Home / ಕವನ / ಕವಿತೆ / ಸಾವಿನ ಮನೆ

ಸಾವಿನ ಮನೆ

ಹೊಲೆ ಮನೆ
ಹೊಲೆಯಾಗುವ ಮನೆ
ಸತ್ತವರ ಮನೆ
ಸಾವಿನ ಮನೆ

ನನಗೆ ಡಿಕಾಕ್ಷನ್ ಮಾತ್ರ ಸಾಕು
ಎಂದರು ಇವರು
ಏನೊ ತಲೆನೋವು
ರಾತ್ರಿಯಿಡೀ ಆ ಮುದುಕನ ಬಳಿ ಕುಕ್ಕರಕುಳಿತು
ಎಳೆಯುತ್ತಿದೆ ನರ

ಸುಮ್ಮನೇ ಇರುವುದು ಇಲ್ಲಿ
ಸುಮ್ಮನಿರುವುದೆ ನಮ್ಮ ಕೆಲಸ
ಮತ್ತು ನಿರೀಕ್ಷಿಸುವುದು
ಒಳ ಕೋಣೆಯಿಂದ ನೊಣಗಳ ಗಲಾಟೆ
ಸುಮ್ಮನೇ ಇರುವುದಕಿಂತ
ಒಂದಾಟ ಇಸ್ಪೀಟು ಆಡಬಹುದಿತ್ತು

ಒಳಕೋಣೆಯಿಂದ ಈಗಾಗಲೆ
ಶ್ವಾಸದ ಗೊಗ್ಗರ ಧ್ವನಿ
ಚಟ್ಟ ತಯಾರಾಗಿದೆ ನಿನ್ನೆಯೇ
ಇನ್ನೇನು ಕೆಲಸವಿಲ್ಲ
ಮರಣವನ್ನು ನಿರೀಕ್ಷಿಸುವುದೊಂದೆ ಕೆಲಸ
ನಮ್ಮ ಕೆಲಸ
ನಿನ್ನೆಯಿಂದಲೂ ಇದೇ ಕೆಲಸ

ಕಲಸಿ ಹಾಕು ಹಚ್ಚಡದ ಮೇಲೆ
ಹಳತಾಗಿದೆ ಈ ಎಲೆ
ಸ್ವಲ್ಪ ಪೌಡರ್ ಹಾಕು
ಬಿಡ್ಡು ಯಾರದ್ದು?
ಕವಚಿಹಾಕು ತುರುಪ್ಫು
ನಿತ್ರಾಣವಾಗಿದ್ದರು ಅವರು
ದೇವರಿಗೆ ಸುತ್ತು ಹಾಕುತ್ತ ಹಾಕುತ್ತ
ಬಿದ್ದು ಬಿಟ್ಟರು ಪಾಪ!
ಬಿದ್ದಲ್ಲೆ ಹೊಡೆಯಿತು ಲಕ್ವ
ನಾಲೆಗೆ ತೆವಳಿದರೂ ಮಾತಿಲ್ಲ

ಮಗಚು ನಿನ್ನ ತುರಪ್ಫು
ಏನೊ ಕಳಾವರೊ?
ನನ್ನಲ್ಲಿ ಇಲ್ಲ
ಕಲಸಿ ಹಾಕು ಇನ್ನೊಮ್ಮೆ.

ಅವರು ಹೇಳಿದರು
ಇವರು ಹೇಳುತ್ತಾರೆ
ನಾವು ಹೇಳುವೆವು
ಹೀಗೆ ನವೆಯುವುದಕಿಂತ
ಹೀಗೆ ಸವೆಯುವುದಕಿಂತ
ಹೀಗೆ ಬದುಕುವುದಕಿಂತ
ಬದುಕದಿರುವುದೆ ಒಳಿತು

ಆದರೂ
ನಮಗೆ ಕಾಯುವ ಕೆಲಸ
ಕಾಯುವುದೊಂದೆ ನಮ್ಮ ಕೆಲಸ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...