ಕವಿತೆಗಳು ಮೊಳೆಯಲಾರೆವು

ಆಗಸದೊಳಗೆಲ್ಲಿಂದಲೋ ನೆಲದಾಳದಿಂದಲೋ
ಕಿರಣವೊಂದು ತೇಲಿ ಬಂದು ಭ್ರೂಣವಾಗುತ್ತದೆ
ಕಣ್ಣು ತಲೆ ಕೈಕಾಲು ಮೂಡುವ ಮುನ್ನವೇ
ಗರ್ಭಪಾತ ಮತ್ತೊಂದು ಕವಿತೆಯ ಸಾವು
ಒತ್ತಡಗಳ ನಡುವೆ ಹೇಗೋ ಉಳಿದು
ಕೆಲವು ಒಂಭತ್ತು ತುಂಬುವ ಮೊದಲೇ
ಹೊರಬರುತ್ತವೆ ಅಪೂರ್ಣ
ಅಂಗಾಂಗಗಳ ವಿರೂಪ ಕುರೂಪಗಳೊಡನೆ
ಕುರುಡೋ ಕುಂಟೋ ಹೆಳವೋ ಕಿವುಡೋ
ಅರ್ಧಂಬರ್ಧ ಹಾಡುಗಳು ಗುಣುಗುಟ್ಟುತ್ತವೆ
ಮೇಲಿಂದಿಳಿಯದೆ ಮಳೆ ಬರಡಾಗುತ್ತಿದೆ ಇಳೆ
ಬಿರುಕು ಬಿಟ್ಟು ಬೆಂಡಾಗಿ ರಣ ರಣ ಬಿಸಿಲು
ಮೊಳಕೆಗಳಿಗೆ ಉಳಿಗಾಲವಿಲ್ಲ
ಮೊಳೆಯಲೇ ಅವಕಾಶವಿಲ್ಲ
ಇನ್ನು ಹಸಿರ ತಂಪೆಲ್ಲಿ ಹೂಗಳ ಕಂಪೆಲ್ಲಿ
ಇಲ್ಲಿ ಕವಿತೆಗಳು ಮೊಳೆಯಲಾರವು
ಗರ್ಭದೊಳಗಿಂದ ಹೊರಬರಲಾರವು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೆಂಡತಿ
Next post ಕಾರಂತರು ಹೇಳಿದ್ದು

ಸಣ್ಣ ಕತೆ

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

cheap jordans|wholesale air max|wholesale jordans|wholesale jewelry|wholesale jerseys