ಕಣ್ಣಿನ ದರ್ಜಿಯೊಳಗೆ
ಚಂದ್ರ-ಚುಕ್ಕಿ, ಆಕಾಶ-ಮೋಡ, ಹಗಲು-ರಾತ್ರಿ
ಕಾಮನ ಬಿಲ್ಲುಗಳನೆಲ್ಲ ಹಿಡಿದು
ಸೂರ್ಯ ಕಿರಣಗಳ ಬಣ್ಣ ಬಣ್ಣದೆಳೆಗಳಿಂದ
ದಾವನಿ ಹೊಲೆದು ಮುಗಿಸಿ
ಹುಬ್ಬಿನ ಚೌಕಟ್ಟಿಗೆ ಹೊಂದಿಸಿ
ಮನದೊಳಗೆ ತೂಗು ಹಾಕಿ-ಸಂತೋಷಿಸುತ್ತಿದ್ದಂತೆ
ಗಾಢವಾದ ನಿದ್ರೆ. ಅದನ್ನೇ ಹೊದ್ದು ಸೀಟಿಗೊರಗಿದ್ದು-
ಪಂಚತಂತ್ರದ ಕುದುರೆಯ ಕೆನೆತ
ಏಳು ಸಮುದ್ರದಾಟಿ ಏಳು ಗುಡ್ಡದಾಟಿ
ಅಲ್ಲೊಂದು ಅರಮನೆ, ಅಲ್ಲೊಬ್ಬ ರಾಜಕುಮಾರ
ಅವನ ನಾಗಾಲೋಟದ ಕುದುರೆ,
ರೆಕ್ಕೆಗಳು ಮೂಡಿ ಕುರುರೆ ಏರಿದ್ದೇನು
ಯಕ್ಷಿನಿಯರ ಮುಗುಳ್ನಗೆ ನಾಚಿಸಿದ್ದೇನು
ಮೋಡ ಸಮುದ್ರಗಳನೀಜಿ
ಮೋಡ ಗುಡ್ಡಗಳನೇರಿ
ಬಣ್ಣದ ದಾವನಿ ಹಾರಾಡಿಸುತ
ಮೇರಿ ಲಾಲ್ ದುಪಟ್ಟಾ ಮಲ್ಮಲ್ ಹಾಡುತ್ತಿದ್ದಂತೆ
ರಾಜಕುಮಾರನ ಮನೆ ಅಂಗಳಕ್ಕಿಳಿದದ್ದು-
ಸೂರ್ಯ ನಕ್ಕ, ಪಡುವಣ ಮುಖ
ಕೆಂಪೇರಿತು.
*****
Related Post
ಸಣ್ಣ ಕತೆ
-
ಇನ್ನೊಬ್ಬ
ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…
-
ಮಾದಿತನ
ಮುಂಗೋಳಿ... ಕೂಗಿದ್ದೆ ತಡ, ಪೆರ್ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…
-
ವರ್ಗಿನೋರು
ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…
-
ಹನುಮಂತನ ಕಥೆ
ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…
-
ನಂಬಿಕೆ
ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…