ಪಂಚತಂತ್ರದ ಕುದುರೆ

ಕಣ್ಣಿನ ದರ್ಜಿಯೊಳಗೆ
ಚಂದ್ರ-ಚುಕ್ಕಿ, ಆಕಾಶ-ಮೋಡ, ಹಗಲು-ರಾತ್ರಿ
ಕಾಮನ ಬಿಲ್ಲುಗಳನೆಲ್ಲ ಹಿಡಿದು
ಸೂರ್ಯ ಕಿರಣಗಳ ಬಣ್ಣ ಬಣ್ಣದೆಳೆಗಳಿಂದ
ದಾವನಿ ಹೊಲೆದು ಮುಗಿಸಿ
ಹುಬ್ಬಿನ ಚೌಕಟ್ಟಿಗೆ ಹೊಂದಿಸಿ
ಮನದೊಳಗೆ ತೂಗು ಹಾಕಿ-ಸಂತೋಷಿಸುತ್ತಿದ್ದಂತೆ
ಗಾಢವಾದ ನಿದ್ರೆ. ಅದನ್ನೇ ಹೊದ್ದು ಸೀಟಿಗೊರಗಿದ್ದು-
ಪಂಚತಂತ್ರದ ಕುದುರೆಯ ಕೆನೆತ
ಏಳು ಸಮುದ್ರದಾಟಿ ಏಳು ಗುಡ್ಡದಾಟಿ
ಅಲ್ಲೊಂದು ಅರಮನೆ, ಅಲ್ಲೊಬ್ಬ ರಾಜಕುಮಾರ
ಅವನ ನಾಗಾಲೋಟದ ಕುದುರೆ,
ರೆಕ್ಕೆಗಳು ಮೂಡಿ ಕುರುರೆ ಏರಿದ್ದೇನು
ಯಕ್ಷಿನಿಯರ ಮುಗುಳ್ನಗೆ ನಾಚಿಸಿದ್ದೇನು
ಮೋಡ ಸಮುದ್ರಗಳನೀಜಿ
ಮೋಡ ಗುಡ್ಡಗಳನೇರಿ
ಬಣ್ಣದ ದಾವನಿ ಹಾರಾಡಿಸುತ
ಮೇರಿ ಲಾಲ್ ದುಪಟ್ಟಾ ಮಲ್‌ಮಲ್ ಹಾಡುತ್ತಿದ್ದಂತೆ
ರಾಜಕುಮಾರನ ಮನೆ ಅಂಗಳಕ್ಕಿಳಿದದ್ದು-
ಸೂರ್ಯ ನಕ್ಕ, ಪಡುವಣ ಮುಖ
ಕೆಂಪೇರಿತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮೂರು ಲಂಗಗಳ ಮಾತುಕತೆ
Next post ವೃತ್ತ

ಸಣ್ಣ ಕತೆ

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…