Home / ಕವನ / ಕವಿತೆ / ಅಡುಗೆ ಮನೆ ಸಾಹಿತ್ಯ

ಅಡುಗೆ ಮನೆ ಸಾಹಿತ್ಯ

ಹೌದು ಗೆಳೆಯಾ ಇದು
ಅಡುಗೆ ಮನೆ ಸಾಹಿತ್ಯವೇ!

ಒಗ್ಗರಣೆಯ ಸಾಸಿವೆ ಸಿಡಿದಾಗ
ಮನವೂ ಸಿಡಿದು ಸಾವಿರ ಹೋಳಾಗಿ
ಒಲೆಯ ಮೇಲೆ ಹುಳಿ ಕುದಿವಾಗ
ಎದೆಯೂ ಕುದ್ದು ಕುದ್ದು ಹದವಾಗಿ

ಚಾಕು ಈಳಿಗೆ ಮಣೆಗಳು ತರಕಾರಿ ಹೆಚ್ಚುವಾಗ
ಭಾವನೆಗಳ ಹದವಾಗಿ ಕತ್ತರಿಸಿ ಪದವಾಗಿ
ಉಪ್ಪು ಹುಳಿ ಕಾರಗಳ ಬೆರೆಸಿ ಸಮವಾಗಿ
ಮನದಲ್ಲೇ ಗೀಚಿದ ನಾಲ್ಕು ಸಾಲಿಗೆ
ಉಪ್ಪೊ ಹುಳಿಯೋ ಕಾರವೋ
ಹೆಚ್ಚು ಕಡಿಮೆಯಾಗಿ

ಮುಸುರೆ ತಿಕ್ಕುವಾಗಲೋ
ನೆಲ ಸಾರಿಸುವಾಗಲೋ
ಮೂಡಿದ ಎಂತದೋ ಸ್ಪೂರ್ತಿ
ಎಲ್ಲಾ ಮುಗಿಸಿಟ್ಟು
ಕೈ ಒರೆಸಿ ಬರುವಾಗ
ಮಟಾ ಮಂಗಮಾಯವಾಗಿ

ಮತ್ತೊಮ್ಮೆ ಒಂದೊಂದೇ ಪದ
ನೆನಪಿಸಿ ತಿಣುಕುವಾಗ
ಹಾಲುಕ್ಕಿ, ಮಗು ಬಿಕ್ಕಿ ಎಲ್ಲಾ
ಅಯೋಮಯವಾಗಿ
ಬರೆಯಲಾಗದೇ ಉಳಿದ ಅವ್ಯಕ್ತಗಳು
ಸದಾ ಬೆಂಬಿಡದ
ಅಡುಗೆ ಮನೆ ಕೆಲಸದಂತಾಗಿ.

ಕುದ್ದು ಸಿಡಿದು ಕತ್ತರಿಸಿ ಬಿದ್ದುಕೊಂಡಿದ್ದ
ಭಾವಗಳು ಆದಿ ಇಲ್ಲದೇ ಅಂತ್ಯವಿಲ್ಲದೇ
ಇಷ್ಟಿಷ್ಟೇ ಎಲ್ಲೆಲ್ಲೋ
ಹಾಲಿನ ಲೆಕ್ಕದ ಪುಸ್ತಕದಲ್ಲೋ
ಕ್ಯಾಲೆಂಡರಿನ ಅಂಕಿಯ ಪಕ್ಕದಲ್ಲೋ
ಸಾಮಾನಿನ ಪಟ್ಟಿಯ ಹಿಂದೆಲ್ಲೋ

ವ್ಯಕ್ತವಾದರೂ ಅನಾಥವಾಗಿ
ಉಪ್ಪು ಹುಳಿ ಕಾರಗಳ
ಹದಬೆರೆತ ಖಾದ್ಯವೆಂದು
ಎದೆ ತಟ್ಟಿ ಹೇಳಲಾಗದ
ಅಲ್ಲಿಷ್ಟು, ಇಲ್ಲಿಷ್ಟು ಭಾವೋನ್ಮಾದ
ಹರಿದು ಬಿದ್ದು
ಕಲಸುಮೇಲೋಗರವಾದ ಇದು
ಹೌದು ಗೆಳೆಯ
ಅಡುಗೆ ಮನೆ ಸೇರಿದ ಮನದ ಸಾಹಿತ್ಯವೇ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...