Home / ಕವನ / ಕವಿತೆ / ಅಸ್ಪೃಶ್ಯರು

ಅಸ್ಪೃಶ್ಯರು

ನಾಯಿಗಳಿದ್ದಾವೆ! ಎಚ್ಚರಿಕೆ! ಎಂದು
ಯಾಕೆ ಬೆದರಿಸುತ್ತೀರಿ, ಫಲಕದ ಹಿಂದೆ ನಿಂದು?
ನಾವು ಬರೇ ಈ ಬೀದಿಯಲ್ಲಷ್ಟೆ ಹೋಗುತ್ತೇವೆ
ಮೌನ ಅಸಹ್ಯವಾದಾಗ ಮಾತಾಡುತ್ತೇವೆ
ಅಳದಿರುವುದಕ್ಕಾಗಿ ಒಮ್ಮೊಮ್ಮೆ ನಗುತ್ತೇವೆ

ನಾಯಿಗಳನ್ನು ಛೂ ಬಿಟ್ಟು ಬೆದರಿಸುತ್ತೀರಿ ನೀವು
ನಾಯಿಗಳಿದ್ದಾವೆ ಸ್ವಾಮಿ ಗೊತ್ತು ನಮಗೆ
ನಿಮ್ಮ ನಾಯಿಗಳಿದ್ದಾವೆ ಕಾರುಗಳಿದ್ದಾವೆ
ಪೋಷ್ ಹೊಟೇಲುಗಳಿವೆ ಕ್ಯಾಬರೆಸ್ವರ್ಗದ ದೇವರು ನೀವು
ಈಚೆಗೆ ಬೀದಿಗಳಲ್ಲಿ ನಾವೂ ಇದ್ದೇವೆ ಅಸ್ಪೃಶ್ಯ ವರ್ಗದ ಜನರು

ಅಪರಿಚಿತರಂತೆ ನೋಡುವುದೇಕೆ, ಸ್ವಾಮಿ?
ನಮಗೆ ಬಹು ಹಳೆಕಾಲದ ಪರಿಚಯವುಂಟು ಮರೆತಿರ?
ಹಿಂದೆ ಬ್ಯಾಬಿಲೋನಿನಲ್ಲಿ ನಿಮ್ಮ ಗಾಣ
ಎಳೆದವರು ನಾವು
ಮಾರುಕಟ್ಟೆಗಳಲ್ಲಿ ನಮ್ಮನ್ನು ಹರಾಜಿಗೆ
ಮಾರಿದವರು ನೀವು
ನಿಮ್ಮ ಊಳಿಗದ ಗೂನು ಈ ಬೆನ್ನ ಮೇಲುಂಟು
ನಮ್ಮ ಮಕ್ಕಳಿಗೂ ಇದರ ಹೆದರಿಕೆಯುಂಟು

ಸಂಧಾನಗಕ್ಕಾಗಿ ನೀವು ಬಂದದ್ದೇನೋ ಖರೆ
ಆದರೆ ಹೇಗೆ ಮಾತಾಡಿದರೂ
ನಮ್ಮ ಭಾಷೆ ನಿಮಗೆ ಅರ್ಥವಾಗುವುದಿಲ್ಲ
ಹಾಗೆಂದು ನಿಮ್ಮ ಅಂಬೋಣ
ಎನು ಮಾಡೋಣ, ಹೇಳಿ
ನೀವು ಪ್ರಯತ್ನಿಸದೇನೆ, ನಿಮಗಿಷ್ಟವಿಲ್ಲದೇನೆ
ಅರ್ಥವಾದೀತು ಎಂದಾದರೂ ಒಮ್ಮೆ

ಇಷ್ಟಕ್ಕೆಲ್ಲಾ ಯಾಕೆ ಹೀಗೆ ಹಿಸ್ಟೀರಿಯಾ ಬಡಿದವರಂತೆ ಕೂಗುತ್ತೀರಿ?
ಸಾಹಿತ್ಯ ಸಂಸ್ಕಾರ ಸಂಪತ್ತು ಅಧಿಕಾರ ಎಲ್ಲವೂ ನಿಮ್ಮದೇ ಸ್ವತ್ತು
ಎಂದ ಮೇಲೆ ಯಾಕೆ ಹೀಗೆ ಕೂಗಾಡುತ್ತೀರಿ?
ಕ್ರಾಂತಿಗಳು ಬಂದಿವೆ ನಿಜ
ಬಂದು ಹೊರಟುಹೋಗಿವೆ
ಅವು ಹೊರಟುಹೋದ್ದರಿಂದಲೇ ನಿಮ್ಮ ಪೀಳಿಗೆ ಬೆಳೆದಿದೆ
ಬೆಳೆಯುತ್ತಲೇ ಇದೆ
ಎಂದ ಮೇಲೆ ಸುಮ್ಮನೆ ಯಾಕೆ ಹೀಗೆ ಒದ್ದಾಡುತ್ತೀರಿ?

ಯಾಕೆಂದರೆ, ಚರಿತ್ರೆ ಆವರ್ತಿಸುವುದಿಲ್ಲ
ವರ್ತಮಾನ ಹೀಗೇ ನಿಂತಿರುವುದಿಲ್ಲ
ಏನೋ ಸಂಭವಿಸಲಿದೆ-ಎಂದೆ?
ಇದು ನಮಗೆ ಗೊತ್ತು
ನಮಗೆ ಗೊತ್ತೆಂದು ತಿಳಿದದ್ದರಿಂದಲೆ
ನಮ್ಮ ಕಂಡಾಗ ನಿಮ್ಮ ಮುಖಕ್ಕೊಂದು ಅಪೂರ್ವ
ಪ್ರೇತಕಳೆ ಬರುತ್ತದೆ: ಇದು ಸಹಜ
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...