ಅಧೋಗತಿಗೆ ಕನ್ನಡ

ಕನ್ನಡ ನಾಡಿನ ರಸಿಕ ಜನಗಳೆ
ಕನ್ನಡಮ್ಮನ ಸ್ಥಿತಿ ಎಷ್ಟು ಬಲ್ಲಿರೋ
ನೀವು ಓ ಕನ್ನಡ ಬಂಧುಗಳೆ?

ಕನ್ನಡಮ್ಮನ ಸ್ಥಿತಿ ಅದೋಗತಿಗೆ
ಯಾರು ಕಾರಣಕರ್ತರು ನೀವು ಬಲ್ಲಿರೋ
ಕನ್ನಡಮ್ಮನ ಹೆಸರಿನಲ್ಲಿ ಸಾಹಿತ್ಯ ಪರಿಷತ್
ಬಳಸಿಕೊಂಡು ಸ್ವಾರ್ಥ ಜೀವನಕ್ಕೆ
ಒಳಿತು ಬಯಸಿ ಕನ್ನಡಮ್ಮಗೆ
ಕೇಡು ಬಯಸಿ ಸಾಹಿತ್ಯ ಪರಿಷತ್ತಿಗೆ
ಮೋಸದಿಂದ ದ್ರೋಹ ಬಗೆಯುವ
ಜನ ಕನ್ನಡಮ್ಮನ ರಕ್ಷಕರೆ?

ಕನ್ನಡಮ್ಮನ ಹೆಸರು ಪ್ರತಿಷ್ಟೆಗೆ
ಸಮ್ಮೇಳನ ನಿರ್ವಹಿಸುವ ನೆಪ
ಸುರಿಮಳೆಯಂತೆ ಸುರಿದು ಬಂದ ಹಣ
ಯಾವ ಕಡೆ ನೋಡಿದರು ಸ್ಥಿತಿ ಗಂಭೀರ
ಅಲ್ಲೋಲ ಕಲ್ಲೋಲ ಎಲ್ಲೆಲ್ಲೂ ಕ್ಷಿಮಾರಿ
ಅವನಿಯ ಮೇಲೆ ಅಕನ್ನಡಿಗರ
ಭಾರವ ಮಡುಗಟ್ಟಿ ನಿಂತಿದೆ ಓ
ಕನ್ನಡಿಗರೆ ನೀ ಯಾರು ಬಲ್ಲಿರೋ

ಸಾಹಿತ್ಯ ಪರಿಷತ ಚುನಾವಣೆ
ಕನ್ನಡಮ್ಮನ ಕೊಲೆಗಡುಕರೆ ಕಣದಲ್ಲಿ
ಅಧ್ಯಕ್ಷ ಸ್ಥಾನಕ್ಕೆ ಹಗಲಿರುಳು ಯತ್ನ
ಪರಿಸ್ಥಿತಿ ಮತದಾರರೇ ನಿರ್ಧಾರ
ಭೃಷ್ಟ ಕನ್ನಡಾಭಿಮಾನಿಗೆ ತೊರೆದು
ಶಿಷ್ಟ ಕನ್ನಡಾಭಿಮಾನಿಗೆ ಮತನೀಡಿ ಬೆಂಬಲಿಸಿ
ಜಯಕ್ಕೆ ಯತ್ನಿಸಿ ಓ ಮತದಾರ ಬಂಧುವೇ
ನಿಮಗೆ ನನ್ನ ಅನಂತ ವಂದನೆಗಳು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಸ್ಪೃಶ್ಯರು
Next post ಆರೋಪ – ೭

ಸಣ್ಣ ಕತೆ

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…