Home / ಕವನ / ಕವಿತೆ / ಅಧೋಗತಿಗೆ ಕನ್ನಡ

ಅಧೋಗತಿಗೆ ಕನ್ನಡ

ಕನ್ನಡ ನಾಡಿನ ರಸಿಕ ಜನಗಳೆ
ಕನ್ನಡಮ್ಮನ ಸ್ಥಿತಿ ಎಷ್ಟು ಬಲ್ಲಿರೋ
ನೀವು ಓ ಕನ್ನಡ ಬಂಧುಗಳೆ?

ಕನ್ನಡಮ್ಮನ ಸ್ಥಿತಿ ಅದೋಗತಿಗೆ
ಯಾರು ಕಾರಣಕರ್ತರು ನೀವು ಬಲ್ಲಿರೋ
ಕನ್ನಡಮ್ಮನ ಹೆಸರಿನಲ್ಲಿ ಸಾಹಿತ್ಯ ಪರಿಷತ್
ಬಳಸಿಕೊಂಡು ಸ್ವಾರ್ಥ ಜೀವನಕ್ಕೆ
ಒಳಿತು ಬಯಸಿ ಕನ್ನಡಮ್ಮಗೆ
ಕೇಡು ಬಯಸಿ ಸಾಹಿತ್ಯ ಪರಿಷತ್ತಿಗೆ
ಮೋಸದಿಂದ ದ್ರೋಹ ಬಗೆಯುವ
ಜನ ಕನ್ನಡಮ್ಮನ ರಕ್ಷಕರೆ?

ಕನ್ನಡಮ್ಮನ ಹೆಸರು ಪ್ರತಿಷ್ಟೆಗೆ
ಸಮ್ಮೇಳನ ನಿರ್ವಹಿಸುವ ನೆಪ
ಸುರಿಮಳೆಯಂತೆ ಸುರಿದು ಬಂದ ಹಣ
ಯಾವ ಕಡೆ ನೋಡಿದರು ಸ್ಥಿತಿ ಗಂಭೀರ
ಅಲ್ಲೋಲ ಕಲ್ಲೋಲ ಎಲ್ಲೆಲ್ಲೂ ಕ್ಷಿಮಾರಿ
ಅವನಿಯ ಮೇಲೆ ಅಕನ್ನಡಿಗರ
ಭಾರವ ಮಡುಗಟ್ಟಿ ನಿಂತಿದೆ ಓ
ಕನ್ನಡಿಗರೆ ನೀ ಯಾರು ಬಲ್ಲಿರೋ

ಸಾಹಿತ್ಯ ಪರಿಷತ ಚುನಾವಣೆ
ಕನ್ನಡಮ್ಮನ ಕೊಲೆಗಡುಕರೆ ಕಣದಲ್ಲಿ
ಅಧ್ಯಕ್ಷ ಸ್ಥಾನಕ್ಕೆ ಹಗಲಿರುಳು ಯತ್ನ
ಪರಿಸ್ಥಿತಿ ಮತದಾರರೇ ನಿರ್ಧಾರ
ಭೃಷ್ಟ ಕನ್ನಡಾಭಿಮಾನಿಗೆ ತೊರೆದು
ಶಿಷ್ಟ ಕನ್ನಡಾಭಿಮಾನಿಗೆ ಮತನೀಡಿ ಬೆಂಬಲಿಸಿ
ಜಯಕ್ಕೆ ಯತ್ನಿಸಿ ಓ ಮತದಾರ ಬಂಧುವೇ
ನಿಮಗೆ ನನ್ನ ಅನಂತ ವಂದನೆಗಳು.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...