ನಾವು ಮನುಜರು

ನಾವು ಸಾಮಾನ್ಯರು
ಕಡಿಯುತ್ತೇವೆ ಕುಡಿಯುತ್ತೇವೆ
ತಿನ್ನುತ್ತೇವೆ ಮಲಗುತ್ತೇವೆ
ಬಾಧೆಗಳಿಂದ ಮುಲುಗುತ್ತೇವೆ
ಹಸಿಯುತ್ತೇವೆ ಹುಸಿಯುತ್ತೇವೆ
ನುಸಿಯುತ್ತೇವೆ ಮಸೆಯುತ್ತೇವೆ
ಸಂದುಗಳಲ್ಲಿ ನುಸುಳುತ್ತೇವೆ
ಸಿಕ್ಕಷ್ಟು ಕಬಳಿಸುತ್ತೇವೆ
ಸಿಗಲಾರದ್ದಕ್ಕೆ ಹಳಹಳಿಸುತ್ತೇವೆ

ಕನಸುಗಳ ಹೆಣೆಯುತ್ತೇವೆ
ನನಸಾಗದೆ ದಣಿಯುತ್ತೇವೆ
ಪರದೆಗಳಲ್ಲಿ ಕುಣಿಯುತ್ತೇವೆ
ಕಾಣದುದರ ಬೆದರಿಕೆಗೆ ಮಣಿಯುತ್ತೇವೆ

ಹೊರಗೆ ಬಂದು ಬೀದಿಗಳಲ್ಲಿ
ನಿಸೂರಾಗಿ ನಡೆಯುತ್ತೇವೆ
ಗುಂಪಿನಲ್ಲಿ ಗೋವಿಂದಾ
ಸೀದಾ ಸಾದಾ ಸಾಚಾತನಗಳಿಗೆ
ನಾವೇ ಹಕ್ಕುದಾರರು
ನ್ಯಾಯ ನೀತಿ ಧರ್ಮಗಳಿಗೆ
ನಾವೇ ವಾರಸುದಾರರು
ಪೋಜು ಕೊಡುವ ಸರದಾರರು
ಪರರನ್ನು ಹೇಸುತ್ತೇವೆ
ಅಲ್ಲಿ ಇಲ್ಲಿ ಮೂಸುತ್ತೇವೆ
ಹಣಕ್ಕೆ ಹಡದಿ ಹಾಸುತ್ತೇವೆ
ಕಂಡವರ ಬೆಳೆಯ ಮೇಸುತ್ತೇವೆ
ಕಂಡು ಕೇಳಿದರೆ ಇಲ್ಲೆಂದು ವಾದಿಸುತ್ತೇವೆ
ರುಚಿಗಳನ್ನೇ ಬಯಸುತ್ತೇವೆ

ವಾಸನೆಗಳ ಹಿಂಬಾಲಿಸುತ್ತೇವೆ
ಕಡುಕೊಂಡು ಬಿದ್ದಾಗ ಹಲ್ಲು ಕಿಸಿಯುತ್ತೇವೆ
ಹೊರಳುತ್ತೇವೆ ನರಳುತ್ತೇವೆ

ಯಾರಿಗೆ ಬೇಕು ಕಷ್ಟ ನಷ್ಟ
ಸಾವು ನೋವು ಅನಿಷ್ಟ
ಅವುಗಳಿಂದ ದೂರ ಓಡುತ್ತೇವೆ
ಮೈ ಉಳಿಸಲು ಗೊಣಗಾಡುತ್ತೇವೆ
ಜೀವ ಉಳಿಸಲು ಹೆಣಗಾಡುತ್ತೇವೆ

ಚಟ ವ್ಯಸನಗಳು ನಮ್ಮ ಜೀವ ಬಂಧುಗಳು
ಅದಕ್ಕಾಗಿ ಬಿಟ್ಟೇವು ಜೀವ
ಸೋಮಾರಿತನ ಸುಳ್ಳು ತಗುಲುಗಳು
ನಮ್ಮ ಜಾಯಮಾನ
ಅದರಲ್ಲೇ ಸಾಗುತಿದೆ ದಿನಮಾನ

ಸಣ್ಣ ಸಣ್ಣದಕೆ ಸೆಣಸುತ್ತೇವೆ
ಕಚ್ಚಾಡುತ್ತೇವೆ ಬಡಿದಾಡುತ್ತೇವೆ
ನಾಯಿಗಳೂ ನಾಚುವಂತೆ
ಪುಕ್ಕಟೆ ಸಿಕ್ಕರೆ ಮುಕ್ಕುರುತ್ತೇವೆ
ಹರಕೊಂಡು ತಿನ್ನುತ್ತೇವೆ
ಕಾಗೆಗಳೂ ಬೆದರುವಂತೆ

ಏನೇನೂ ಕಿಸಿದಿಲ್ಲವಾದರೂ
ಮಾನ ಸನ್ಮಾನ ಪದವಿ ಪ್ರಶಸ್ತಿಗಳಿಗೆ
ಕೈ ಚಾಚುತ್ತೇವೆ ಬಾಚುತ್ತೇವೆ
ಪ್ರಚಾರ ನಮಗಲ್ಲದೆ ಇನ್ನಾರಿಗೆ
ಗೆದ್ದೆತ್ತಿನ ಬಾಲ ಹಿಡಿದು ಹಾಕಿ ಜೈಕಾರ
ಬೇಳೆ ಬೇಯಿಸಿಕೊಳ್ಳುತ್ತೇವೆ
ಗಾಳಿ ಬಂದಂತೆ ತೂರಿಕೊಳುತ್ತೇವೆ

ಹೆರರ ಚಪ್ಪರ ಉರಿಸಿ
ಮೈಕೈ ಕಾಯಿಸಿಕೊಳ್ಳುತ್ತೇವೆ
ಹೇಳುತ್ತಾ ಹೋದರೆ ನಮ್ಮ ಕಥನ
ಸಣ್ಣವು ಭಾರತ ರಾಮಾಯಣ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೆಂಡತಿ
Next post ಉಸ್ತಾದರು

ಸಣ್ಣ ಕತೆ

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ತಿಮ್ಮರಾಯಪ್ಪನ ಬುದ್ಧಿವಾದ

    ಪ್ರಕರಣ ೧೧ ಮಾರನೆಯ ದಿನ ತನ್ನ ಮೀಟಂಗ್ ಕೆಲಸವನ್ನು ಮುಗಿಸಿಕೊಂಡು ತಂಗಿಯ ಮನೆಯಲ್ಲಿ ಊಟಮಾಡಿಕೊಂಡು ರಾತ್ರಿ ಎಂಟು ಗಂಟೆಗೆ ತಿಮ್ಮರಾಯಪ್ಪನ ಮನೆಗೆ ರಂಗಣ್ಣ ಹೊರಟನು. ಆ ದಿನ… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…