Home / ಕವನ / ಕವಿತೆ / ಅಧೋಗತಿಗೆ ಕನ್ನಡ

ಅಧೋಗತಿಗೆ ಕನ್ನಡ

ಕನ್ನಡ ನಾಡಿನ ರಸಿಕ ಜನಗಳೆ
ಕನ್ನಡಮ್ಮನ ಸ್ಥಿತಿ ಎಷ್ಟು ಬಲ್ಲಿರೋ
ನೀವು ಓ ಕನ್ನಡ ಬಂಧುಗಳೆ?

ಕನ್ನಡಮ್ಮನ ಸ್ಥಿತಿ ಅದೋಗತಿಗೆ
ಯಾರು ಕಾರಣಕರ್ತರು ನೀವು ಬಲ್ಲಿರೋ
ಕನ್ನಡಮ್ಮನ ಹೆಸರಿನಲ್ಲಿ ಸಾಹಿತ್ಯ ಪರಿಷತ್
ಬಳಸಿಕೊಂಡು ಸ್ವಾರ್ಥ ಜೀವನಕ್ಕೆ
ಒಳಿತು ಬಯಸಿ ಕನ್ನಡಮ್ಮಗೆ
ಕೇಡು ಬಯಸಿ ಸಾಹಿತ್ಯ ಪರಿಷತ್ತಿಗೆ
ಮೋಸದಿಂದ ದ್ರೋಹ ಬಗೆಯುವ
ಜನ ಕನ್ನಡಮ್ಮನ ರಕ್ಷಕರೆ?

ಕನ್ನಡಮ್ಮನ ಹೆಸರು ಪ್ರತಿಷ್ಟೆಗೆ
ಸಮ್ಮೇಳನ ನಿರ್ವಹಿಸುವ ನೆಪ
ಸುರಿಮಳೆಯಂತೆ ಸುರಿದು ಬಂದ ಹಣ
ಯಾವ ಕಡೆ ನೋಡಿದರು ಸ್ಥಿತಿ ಗಂಭೀರ
ಅಲ್ಲೋಲ ಕಲ್ಲೋಲ ಎಲ್ಲೆಲ್ಲೂ ಕ್ಷಿಮಾರಿ
ಅವನಿಯ ಮೇಲೆ ಅಕನ್ನಡಿಗರ
ಭಾರವ ಮಡುಗಟ್ಟಿ ನಿಂತಿದೆ ಓ
ಕನ್ನಡಿಗರೆ ನೀ ಯಾರು ಬಲ್ಲಿರೋ

ಸಾಹಿತ್ಯ ಪರಿಷತ ಚುನಾವಣೆ
ಕನ್ನಡಮ್ಮನ ಕೊಲೆಗಡುಕರೆ ಕಣದಲ್ಲಿ
ಅಧ್ಯಕ್ಷ ಸ್ಥಾನಕ್ಕೆ ಹಗಲಿರುಳು ಯತ್ನ
ಪರಿಸ್ಥಿತಿ ಮತದಾರರೇ ನಿರ್ಧಾರ
ಭೃಷ್ಟ ಕನ್ನಡಾಭಿಮಾನಿಗೆ ತೊರೆದು
ಶಿಷ್ಟ ಕನ್ನಡಾಭಿಮಾನಿಗೆ ಮತನೀಡಿ ಬೆಂಬಲಿಸಿ
ಜಯಕ್ಕೆ ಯತ್ನಿಸಿ ಓ ಮತದಾರ ಬಂಧುವೇ
ನಿಮಗೆ ನನ್ನ ಅನಂತ ವಂದನೆಗಳು.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...