ಎಲ್ಲಿ ಕುಂತಾನೊ ದೇವರು

ಎಲ್ಲಿ ಕುಂತಾನೊ ದೇವರು ಎಲ್ಲವ
ನೋಡುತ ಕುಂತಾನೊ ದೇವರು||

ನ್ಯಾಯಾಲಯದಲಿ ಜಡ್ಜನ ಮುಂದೆ
ದೇವರ ಮೇಲೆ ಪ್ರಮಾಣ ಮಾಡಿಸಿ
ಸುಳ್ಳನೆ ವಾದಿಸಿ ಸಾಧಿಸಿ ಗೆಲ್ಲುವ
ಕಳ್ಳರ ಭಂಡರ ಉಳಿಸ್ಯಾನಲ್ಲಾ || ಎಲ್ಲಿ ||

ಪಾರ್ಲಿಮೆಂಟಿನಲಿ ವಿಧಾನಸೌಧದಿ
ಜನಗಳ ಸೇವೆ ಮಾಡ್ತೀವಂತ
ಪ್ರತಿಜ್ಞೆವಚನಾ ಮಾಡಿದ ಮಂತ್ರಿ
ಕೋಟಿಗಟ್ಟಲೆ ನುಂಗುತ್ತಿರಲು || ಎಲ್ಲಿ ||

ಜೀವಾ ಉಳಿಸುವ ಪ್ರತಿಜ್ಞೆಮಾಡುತ
ಹೆಣವಾದರು ಜನ ಹಣವನೆ ಬಳಿವರು
ಅಂಗಾಂಗಗಳನೆ ಮಾರಿಕೊಳ್ಳುವ
ಕಳ್ಳ ವೈದ್ಯರನು ನೋಡಿಯು ಕೂಡ || ಎಲ್ಲಿ ||

ದೇವರುಗಳನ್ನೆ ವ್ಯಾಪಾರಕಿಟ್ಟು
ದುಡ್ಡನು ಕೀಳುವ ಪೂಜಾರಿಗಳನು
ದೇವರ ಹೆಸರಲಿ ಸೂಳೆಗಾರಿಕೆಯ
ಬೆಳೆಸುವ ಖದೀಮರೆಲರ ಕಂಡು || ಎಲ್ಲಿ ||

ಸರ್ಕಾರ್ ಕೆಲಸಾ ದೇವರ ಕೆಲಸ
ಎನ್ನುವ ಬೋರ್ಡನು ಹಾಕಿದ ಕಛೇರಿ
ಲಂಚಾ ವಶೀಲಿ ಇಲ್ಲದೆ ಒಲಿಯದು
ಅಂಥಾ ಭ್ರಷ್ಟರ ಏನೂ ಮಾಡದೆ || ಎಲ್ಲಿ ||

ನಮ್ಮ ದೇವರೇ ನಮ್ಮ ಧರ್ಮವೇ
ಹೆಚ್ಚಿನದೆಂದು ಕೊಚ್ಚಿ ಕೊಳ್ಳುತ
ಬೇರೆಯ ಜನರನು ಕೊಲ್ಲಲು ಹೇಸದ
ನರಹುಳುಗಳನೀ ನೆಲದಲಿ ಹುಟ್ಟಿಸಿ || ಎಲ್ಲಿ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವರಿ
Next post ಚಿಂತಕ

ಸಣ್ಣ ಕತೆ

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಕಂಬದಹಳ್ಳಿಗೆ ಭೇಟಿ

    ಪ್ರಕರಣ ೪ ಮಾರನೆಯ ದಿನ ಪ್ರಾತಃಕಾಲ ಆರು ಗಂಟೆಗೆಲ್ಲ ರಂಗಣ್ಣನು ಸ್ನಾನಾದಿ ನಿತ್ಯ ಕರ್ಮಗಳನ್ನು ಮುಗಿಸಿಕೊಂಡು ಉಡುಪುಗಳನ್ನು ಧರಿಸುವುದಕ್ಕೆ ತೊಡಗಿದನು, ಬೈಸ್ಕಲ್ ಮೇಲೆ ಪ್ರಯಾಣ ಮಾಡಬೇಕಾದ್ದರಿಂದ ಸರ್ಜ್‍ಸೂಟು… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…