ಸತ್ಯ

ಕಲ್ಲು ಮುಳ್ಳಿನ ಹಾದಿ ಸವೆದ
ಬದುಕು ಅಳೆಯಲಾರದ ಕಾಲ
ಇಂದು ನಿನ್ನೆಯ ನೆನಪುಗಳ ಬಂಧಿ
ಬಯಕೆಗಳ ನಾಳೆಗಳ ಆಲಂಗಿಸು
ಜೀವ ಎಂದೂ ಹಿಮ್ಮುಖವಾಘಿ ಚಲಿಸುವದಿಲ್ಲ.

ದುಃಖದ ಸೆರಗಿನಲಿ ಸುಖದ ಮುಖ
ತಕ್ಕಡಿ ತೂಗಿದಂತೆ ಸಮ ಸಮ
ಆತ್ಮಗಳು ಮುಲುಕಾಡಿ ವಿರಮಿಸುತ್ತವೆ
ತಮ್ಮ ಮನೆಗಳು ಸ್ವಂತ ಆಲೋಚನೆಗಳು
ಸಮುದ್ರದ ಬದುಕು ಎಂದೂ ಖಾಲಿಯಾಗುವದಿಲ್ಲ.

ಮೊಗೆ ಮೊಗೆದು ಕುಡಿದ ಖುಷಿಯ ಭಾವಿ
ಎಂದೋ ಒಮ್ಮೆ ಕಂಬನಿಗಳಿಂದ ತುಂಬಿತ್ತು.
ಊಟದ ಅನ್ನ ಅರಳುವುದು ಅವರಿವರ
ಶ್ರಮದ ಕೈಗಳು ಸುಃಖ ದುಃಖ
ಆಕಾಶ ನೀಲಿಯು ಎಂದೂ ಬರಿದಾಗುವದಿಲ್ಲ.

ಸಮುದ್ರದ ಅಲೆಗಳು ದಡಕ್ಕೆ ಅಪ್ಪಳಿಸುತ್ತವೆ
ಭೂಮಿಯ ಒಗಟೆ ಆಕಾಶದ ಗೀತೆ
ಸ್ವಾತಂತ್ರ್‍ಯ ಬೇಕಿದ್ದರೆ ಆವಿಯಾಗಿ ಮೋಡ
ಬೀಜಗಳು ಕಟ್ಟಿ ಬಯಲು ತುಂಬ
ನಿರಾಕಾರದ ಆಕಾರಗಳು ಎಂದೂ ನಿಂತಲ್ಲಿ ನಿಲ್ಲುವದಿಲ್ಲ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬೆಳಗು ನನ್ನ ಉಷೆ!
Next post ನಮ್ಮ ಬಾಪೂ

ಸಣ್ಣ ಕತೆ

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

cheap jordans|wholesale air max|wholesale jordans|wholesale jewelry|wholesale jerseys