ಅಂತರ

ಈ ಮೊದಲು ತಿಳಿದುಕೊಂಡಿದ್ದೆ
ಇಲ್ಲಿಯ “ಈ ಗಾಳಿ ಈ ಬೆಳಕು ಈ ಎಲ್ಲಜೀವಿಗಳೂ”
ಎಲ್ಲಾ ಕಡೆಗೂ ಎಲ್ಲಾ ದೇಶದೊಳಗೂ ಒಂದ ಅಂತ.
ಹಾಗಂತನ ಏನೋ ಕೆಲವೊಂದು ಅಥವಾ ಕೆಲವೊಂದೇ
ಪರಿಧಿಯೊಳಗ ಸುತ್ತಿಕೊಂಡು ಬಹಳ ಆರಾಮವಾಗಿ
ಇದೇ ಒಳ್ಳೆಯದು ಅಂತ ಇದ್ದು ಬಿಟ್ಟಿದ್ದೆ.
ಆದರs ನಾ ಎಂದ ಅರೇಬಿಯ ಹೊಕ್ಕು
ಲಂಡನ್‌ದ ಹಿತ್ರೂ Airport ದೊಳಗ ಕಾಲಿಟ್ಟ
ಅಮಸ್ಟರಡ್ಯಾಮ್‌ನಿಂದ ಹೊರಗ ಹಾರಿಬರೋವರೆಗೂ
ನೋಡಿದ್ನಲ್ಲ…..
ಈ ಗಾಳಿ ಮತ್ತು ಜನರೊಳಗ
ಬಹಳ ಹೊಂದಾಣಿಕೆ ಕೊಡುವಂಥ
‘ಬಿಸಿಲಿನ ಬೆಳಕಿದೆ’ ಅನಿಸಿತು
ಆವಾಗ ನನಗ ಗೊತ್ತಾದದ್ದು
ನೆತ್ತಿ ಸುಡುವದಕ್ಕಿಂತಲೂ ಹೆಚ್ಚಿನ ಬಿಸಿಲು
ನಮ್ಮಲ್ಲಿ ಇನ್ನೊಂದಿದೆ
ಅದೇ ಲಂಚ – ಅನ್ಯಾಯ ಅಂತ
ಜನರಿಂದ ಜನರಲ್ಲೇ ವಿಶ್ವಾಸ ಕಳಕೊಳ್ಳುವ
ರೊಚ್ಚು ಕಿಚ್ಚಿನ ಜ್ವಾಲೆಗಳಿವೆ
ಅದೆ ಗಾಳಿ ಅಂತ…..
ಪುತ ಪುತನೆ ಹುಟ್ಟಿ ಬೆಲೆ ಇಲ್ಲದೆ
ಬಿದ್ದು ಹೋಗುವ ಜಂತುಗಳಿವೆ
ಅವೇ ಜೀವಿಗಳೂ ಎಂದು…..

(ಯುರೋಪ ಪ್ರವಾಸದ ನಂತರ ತಕ್ಷಣ ಆದ ಒಂದು ಅನಿಸಿಕೆ)
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕನಸು ನನಸುಗಳೆಲ್ಲ ಯಾರಿಗೋ ಮುಡಿಪಾಗಿ
Next post ಲಿಂಗಮ್ಮನ ವಚನಗಳು – ೧೭

ಸಣ್ಣ ಕತೆ

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

cheap jordans|wholesale air max|wholesale jordans|wholesale jewelry|wholesale jerseys