Home / ಕವನ / ಕವಿತೆ / ಸಾವಿನ ಮನೆ

ಸಾವಿನ ಮನೆ

ಹೊಲೆ ಮನೆ
ಹೊಲೆಯಾಗುವ ಮನೆ
ಸತ್ತವರ ಮನೆ
ಸಾವಿನ ಮನೆ

ನನಗೆ ಡಿಕಾಕ್ಷನ್ ಮಾತ್ರ ಸಾಕು
ಎಂದರು ಇವರು
ಏನೊ ತಲೆನೋವು
ರಾತ್ರಿಯಿಡೀ ಆ ಮುದುಕನ ಬಳಿ ಕುಕ್ಕರಕುಳಿತು
ಎಳೆಯುತ್ತಿದೆ ನರ

ಸುಮ್ಮನೇ ಇರುವುದು ಇಲ್ಲಿ
ಸುಮ್ಮನಿರುವುದೆ ನಮ್ಮ ಕೆಲಸ
ಮತ್ತು ನಿರೀಕ್ಷಿಸುವುದು
ಒಳ ಕೋಣೆಯಿಂದ ನೊಣಗಳ ಗಲಾಟೆ
ಸುಮ್ಮನೇ ಇರುವುದಕಿಂತ
ಒಂದಾಟ ಇಸ್ಪೀಟು ಆಡಬಹುದಿತ್ತು

ಒಳಕೋಣೆಯಿಂದ ಈಗಾಗಲೆ
ಶ್ವಾಸದ ಗೊಗ್ಗರ ಧ್ವನಿ
ಚಟ್ಟ ತಯಾರಾಗಿದೆ ನಿನ್ನೆಯೇ
ಇನ್ನೇನು ಕೆಲಸವಿಲ್ಲ
ಮರಣವನ್ನು ನಿರೀಕ್ಷಿಸುವುದೊಂದೆ ಕೆಲಸ
ನಮ್ಮ ಕೆಲಸ
ನಿನ್ನೆಯಿಂದಲೂ ಇದೇ ಕೆಲಸ

ಕಲಸಿ ಹಾಕು ಹಚ್ಚಡದ ಮೇಲೆ
ಹಳತಾಗಿದೆ ಈ ಎಲೆ
ಸ್ವಲ್ಪ ಪೌಡರ್ ಹಾಕು
ಬಿಡ್ಡು ಯಾರದ್ದು?
ಕವಚಿಹಾಕು ತುರುಪ್ಫು
ನಿತ್ರಾಣವಾಗಿದ್ದರು ಅವರು
ದೇವರಿಗೆ ಸುತ್ತು ಹಾಕುತ್ತ ಹಾಕುತ್ತ
ಬಿದ್ದು ಬಿಟ್ಟರು ಪಾಪ!
ಬಿದ್ದಲ್ಲೆ ಹೊಡೆಯಿತು ಲಕ್ವ
ನಾಲೆಗೆ ತೆವಳಿದರೂ ಮಾತಿಲ್ಲ

ಮಗಚು ನಿನ್ನ ತುರಪ್ಫು
ಏನೊ ಕಳಾವರೊ?
ನನ್ನಲ್ಲಿ ಇಲ್ಲ
ಕಲಸಿ ಹಾಕು ಇನ್ನೊಮ್ಮೆ.

ಅವರು ಹೇಳಿದರು
ಇವರು ಹೇಳುತ್ತಾರೆ
ನಾವು ಹೇಳುವೆವು
ಹೀಗೆ ನವೆಯುವುದಕಿಂತ
ಹೀಗೆ ಸವೆಯುವುದಕಿಂತ
ಹೀಗೆ ಬದುಕುವುದಕಿಂತ
ಬದುಕದಿರುವುದೆ ಒಳಿತು

ಆದರೂ
ನಮಗೆ ಕಾಯುವ ಕೆಲಸ
ಕಾಯುವುದೊಂದೆ ನಮ್ಮ ಕೆಲಸ.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...