Home / ಕವನ / ಕವಿತೆ / ಭವದ ಹೊರೆ

ಭವದ ಹೊರೆ

ಕೇಶವೇ ವಸ್ತ್ರವೆಂದು
ಅದನ್ನೆ ಮೈ ತುಂಬಾ ಹೊದ್ದು
ಉಟ್ಟಿದ್ದೆಲ್ಲವ ಬಿಸುಟು
ಹೊರಟೇಬಿಟ್ಟೆಯಲ್ಲೆ ಅಕ್ಕ
ಮರೆಯಲು ಮನದಾಳದ ದುಃಖ
ನಿನಗಾಗಿ ಅಲ್ಲಿದ್ದ ಚೆನ್ನ
ಹುಡುಕಿ ಹೊರಟೆ ಅವನನ್ನೆ
ಲೋಕದಿದಿರು ನೀ ಆದೆ ಭಿನ್ನೆ
ಅಂಜಲಿಲ್ಲ, ಅಳುಕಲಿಲ್ಲ ನೀ ದಿಟ್ಟೆ
ಬೇಡವೆನಿಸಿದ ಬದುಕು ಬಿಟ್ಟೆ
ಬೇಡವೆನಿಸಿದೆ ಭವದ ಬದುಕು
ಹೇಗೆ ಬಿಟ್ಟು ಬಿಡಲೇ ಅಕ್ಕ
ಬಣ್ಣಗೆಟ್ಟ ಬದುಕಿನಿರುಳಲಿ
ಹೊರಳಿ ನರಳಿದೆ ಎತ್ತಲೆತ್ತಲೋ
ಹಾದಿ ಹುಡುಕಿ ಹೊರಟ ಮನಸ್ಸು,
ಮನಸಲೊಬ್ಬ ದೇಹಕ್ಕೊಬ್ಬ
ಗಂಡಹೆಂಡಿರಾಟದ ಮೈಥುನ
ಕಿತ್ತೆಸೆಯಲಾರದ ಬಂಧನ
ಹೊರಲಾರದ ಭವದ ಹೊರೆಗೆ
ಮನದ ನಡು ಬಾಗಿದೆ
ಹೊತ್ತ ಹೊರೆಯ ಇಳಿಸುವುದೆಂತು
ತೋರೆ

ಸೋತು ಮಲಗಿದೆ ಜೀವಧಾರೆ
ಬಂದು ಬಿಡಲೇ ಕದಳಿಗೆ
ಇದ್ದಾನೇನು ಚೆನ್ನ ಇನ್ನು ಅಲ್ಲಿ
ಬೇಡವಾದ ಬಂಧನದ ಬೇಡಿ
ಕಳಚುವುದೆಂತು ಹೇಳೆ,
ನಿನ್ನಂತರಂಗವ ಒಪ್ಪಿದವರಿದ್ದರು
ಅಂದು
ಇಂದಿದ್ದಾರೇನೇ ಬಸವ ಅಲ್ಲಮರು
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...