ಕುಣಿತದ ಧ್ವನಿತ

ತಟಪಟ ತಟ್ಟುತ ಒಟ್ಟಿನಲಿ
ಕೋಲಿಂ ಕೆಲವರು ಹೊಲದಲ್ಲಿ,
ಕಿಣಿಕಿಣಿ ಮಣಿಯಿಂ ಕುಣಿಸುತಲಿ,
ಗಲಗಲ ಬಾಲರ ಒಲಿಸುತಲಿ.

ಡಂ ಢಂ ಡಾಂಬರ ಗಡಗಡಿಸಿ
ಪೆಂಪಾಪೆಂಪೆಂದು ಪೇಳಿರಿಸಿ,
ಲಲ್ಲಾಲ್ಲೆನ್ನುತ ಸೊಲ್ಲನೊಂದು
ಬಾಯೊಳು ಸಾಯಲು ಹಾತೊರೆದು!

ರತ್ನದ ಚಿನ್ನದ ಬಣ್ಣಗಳು,
ಹೊಳಪಿನ ಸುಲಲಿತ ಈ ಕಲೆಯು,
ಸೋಜಿಗದುಜ್ಜಿದ ಗೆಜ್ಜೆಯನು
ಕಾಲಲಿ ಸಾಲಲಿ ಠಣಠಣಿಸಿ!

ಆಚಿಂದೀಚೆಗೆ ಹಾಯುತಲಿ;
ಆನಂದದಾಡುತ ಹಾರುತಲಿ;
ಬಗ್ಗುತ ಏಳುತ ತಿರುಹುತಲು,
ಸಾಲಿಂ ಕೋಲ್ಗಳ ಕಟಕಟಿಸಿ.

ಸುಗ್ಗಿಯಲಗ್ಗದ ಸಗ್ಗವಿದು
ಒಗ್ಗುವ ಒಮ್ಮನದೊಲುಮೆಯಿದು;
ತಾಳದ ಗಣಗಣ ಪ್ರತಿಧ್ವನಿಯು,
ಮಾನಸಿಕಾಂಕ್ಷೆಯ ಸಿರಿಯೊಲವು.

ಕುಣುಕುಣು ಕುಲುಕುತ ಅಂಗಗಳೂ
ಥಕಥಕ ತಟ್ಟುತ ಪಾರುತಲಿ,
ಕೂಟದೊಳಾಟದ ಪಠನವಿದು
ಉತ್ಸವದಾಡಲು ಸಿರಿಸುರಿಯುಂ!

ಬಯಲಿನ ನಡುವಣ ಕುಣಿಬನವೂ,
ಬೆವರಿನ ದಣಿಮಣಿ ಚಿನ್ಮಣಿಯುಂ,
ನೋಡಲದಚ್ಚರಿ! ನಿಟ್ಟುಸುತ
ಆಡುವ ಬಗೆ-ಗೆಲು ಹುಟ್ಟಿಸುತ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಲಿಂಗಮ್ಮನ ವಚನಗಳು – ೧೯
Next post ‘ಶ್ರೀ’ ಅವರಿಗೆ

ಸಣ್ಣ ಕತೆ

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…