Home / ಕವನ / ಕವಿತೆ / ನಾವು ಮನುಜರು

ನಾವು ಮನುಜರು

ನಾವು ಸಾಮಾನ್ಯರು
ಕಡಿಯುತ್ತೇವೆ ಕುಡಿಯುತ್ತೇವೆ
ತಿನ್ನುತ್ತೇವೆ ಮಲಗುತ್ತೇವೆ
ಬಾಧೆಗಳಿಂದ ಮುಲುಗುತ್ತೇವೆ
ಹಸಿಯುತ್ತೇವೆ ಹುಸಿಯುತ್ತೇವೆ
ನುಸಿಯುತ್ತೇವೆ ಮಸೆಯುತ್ತೇವೆ
ಸಂದುಗಳಲ್ಲಿ ನುಸುಳುತ್ತೇವೆ
ಸಿಕ್ಕಷ್ಟು ಕಬಳಿಸುತ್ತೇವೆ
ಸಿಗಲಾರದ್ದಕ್ಕೆ ಹಳಹಳಿಸುತ್ತೇವೆ

ಕನಸುಗಳ ಹೆಣೆಯುತ್ತೇವೆ
ನನಸಾಗದೆ ದಣಿಯುತ್ತೇವೆ
ಪರದೆಗಳಲ್ಲಿ ಕುಣಿಯುತ್ತೇವೆ
ಕಾಣದುದರ ಬೆದರಿಕೆಗೆ ಮಣಿಯುತ್ತೇವೆ

ಹೊರಗೆ ಬಂದು ಬೀದಿಗಳಲ್ಲಿ
ನಿಸೂರಾಗಿ ನಡೆಯುತ್ತೇವೆ
ಗುಂಪಿನಲ್ಲಿ ಗೋವಿಂದಾ
ಸೀದಾ ಸಾದಾ ಸಾಚಾತನಗಳಿಗೆ
ನಾವೇ ಹಕ್ಕುದಾರರು
ನ್ಯಾಯ ನೀತಿ ಧರ್ಮಗಳಿಗೆ
ನಾವೇ ವಾರಸುದಾರರು
ಪೋಜು ಕೊಡುವ ಸರದಾರರು
ಪರರನ್ನು ಹೇಸುತ್ತೇವೆ
ಅಲ್ಲಿ ಇಲ್ಲಿ ಮೂಸುತ್ತೇವೆ
ಹಣಕ್ಕೆ ಹಡದಿ ಹಾಸುತ್ತೇವೆ
ಕಂಡವರ ಬೆಳೆಯ ಮೇಸುತ್ತೇವೆ
ಕಂಡು ಕೇಳಿದರೆ ಇಲ್ಲೆಂದು ವಾದಿಸುತ್ತೇವೆ
ರುಚಿಗಳನ್ನೇ ಬಯಸುತ್ತೇವೆ

ವಾಸನೆಗಳ ಹಿಂಬಾಲಿಸುತ್ತೇವೆ
ಕಡುಕೊಂಡು ಬಿದ್ದಾಗ ಹಲ್ಲು ಕಿಸಿಯುತ್ತೇವೆ
ಹೊರಳುತ್ತೇವೆ ನರಳುತ್ತೇವೆ

ಯಾರಿಗೆ ಬೇಕು ಕಷ್ಟ ನಷ್ಟ
ಸಾವು ನೋವು ಅನಿಷ್ಟ
ಅವುಗಳಿಂದ ದೂರ ಓಡುತ್ತೇವೆ
ಮೈ ಉಳಿಸಲು ಗೊಣಗಾಡುತ್ತೇವೆ
ಜೀವ ಉಳಿಸಲು ಹೆಣಗಾಡುತ್ತೇವೆ

ಚಟ ವ್ಯಸನಗಳು ನಮ್ಮ ಜೀವ ಬಂಧುಗಳು
ಅದಕ್ಕಾಗಿ ಬಿಟ್ಟೇವು ಜೀವ
ಸೋಮಾರಿತನ ಸುಳ್ಳು ತಗುಲುಗಳು
ನಮ್ಮ ಜಾಯಮಾನ
ಅದರಲ್ಲೇ ಸಾಗುತಿದೆ ದಿನಮಾನ

ಸಣ್ಣ ಸಣ್ಣದಕೆ ಸೆಣಸುತ್ತೇವೆ
ಕಚ್ಚಾಡುತ್ತೇವೆ ಬಡಿದಾಡುತ್ತೇವೆ
ನಾಯಿಗಳೂ ನಾಚುವಂತೆ
ಪುಕ್ಕಟೆ ಸಿಕ್ಕರೆ ಮುಕ್ಕುರುತ್ತೇವೆ
ಹರಕೊಂಡು ತಿನ್ನುತ್ತೇವೆ
ಕಾಗೆಗಳೂ ಬೆದರುವಂತೆ

ಏನೇನೂ ಕಿಸಿದಿಲ್ಲವಾದರೂ
ಮಾನ ಸನ್ಮಾನ ಪದವಿ ಪ್ರಶಸ್ತಿಗಳಿಗೆ
ಕೈ ಚಾಚುತ್ತೇವೆ ಬಾಚುತ್ತೇವೆ
ಪ್ರಚಾರ ನಮಗಲ್ಲದೆ ಇನ್ನಾರಿಗೆ
ಗೆದ್ದೆತ್ತಿನ ಬಾಲ ಹಿಡಿದು ಹಾಕಿ ಜೈಕಾರ
ಬೇಳೆ ಬೇಯಿಸಿಕೊಳ್ಳುತ್ತೇವೆ
ಗಾಳಿ ಬಂದಂತೆ ತೂರಿಕೊಳುತ್ತೇವೆ

ಹೆರರ ಚಪ್ಪರ ಉರಿಸಿ
ಮೈಕೈ ಕಾಯಿಸಿಕೊಳ್ಳುತ್ತೇವೆ
ಹೇಳುತ್ತಾ ಹೋದರೆ ನಮ್ಮ ಕಥನ
ಸಣ್ಣವು ಭಾರತ ರಾಮಾಯಣ
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...