ಕಣಜಿರಿಗೆ ಹುಳು ಮತ್ತು ನಾನು

ಹಿತ್ತಲ ಬಾಗಿಲು ಬಹು
ದಿನಗಳಿಂದ ಮುಚ್ಚಿಯೇ ಇತ್ತು
ಇಂದು ಅದೇಕೋ ಬಿಸಿಲು
ಹೆಚ್ಚಾಯಿತೆಂದು ತೆಗೆಯಬೇಕಾಯಿತು

ಉಸಿರುಗಟ್ಟಿದಂತಿದ್ದ ಆ
ಕೋಣೆಯೊಳಗೆ ಸ್ವಲ್ಪ ಗಾಳಿ
ಸ್ಚಲ್ಪ ಬೆಳಕು ಸುಳಿದಾಡಿದಂತೆನಿಸಿ
ಜೀವ ನಿರಾಳವಾಯ್ತು

ಕಂಪ್ಯೂಟರ್ ಪರದೆಯನ್ನೇ
ವಿಶ್ವವೆಂಬಂತೆ ದಿಟ್ಟಿಸಿ
ಸೋತ ಕಣ್ಣುಗಳಿಗೆ
ಹೊಸ ಬೆಳಕು ಹೂಳೆದಂತಾಯ್ತು

ಗಂಟು ಹಿಡಿದ ಕಾಲುಗಳಿಗೆ
ನಡಿಗೆಯ ಕಲಿಸುವಂತೆ ಮೆಲ್ಲಗೆ
ಹೆಜ್ಜೆಗಳಿಟ್ಟು ಹೊರನಡೆದು
ಕಿಟಕಿಯೆಡೆಗೆ ಮುಖ ಮಾಡಿದೆ

ಹೊಸತೊಂದು ಲೋಕಕ್ಕೆ ಬಂದವನಂತೆ
ದಿಗಂತವನೊಮ್ಮೆ ದಿಟ್ಟಿಸಿ
ಮರಕೆ ಸುತ್ತಿಕೊಂಡಿದ್ದ ಹಸಿರು
ಬಳ್ಳಿಯನ್ನೊಮ್ಮೆ ಕಣ್ತುಂಬಿಸಿಕೊಂಡೆ

ಕಿಟಕಿ ಸರಳುಗಳಿಗೆ ಕಣಜಿರಿಗೆ
ಹುಳುವೊಂದು ಗೂಡು ಕಟ್ಟುತ್ತಿತ್ತು
ಅದರತ್ತ ನೋಡಿದ್ದೇ ತಪ್ಪಾಯ್ತೆಂಬಂತೆ
ಬಾಲ ನಿಗುರಿಸಿಕೊಂಡು ಹಾರಿ ಹೋಯಿತು

ಅದು ಅಲ್ಲಿಗೆ ತಿರುಗಿ ಬರುವುದೆಂದು
ಗೂಡು ಕಟ್ಟುವುದೆಂದು ಕಾದೆ
ಬಂದದ್ದು ಕಾಣಲಿಲ್ಲ, ಮರುದಿನವೂ
ಬಂತೋ ಬಾರಲಿಲ್ಲವೋ ತಿಳಿಯಲಿಲ್ಲ

ಗಣಕಯಂತ್ರದ ಕೀಲಿ ಮಣೆಯ ಮೇಲೆ
ಬಿಟ್ಟೂ ಬಿಡದೇ ನರ್ತಿಸುವ ಬೆರಳುಗಳು
ಮನವೇಕೋ ಹಾರಿ ಹೋದ
ಕಣಜಿರಿಗೆ ಹುಳುವನ್ನೇ ನೆನೆಯುತ್ತಿದೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕೆಸರಲಿ ಕಾಯುವ ಕಮಲದ ಕೆನ್ನೆಗೆ
Next post ಹಸಿರು ಬಿಸಿಲು

ಸಣ್ಣ ಕತೆ

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…