಬೀಜಗಳು ಕಟ್ಟಿ ಬಯಲು ತುಂಬ
ನಿರಾಕಾರದ ಆಕಾರಗಳು ಎಂದೂ ನಿಂತಲ್ಲಿ ನಿಲ್ಲುವದಿಲ್ಲ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬೆಳಗು ನನ್ನ ಉಷೆ!
Next post ನಮ್ಮ ಬಾಪೂ

ಸಣ್ಣ ಕತೆ

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…