ಭವದ ಹೊರೆ

ಕೇಶವೇ ವಸ್ತ್ರವೆಂದು
ಅದನ್ನೆ ಮೈ ತುಂಬಾ ಹೊದ್ದು
ಉಟ್ಟಿದ್ದೆಲ್ಲವ ಬಿಸುಟು
ಹೊರಟೇಬಿಟ್ಟೆಯಲ್ಲೆ ಅಕ್ಕ
ಮರೆಯಲು ಮನದಾಳದ ದುಃಖ
ನಿನಗಾಗಿ ಅಲ್ಲಿದ್ದ ಚೆನ್ನ
ಹುಡುಕಿ ಹೊರಟೆ ಅವನನ್ನೆ
ಲೋಕದಿದಿರು ನೀ ಆದೆ ಭಿನ್ನೆ
ಅಂಜಲಿಲ್ಲ, ಅಳುಕಲಿಲ್ಲ ನೀ ದಿಟ್ಟೆ
ಬೇಡವೆನಿಸಿದ ಬದುಕು ಬಿಟ್ಟೆ
ಬೇಡವೆನಿಸಿದೆ ಭವದ ಬದುಕು
ಹೇಗೆ ಬಿಟ್ಟು ಬಿಡಲೇ ಅಕ್ಕ
ಬಣ್ಣಗೆಟ್ಟ ಬದುಕಿನಿರುಳಲಿ
ಹೊರಳಿ ನರಳಿದೆ ಎತ್ತಲೆತ್ತಲೋ
ಹಾದಿ ಹುಡುಕಿ ಹೊರಟ ಮನಸ್ಸು,
ಮನಸಲೊಬ್ಬ ದೇಹಕ್ಕೊಬ್ಬ
ಗಂಡಹೆಂಡಿರಾಟದ ಮೈಥುನ
ಕಿತ್ತೆಸೆಯಲಾರದ ಬಂಧನ
ಹೊರಲಾರದ ಭವದ ಹೊರೆಗೆ
ಮನದ ನಡು ಬಾಗಿದೆ
ಹೊತ್ತ ಹೊರೆಯ ಇಳಿಸುವುದೆಂತು
ತೋರೆ

ಸೋತು ಮಲಗಿದೆ ಜೀವಧಾರೆ
ಬಂದು ಬಿಡಲೇ ಕದಳಿಗೆ
ಇದ್ದಾನೇನು ಚೆನ್ನ ಇನ್ನು ಅಲ್ಲಿ
ಬೇಡವಾದ ಬಂಧನದ ಬೇಡಿ
ಕಳಚುವುದೆಂತು ಹೇಳೆ,
ನಿನ್ನಂತರಂಗವ ಒಪ್ಪಿದವರಿದ್ದರು
ಅಂದು
ಇಂದಿದ್ದಾರೇನೇ ಬಸವ ಅಲ್ಲಮರು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಒಂದಿಷ್ಟು ಹಸಿ ಮಣ್ಣು
Next post ಸಾವಿನ ಮನೆ

ಸಣ್ಣ ಕತೆ

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

cheap jordans|wholesale air max|wholesale jordans|wholesale jewelry|wholesale jerseys