ಮೂರು ಲಂಗಗಳ ಮಾತುಕತೆ

ಲಂಗ ೧

‘ಏನೇ
ಇಷ್ಟೊಂಽಽಽದು ಘಮ್ ಅಂತೀಯಾ
ರಾತ್ರಿಯೆಲ್ಲಾ ಜೋರಾಽಽಽ?

ಒಂದಕ್ಕೊಂದು ಗಂಟು ಹಾಕಿ
ದ ಗಂಟಿನೊಳಗೇ ಕುಳಿತು
ಶುರುವಿಟ್ಟುಕೊಂಡವು ಎಂದಿನಂತೇ ಮಾತಿಗೆ
ಗಂಟು ಮೋರೆಯ ಸಡಿಲಿಸುತ

ಲಂಗ ೨

‘ಅದು ಬ್ಯಾರೆ ಕೇಡು ಈ ಜನುಮಕ್ಕೆ
ನಾನೇನು
ನಿನ್‌ಥರ
ಇದ್ದವರ ಮನೆಯ ಮಗಳಾ?
ಬೆಳಗೆದ್ರೆ ನೀರು ಬರಲಿಲ್ಲ
ತರಕಾರಿ ತರಲಿಲ್ಲ
ಹಾಲು ಸಿಗಲಿಲ್ಲ
ಕರೆಂಟು ಬಿಲ್ಲು ಕಟ್ಟಲಿಲ್ಲ
ನೂಽಽಽರು ರಗಳೆ
ಸಂಜೆ ಟ್ಯೂಷನ್ನಿಗೋದ ಮಕ್ಕಳು
ಮನೆ ಸೇರುವವರೆಗೂ ಜೀವವಿಲ್ಲ
ಕುಡಿದು ತೂರಾಡುವ ಗಂಡ
ನಿಗೆ ಕಾದ ಮೈ
ಕೆಂಡವಾಗಿದ್ದಷ್ಟೇ ಪುಣ್ಯ
ಉಫ್… ನನ್ ಹಣೆ ಬರಹ’

ಮುದುಡಿಕೊಂಡಿದ್ದ ಕೆಂಪು
ಲಂಗದ ಕಡೆ ಮುಖ ತಿರುವಿ
‘ನೀನೇನು
ಎಷ್ಟೊಂದು ಮೆತ್ತಗಾಗಿದ್ದೀಯಾ
ಏನ್ ಸಮಾಚಾರ, ಸುಸ್ತಾ…?’

ಲಂಗ ೩
ತೂಕಡಿಸುವ ಕಣ್ಣುಗಳನ್ನು ಉಜ್ಜಿಕೊಳ್ಳುತ್ತಾ
ಮೂಲೋಕ ಕಾಣುವಂತೆ ಆಕಳಿಸುತ್ತಾ

‘ನನ್ ಸುಸ್ತು ಯಾರ್ ಕೇಳ್ತಾರೆ ಬಿಡಕ್ಕ
ನನಗೋ
ಗಂಟೆಗೊಬ್ಬ ಗೆಳೆಯ
ಅವ ತಂದಿದ್ದು ಉಡುವುದೊರೊಳಗೆ
ಇವ ಕೈ ಮಾಡಿ ಕರೆಯುತ್ತಾನೆ
ಬಾಗಿಲಲ್ಲಿ ಹೂ ಹಿಡಿದು ನಿಲ್ಲುತ್ತಾನೆ

ಇನ್ನೊಬ್ಬ ಕಚ್ಚೆಗೇ ಕೈ ಹಾಕುತ್ತಾನೆ…
ರಾತ್ರಿಯೆಲ್ಲಾಽಽಽ
ಜೀವವಿಲ್ಲದ ಗೊಂಬೆಯಂತೆ
ಗಾಳಿ ಇಲ್ಲದ ಚೆಂಡಿನಂತೆ
ಹಾಸಿಗೆ ತುಂಬಾ ಅವರ ಬುಡಕ್ಕೆ
ಹರಕೆ ಹೊತ್ತವಳಂತೆ ಉರುಳಾಡಿ
ಪ್ರತಿನಿತ್ಯ ಜಾಗರಣೆ
ನಂದೂ ಒಂದು ಬದುಕು
ಅಂತ ಯಾರ್ಗೇಳಾಣ…?’

*

ಉಳಿದ ಲಂಗಗಳು ಮೂಕವಾಗಿ
ಬಾಯಿ ತೆರೆದು ಕೇಳುತ್ತಿರುವಂತೇ
ಎದುರು ಲಂಗದ ಕಣ್ಣಲ್ಲಿ
ಎರಡು ಹನಿ ಉದುರುವ ಮುನ್ನ
ಅಗಸಗಿತ್ತಿ
ಸರಬರನೆ ಎಲ್ಲರನು ಎತ್ತಿ
ಕುದಿವ ಹಂಡೆಯೊಳಗೆ ಒತ್ತಿ
ಕೈ ತೊಳೆದುಕೊಂಡು
ತನ್ನ ಹರಕು ಲಂಗಕ್ಕೆ
ಒರೆಸಿಕೊಂಡಳು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬೆಳಕಿನ ಹಾಡಿಗೆ ಕಾಯುತಲಿರುವೆವು
Next post ಪಂಚತಂತ್ರದ ಕುದುರೆ

ಸಣ್ಣ ಕತೆ

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ಹಳ್ಳಿ…

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…