Home / ಕವನ / ಕವಿತೆ / ಅಂತರ

ಅಂತರ

ಈ ಮೊದಲು ತಿಳಿದುಕೊಂಡಿದ್ದೆ
ಇಲ್ಲಿಯ “ಈ ಗಾಳಿ ಈ ಬೆಳಕು ಈ ಎಲ್ಲಜೀವಿಗಳೂ”
ಎಲ್ಲಾ ಕಡೆಗೂ ಎಲ್ಲಾ ದೇಶದೊಳಗೂ ಒಂದ ಅಂತ.
ಹಾಗಂತನ ಏನೋ ಕೆಲವೊಂದು ಅಥವಾ ಕೆಲವೊಂದೇ
ಪರಿಧಿಯೊಳಗ ಸುತ್ತಿಕೊಂಡು ಬಹಳ ಆರಾಮವಾಗಿ
ಇದೇ ಒಳ್ಳೆಯದು ಅಂತ ಇದ್ದು ಬಿಟ್ಟಿದ್ದೆ.
ಆದರs ನಾ ಎಂದ ಅರೇಬಿಯ ಹೊಕ್ಕು
ಲಂಡನ್‌ದ ಹಿತ್ರೂ Airport ದೊಳಗ ಕಾಲಿಟ್ಟ
ಅಮಸ್ಟರಡ್ಯಾಮ್‌ನಿಂದ ಹೊರಗ ಹಾರಿಬರೋವರೆಗೂ
ನೋಡಿದ್ನಲ್ಲ…..
ಈ ಗಾಳಿ ಮತ್ತು ಜನರೊಳಗ
ಬಹಳ ಹೊಂದಾಣಿಕೆ ಕೊಡುವಂಥ
‘ಬಿಸಿಲಿನ ಬೆಳಕಿದೆ’ ಅನಿಸಿತು
ಆವಾಗ ನನಗ ಗೊತ್ತಾದದ್ದು
ನೆತ್ತಿ ಸುಡುವದಕ್ಕಿಂತಲೂ ಹೆಚ್ಚಿನ ಬಿಸಿಲು
ನಮ್ಮಲ್ಲಿ ಇನ್ನೊಂದಿದೆ
ಅದೇ ಲಂಚ – ಅನ್ಯಾಯ ಅಂತ
ಜನರಿಂದ ಜನರಲ್ಲೇ ವಿಶ್ವಾಸ ಕಳಕೊಳ್ಳುವ
ರೊಚ್ಚು ಕಿಚ್ಚಿನ ಜ್ವಾಲೆಗಳಿವೆ
ಅದೆ ಗಾಳಿ ಅಂತ…..
ಪುತ ಪುತನೆ ಹುಟ್ಟಿ ಬೆಲೆ ಇಲ್ಲದೆ
ಬಿದ್ದು ಹೋಗುವ ಜಂತುಗಳಿವೆ
ಅವೇ ಜೀವಿಗಳೂ ಎಂದು…..

(ಯುರೋಪ ಪ್ರವಾಸದ ನಂತರ ತಕ್ಷಣ ಆದ ಒಂದು ಅನಿಸಿಕೆ)
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...