ಎಲ್ಲಿ ಕುಂತಾನೊ ದೇವರು

ಎಲ್ಲಿ ಕುಂತಾನೊ ದೇವರು ಎಲ್ಲವ
ನೋಡುತ ಕುಂತಾನೊ ದೇವರು||

ನ್ಯಾಯಾಲಯದಲಿ ಜಡ್ಜನ ಮುಂದೆ
ದೇವರ ಮೇಲೆ ಪ್ರಮಾಣ ಮಾಡಿಸಿ
ಸುಳ್ಳನೆ ವಾದಿಸಿ ಸಾಧಿಸಿ ಗೆಲ್ಲುವ
ಕಳ್ಳರ ಭಂಡರ ಉಳಿಸ್ಯಾನಲ್ಲಾ || ಎಲ್ಲಿ ||

ಪಾರ್ಲಿಮೆಂಟಿನಲಿ ವಿಧಾನಸೌಧದಿ
ಜನಗಳ ಸೇವೆ ಮಾಡ್ತೀವಂತ
ಪ್ರತಿಜ್ಞೆವಚನಾ ಮಾಡಿದ ಮಂತ್ರಿ
ಕೋಟಿಗಟ್ಟಲೆ ನುಂಗುತ್ತಿರಲು || ಎಲ್ಲಿ ||

ಜೀವಾ ಉಳಿಸುವ ಪ್ರತಿಜ್ಞೆಮಾಡುತ
ಹೆಣವಾದರು ಜನ ಹಣವನೆ ಬಳಿವರು
ಅಂಗಾಂಗಗಳನೆ ಮಾರಿಕೊಳ್ಳುವ
ಕಳ್ಳ ವೈದ್ಯರನು ನೋಡಿಯು ಕೂಡ || ಎಲ್ಲಿ ||

ದೇವರುಗಳನ್ನೆ ವ್ಯಾಪಾರಕಿಟ್ಟು
ದುಡ್ಡನು ಕೀಳುವ ಪೂಜಾರಿಗಳನು
ದೇವರ ಹೆಸರಲಿ ಸೂಳೆಗಾರಿಕೆಯ
ಬೆಳೆಸುವ ಖದೀಮರೆಲರ ಕಂಡು || ಎಲ್ಲಿ ||

ಸರ್ಕಾರ್ ಕೆಲಸಾ ದೇವರ ಕೆಲಸ
ಎನ್ನುವ ಬೋರ್ಡನು ಹಾಕಿದ ಕಛೇರಿ
ಲಂಚಾ ವಶೀಲಿ ಇಲ್ಲದೆ ಒಲಿಯದು
ಅಂಥಾ ಭ್ರಷ್ಟರ ಏನೂ ಮಾಡದೆ || ಎಲ್ಲಿ ||

ನಮ್ಮ ದೇವರೇ ನಮ್ಮ ಧರ್ಮವೇ
ಹೆಚ್ಚಿನದೆಂದು ಕೊಚ್ಚಿ ಕೊಳ್ಳುತ
ಬೇರೆಯ ಜನರನು ಕೊಲ್ಲಲು ಹೇಸದ
ನರಹುಳುಗಳನೀ ನೆಲದಲಿ ಹುಟ್ಟಿಸಿ || ಎಲ್ಲಿ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವರಿ
Next post ಚಿಂತಕ

ಸಣ್ಣ ಕತೆ

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…