Home / ಕವನ / ಕವಿತೆ / ಕವಿಯ ಮನಸ್ಸು

ಕವಿಯ ಮನಸ್ಸು

ಏಳುಲೋಕದಲೇಳು ಕಡಲಲಿ
ಏಳು ಪರ್ವತ ಬಾನಲಿ
ಏಳು ಸಾವಿರ ದೇಶದಿ,
ಸುತ್ತಿ ಹಾರ್ವುದು ನೋಡಿ ನೆಡೆವುದು
ನಿಮಿಷ ನಿಮಿಷಕೆ ಕ್ಷಣದಲಿ
ಕವಿಯ ಮನಸ್ಸದೊ ಹಾರ್ವುದು!

ಚಂದ್ರಲೋಕದ ಸುತ್ತು ತಿರುಗುತ
ಸೂರ್ಯಕಾಂತಿಯ ನೋಡಿತು!
ವಿಶ್ವಗೋಳವ ತಿರುಗಿಸಿ-
ಪಾತಾಳದಾಳಕೆ ಕೊರೆದು ನುಗ್ಗುತ
ಯಾವ ಜ್ಞಾನಿಯು ಹೇಳದ,
ವಿಶ್ವರೂಪವ ಹಾಡಿತು!

ಮೊರೆವ ತುಂಬಿಯ ತೆರದಲಿಂತಿದೊ
ಇಲ್ಲಿ ಅಲ್ಲಿ ಹಾರುತ
ಕವಿಯ ಮನಸನು ಬಾಯಲಿ,
ಗಗನದಾಡುವ ಲೋಕ ಗುಟ್ಟನು
ಕಂಡು ಹಿಡಿಯುತ ಹಾರುತ
ದೇವ ಸತ್ಯವ ಹೇಳುತ.

ಗಂಗೆ ಬಂದಾ, ಸ್ವರ್ಗ ಸೇರಿದ
ಕಾವೇರಿ ಕುಂಡಿಕೆ ಮಹಿಮೆಯ
ಯಮುನೆ ತೀರ್ಥ ಶಕ್ತಿಯ
ದೇವ ರಾಕ್ಷಸ ಸಮರ ಸರ್ವವು
ರಾಮ ರಾವಣ ರಾಜ್ಯದ
ಕೂಸು ಕೃಷ್ಣನ ಬೀರ್ಯವ

ಯಾವ ಜ್ಞಾನಿಯು ಕಂಡು ಕೇಳಿದೊ-
ಕವಿಯ ಮನಸ್ಸೊಂದಲ್ಲದೆ
ಅವನ ಲಿಖಿತವಲ್ಲದೆ,
ಕಾಳಿದಾಸನ ಕ್ಷೀರ ಸಾಮ್ಯದ
ಉಕ್ತಿ ಮರೆಯಲಿ ಎಂತು ನಾ?
ಸ್ತುತಿಸದಿರ್ಪುದು ಎಂತುವೊ?

ಸೂಜಿ ಮೊದಲಿಂ ವಿಶ್ವದಂತ್ಯಕು
ವಿಷಯ ಸರ್ವಽ ಹಾಡಿದರ್‍,
ಹಾಡದಿರುವುದು ಯಾವುದೊ?
ಕವಿಯ ಮನಸದು ವಿದ್ಯುತ್ ಶಕ್ತಿಯ
ಗತಿಯ ಮೀರಿದೆ-ದಾಟಿದೆ
ವಿಶ್ವಭೇಧಿಸಿ ಸಾಗಿದೆ.

ಕವಿಯೊ ತನ್ನ ಸೂಕ್ಷ್ಮವಾದದಿ
ಕ್ರಾಂತಿ ಸಾರಿದ ರಾಜ್ಯಕೆ
ಶಾಂತಿ ನೀಡಿದ ದೇಶಕೆ;
ಜಗದ ಎಲ್ಲಾ ಅಲ್ಲಸಲ್ಲದ
ವ್ಯಾಜ್ಯ ಸಮರಕೆ ಮೂಲವೊ
ಕವಿಯ ನಿರ್ಭಯ ಮನಸ್ಸದೊ!

ಮಧುವ ಜಿಹ್ವೆಯಲಿಟ್ಟ ತೆರದಲಿ
ದೇವ ಕವಿಗಳ ಹಾಡದು,
ಗಾನರಸದಲಿ ತೇಲಿಸಿ,
ಜ್ಞಾನ ಶಕ್ತಿಯ ವಿಶ್ವ ಗುಟ್ಟನು
ಎರಡು ಕೈಯಿಂ ತಟ್ಟುತ
ಪೇಳ್ವ ಹಾಡದೊ, ಆಹಹಾ!

ಮಂತ್ರ ಋಷಿಗಳ ಪ್ಲೇಟೊ ಬರೆಹವು
ಮಿಲ್ಟನ್ ಸಾರಿದ ಮಾಕತೆ,
ವೇದ ಮಂತ್ರವು ಕವಿಮತ;
ವಾಲ್ಮೀಕಿ ಹೋಮರ್‍ ಗಯಟೆ ವ್ಯಾಸನು
ಷೇಕ್ಸ್‌ಪೀಯರ್‍ ಡಾಂಟೆಯೊ
ದೇವ ಕವಿಗಳೊ ಲೋಕದಿ.

ಸೂರೆಮಾಡಿತು ಲೋಕ ಮನಸನು
ಕವಿಯ ಮಂತ್ರದ ಕ್ರಾಂತಿಯೊ
ರಂಗು ರಂಗದೊ ಚಿತ್ತಾರ-
ಕ್ಷೀರ ಶರ್ಕರಾ ಬೆರೆಸಿ ಸವಿಯುವ
ತೆರದೆ ವಾಣಿಯು-ಅಮೃತ
ಬಂದ ಮನಸ್ಸು-ಸರಸ್ವತಿ!

ಅನ್ನ ನೀರೂ ಬಿಟ್ಟು ಬಾಳ್ವೆನೊ
ಹಾಡಾನಂದವ ಪಡೆಯುವ
ಭಾಗ್ಯ ಎಂತು ನಾನ ಬಿಡುವೆನೊ?
ಬಾಳಲೀ ಕವಿ ಮಾಽತ್ಮರೆಲ್ಲ
ಚಿರಾಯುವಿಂದಲಿ ಲೋಕದಿ!
ಅಗ್ನಿಯಂತೆಯೆ ಸತ್ಯದಿ!!
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...