ಕುಣಿತದ ಧ್ವನಿತ

ತಟಪಟ ತಟ್ಟುತ ಒಟ್ಟಿನಲಿ
ಕೋಲಿಂ ಕೆಲವರು ಹೊಲದಲ್ಲಿ,
ಕಿಣಿಕಿಣಿ ಮಣಿಯಿಂ ಕುಣಿಸುತಲಿ,
ಗಲಗಲ ಬಾಲರ ಒಲಿಸುತಲಿ.

ಡಂ ಢಂ ಡಾಂಬರ ಗಡಗಡಿಸಿ
ಪೆಂಪಾಪೆಂಪೆಂದು ಪೇಳಿರಿಸಿ,
ಲಲ್ಲಾಲ್ಲೆನ್ನುತ ಸೊಲ್ಲನೊಂದು
ಬಾಯೊಳು ಸಾಯಲು ಹಾತೊರೆದು!

ರತ್ನದ ಚಿನ್ನದ ಬಣ್ಣಗಳು,
ಹೊಳಪಿನ ಸುಲಲಿತ ಈ ಕಲೆಯು,
ಸೋಜಿಗದುಜ್ಜಿದ ಗೆಜ್ಜೆಯನು
ಕಾಲಲಿ ಸಾಲಲಿ ಠಣಠಣಿಸಿ!

ಆಚಿಂದೀಚೆಗೆ ಹಾಯುತಲಿ;
ಆನಂದದಾಡುತ ಹಾರುತಲಿ;
ಬಗ್ಗುತ ಏಳುತ ತಿರುಹುತಲು,
ಸಾಲಿಂ ಕೋಲ್ಗಳ ಕಟಕಟಿಸಿ.

ಸುಗ್ಗಿಯಲಗ್ಗದ ಸಗ್ಗವಿದು
ಒಗ್ಗುವ ಒಮ್ಮನದೊಲುಮೆಯಿದು;
ತಾಳದ ಗಣಗಣ ಪ್ರತಿಧ್ವನಿಯು,
ಮಾನಸಿಕಾಂಕ್ಷೆಯ ಸಿರಿಯೊಲವು.

ಕುಣುಕುಣು ಕುಲುಕುತ ಅಂಗಗಳೂ
ಥಕಥಕ ತಟ್ಟುತ ಪಾರುತಲಿ,
ಕೂಟದೊಳಾಟದ ಪಠನವಿದು
ಉತ್ಸವದಾಡಲು ಸಿರಿಸುರಿಯುಂ!

ಬಯಲಿನ ನಡುವಣ ಕುಣಿಬನವೂ,
ಬೆವರಿನ ದಣಿಮಣಿ ಚಿನ್ಮಣಿಯುಂ,
ನೋಡಲದಚ್ಚರಿ! ನಿಟ್ಟುಸುತ
ಆಡುವ ಬಗೆ-ಗೆಲು ಹುಟ್ಟಿಸುತ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಲಿಂಗಮ್ಮನ ವಚನಗಳು – ೧೯
Next post ‘ಶ್ರೀ’ ಅವರಿಗೆ

ಸಣ್ಣ ಕತೆ

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…