Home / ಕವನ / ಕವಿತೆ / ಸಾವಿನ ಮನೆ

ಸಾವಿನ ಮನೆ

ಹೊಲೆ ಮನೆ
ಹೊಲೆಯಾಗುವ ಮನೆ
ಸತ್ತವರ ಮನೆ
ಸಾವಿನ ಮನೆ

ನನಗೆ ಡಿಕಾಕ್ಷನ್ ಮಾತ್ರ ಸಾಕು
ಎಂದರು ಇವರು
ಏನೊ ತಲೆನೋವು
ರಾತ್ರಿಯಿಡೀ ಆ ಮುದುಕನ ಬಳಿ ಕುಕ್ಕರಕುಳಿತು
ಎಳೆಯುತ್ತಿದೆ ನರ

ಸುಮ್ಮನೇ ಇರುವುದು ಇಲ್ಲಿ
ಸುಮ್ಮನಿರುವುದೆ ನಮ್ಮ ಕೆಲಸ
ಮತ್ತು ನಿರೀಕ್ಷಿಸುವುದು
ಒಳ ಕೋಣೆಯಿಂದ ನೊಣಗಳ ಗಲಾಟೆ
ಸುಮ್ಮನೇ ಇರುವುದಕಿಂತ
ಒಂದಾಟ ಇಸ್ಪೀಟು ಆಡಬಹುದಿತ್ತು

ಒಳಕೋಣೆಯಿಂದ ಈಗಾಗಲೆ
ಶ್ವಾಸದ ಗೊಗ್ಗರ ಧ್ವನಿ
ಚಟ್ಟ ತಯಾರಾಗಿದೆ ನಿನ್ನೆಯೇ
ಇನ್ನೇನು ಕೆಲಸವಿಲ್ಲ
ಮರಣವನ್ನು ನಿರೀಕ್ಷಿಸುವುದೊಂದೆ ಕೆಲಸ
ನಮ್ಮ ಕೆಲಸ
ನಿನ್ನೆಯಿಂದಲೂ ಇದೇ ಕೆಲಸ

ಕಲಸಿ ಹಾಕು ಹಚ್ಚಡದ ಮೇಲೆ
ಹಳತಾಗಿದೆ ಈ ಎಲೆ
ಸ್ವಲ್ಪ ಪೌಡರ್ ಹಾಕು
ಬಿಡ್ಡು ಯಾರದ್ದು?
ಕವಚಿಹಾಕು ತುರುಪ್ಫು
ನಿತ್ರಾಣವಾಗಿದ್ದರು ಅವರು
ದೇವರಿಗೆ ಸುತ್ತು ಹಾಕುತ್ತ ಹಾಕುತ್ತ
ಬಿದ್ದು ಬಿಟ್ಟರು ಪಾಪ!
ಬಿದ್ದಲ್ಲೆ ಹೊಡೆಯಿತು ಲಕ್ವ
ನಾಲೆಗೆ ತೆವಳಿದರೂ ಮಾತಿಲ್ಲ

ಮಗಚು ನಿನ್ನ ತುರಪ್ಫು
ಏನೊ ಕಳಾವರೊ?
ನನ್ನಲ್ಲಿ ಇಲ್ಲ
ಕಲಸಿ ಹಾಕು ಇನ್ನೊಮ್ಮೆ.

ಅವರು ಹೇಳಿದರು
ಇವರು ಹೇಳುತ್ತಾರೆ
ನಾವು ಹೇಳುವೆವು
ಹೀಗೆ ನವೆಯುವುದಕಿಂತ
ಹೀಗೆ ಸವೆಯುವುದಕಿಂತ
ಹೀಗೆ ಬದುಕುವುದಕಿಂತ
ಬದುಕದಿರುವುದೆ ಒಳಿತು

ಆದರೂ
ನಮಗೆ ಕಾಯುವ ಕೆಲಸ
ಕಾಯುವುದೊಂದೆ ನಮ್ಮ ಕೆಲಸ.
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...